<p><strong>ನವದೆಹಲಿ:</strong> ಗಾಯಕ ಟಿ.ಎಂ. ಕೃಷ್ಣ ಅವರನ್ನು ‘ಸಂಗೀತ ಕಲಾನಿಧಿ ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ’ಗೆ ಭಾಜನರಾದವರು ಎಂದು ಪರಿಗಣಿಸುವಂತಿಲ್ಲ ಎಂಬ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿದೆ.</p><p>ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ. ಶ್ರೀನಿವಾಸನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಸುಬ್ಬುಲಕ್ಷ್ಮಿ ಅವರಿಗೆ ಅಗೌರವ ಸೂಚಿಸುವಂತಹ ಹೇಳಿಕೆಗಳನ್ನು ಕೃಷ್ಣ ಅವರು ನೀಡಿದ್ದಾರೆ ಎಂದು ಶ್ರೀನಿವಾಸನ್ ಅವರು ಅರ್ಜಿಯಲ್ಲಿ ದೂರಿದ್ದಾರೆ.</p><p>‘ಸುಬ್ಬುಲಕ್ಷ್ಮಿ ಅವರು ಸಂಗೀತಪ್ರಿಯರ ನಡುವೆ ಎಲ್ಲೆಡೆ ಹೊಂದಿರುವ ಗೌರವವು ನ್ಯಾಯಾಲಯಕ್ಕೆ ತಿಳಿದಿದೆ. ಅವರು ಅತ್ಯಂತ ಪ್ರಸಿದ್ಧರಾದ ಗಾಯಕರಲ್ಲಿ ಒಬ್ಬರು. 2004ರ ಡಿಸೆಂಬರ್ನಲ್ಲಿಯೇ ಅವರು ಮೃತಪಟ್ಟಿದ್ದಾರಾದರೂ ಅವರ ಮಧುರ ಧ್ವನಿಯು ಅಭಿಮಾನಿಗಳ ಪಾಲಿಗೆ ಬಹಳ ಆನಂದ ತರುತ್ತಿದೆ’ ಎಂದು ಪೀಠವು ಹೇಳಿದೆ.</p><p>‘ಪ್ರಶಸ್ತಿಯನ್ನು ಈಗಾಗಲೇ ಪ್ರದಾನ ಮಾಡಿ ಆಗಿರುವ ಕಾರಣ ಮಧ್ಯಂತರ ಕ್ರಮವಾಗಿ, ಕೃಷ್ಣ ಅವರನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತ ಎಂದು ಪರಿಗಣಿಸಬಾರದು’ ಎಂದು ಪೀಠವು ಆದೇಶದಲ್ಲಿ ಹೇಳಿದೆ.</p><p>ಕೃಷ್ಣ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುವುದನ್ನು ತಡೆಹಿಡಿಯಬೇಕು ಎಂಬ ಮಧ್ಯಂತರ ಆದೇಶವನ್ನು ಮದ್ರಾಸ್ ಹೈಕೋರ್ಟ್ ಅನೂರ್ಜಿತಗೊಳಿಸಿತ್ತು. ಹೈಕೋರ್ಟ್ನ ಈ ಕ್ರಮವನ್ನು ಶ್ರೀನಿವಾಸನ್ ಅವರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.</p><p>ಸುಪ್ರೀಂ ಕೋರ್ಟ್ ಪೀಠವು ಕೃಷ್ಣ ಅವರಿಗೆ, ಚೆನ್ನೈ ಸಂಗೀತ ಅಕಾಡೆಮಿ ಹಾಗೂ ಪ್ರಶಸ್ತಿಯ ಪ್ರಾಯೋಜಕರಿಗೆ ನೋಟಿಸ್ ಜಾರಿಗೆ ಸೂಚಿಸಿದೆ, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ.</p><p>ಸುಬ್ಬುಲಕ್ಷ್ಮಿ ಅವರ ಹೆಸರು ಹಾಳುಮಾಡುವ ರೀತಿಯಲ್ಲಿ ಕೃಷ್ಣ ಅವರು ಲೇಖನ ಬರೆದಿದ್ದಾರೆ ಎಂಬ ಆರೋಪ ಇದ್ದು, ಇದೊಂದು ಅಸಾಮಾನ್ಯ ಪ್ರಕರಣ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್ ಅವರು ವಿವರಿಸಿದ ನಂತರ ಪೀಠವು ಈ ಆದೇಶ ನೀಡಿದೆ.</p><p>ಕೃಷ್ಣ ಅವರು ಸುಬ್ಬುಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ‘ಕೆಟ್ಟ, ನಿಂದನೆಯ ಹಾಗೂ ಮಾನಹಾನಿ ಉಂಟುಮಾಡುವಂತಹ’ ದಾಳಿ ನಡೆಸಿದ್ದಾರೆ, ಸುಬ್ಬುಲಕ್ಷ್ಮಿ ಅವರ ಹೆಸರಿಗೆ ಹಾನಿ ಉಂಟುಮಾಡಿದ್ದಾರೆ. ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಶ್ರೀನಿವಾಸನ್ ಅವರು ಕೋರಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಗಾಯಕ ಟಿ.