‘1932ರಲ್ಲಿ ಬದನವಾಳುವಿನಲ್ಲಿ ಪ್ರಾರಂಭವಾದ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಭೇಟಿ ನೀಡಿದ್ದಾರೆ. ಈ ಗ್ರಾಮಕ್ಕೆ ಮಹಾತ್ಮ ಗಾಂಧಿ ಅವರು 1927 ಹಾಗೂ 1932ರಲ್ಲಿ ಭೇಟಿ ನೀಡಿದ್ದರು, ಅಲ್ಲದೇ ಇಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಾಪಿಸಲು ಸಹಾಯ ಕೂಡ ಮಾಡಿದ್ದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.