ಎಂ. ಕೃಷ್ಣ ಅವರನ್ನು ‘ಸಂಗೀತ ಕಲಾನಿಧಿ ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ’ಗೆ ಭಾಜನರಾದವರು ಎಂದು ಪರಿಗಣಿಸುವಂತಿಲ್ಲ ಎಂಬ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿದೆ.</p><p>ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ. ಶ್ರೀನಿವಾಸನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಸುಬ್ಬುಲಕ್ಷ್ಮಿ ಅವರಿಗೆ ಅಗೌರವ ಸೂಚಿಸುವಂತಹ ಹೇಳಿಕೆಗಳನ್ನು ಕೃಷ್ಣ ಅವರು ನೀಡಿದ್ದಾರೆ ಎಂದು ಶ್ರೀನಿವಾಸನ್ ಅವರು ಅರ್ಜಿಯಲ್ಲಿ ದೂರಿದ್ದಾರೆ.</p><p>‘ಸುಬ್ಬುಲಕ್ಷ್ಮಿ ಅವರು ಸಂಗೀತಪ್ರಿಯರ ನಡುವೆ ಎಲ್ಲೆಡೆ ಹೊಂದಿರುವ ಗೌರವವು ನ್ಯಾಯಾಲಯಕ್ಕೆ ತಿಳಿದಿದೆ. ಅವರು ಅತ್ಯಂತ ಪ್ರಸಿದ್ಧರಾದ ಗಾಯಕರಲ್ಲಿ ಒಬ್ಬರು. 2004ರ ಡಿಸೆಂಬರ್ನಲ್ಲಿಯೇ ಅವರು ಮೃತಪಟ್ಟಿದ್ದಾರಾದರೂ ಅವರ ಮಧುರ ಧ್ವನಿಯು ಅಭಿಮಾನಿಗಳ ಪಾಲಿಗೆ ಬಹಳ ಆನಂದ ತರುತ್ತಿದೆ’ ಎಂದು ಪೀಠವು ಹೇಳಿದೆ.</p><p>‘ಪ್ರಶಸ್ತಿಯನ್ನು ಈಗಾಗಲೇ ಪ್ರದಾನ ಮಾಡಿ ಆಗಿರುವ ಕಾರಣ ಮಧ್ಯಂತರ ಕ್ರಮವಾಗಿ, ಕೃಷ್ಣ ಅವರನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತ ಎಂದು ಪರಿಗಣಿಸಬಾರದು’ ಎಂದು ಪೀಠವು ಆದೇಶದಲ್ಲಿ ಹೇಳಿದೆ.</p><p>ಕೃಷ್ಣ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುವುದನ್ನು ತಡೆಹಿಡಿಯಬೇಕು ಎಂಬ ಮಧ್ಯಂತರ ಆದೇಶವನ್ನು ಮದ್ರಾಸ್ ಹೈಕೋರ್ಟ್ ಅನೂರ್ಜಿತಗೊಳಿಸಿತ್ತು. ಹೈಕೋರ್ಟ್ನ ಈ ಕ್ರಮವನ್ನು ಶ್ರೀನಿವಾಸನ್ ಅವರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.</p><p>ಸುಪ್ರೀಂ ಕೋರ್ಟ್ ಪೀಠವು ಕೃಷ್ಣ ಅವರಿಗೆ, ಚೆನ್ನೈ ಸಂಗೀತ ಅಕಾಡೆಮಿ ಹಾಗೂ ಪ್ರಶಸ್ತಿಯ ಪ್ರಾಯೋಜಕರಿಗೆ ನೋಟಿಸ್ ಜಾರಿಗೆ ಸೂಚಿಸಿದೆ, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ.</p><p>ಸುಬ್ಬುಲಕ್ಷ್ಮಿ ಅವರ ಹೆಸರು ಹಾಳುಮಾಡುವ ರೀತಿಯಲ್ಲಿ ಕೃಷ್ಣ ಅವರು ಲೇಖನ ಬರೆದಿದ್ದಾರೆ ಎಂಬ ಆರೋಪ ಇದ್ದು, ಇದೊಂದು ಅಸಾಮಾನ್ಯ ಪ್ರಕರಣ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್ ಅವರು ವಿವರಿಸಿದ ನಂತರ ಪೀಠವು ಈ ಆದೇಶ ನೀಡಿದೆ.</p><p>ಕೃಷ್ಣ ಅವರು ಸುಬ್ಬುಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ‘ಕೆಟ್ಟ, ನಿಂದನೆಯ ಹಾಗೂ ಮಾನಹಾನಿ ಉಂಟುಮಾಡುವಂತಹ’ ದಾಳಿ ನಡೆಸಿದ್ದಾರೆ, ಸುಬ್ಬುಲಕ್ಷ್ಮಿ ಅವರ ಹೆಸರಿಗೆ ಹಾನಿ ಉಂಟುಮಾಡಿದ್ದಾರೆ. ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಶ್ರೀನಿವಾಸನ್ ಅವರು ಕೋರಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>