‘ಜಲ ಜೀವನ್ ಮಿಷನ್‘, ‘ಪಿಎಂ ಆವಾಸ್ ಯೋಜನೆ’ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ‘ಇಂಡಿಯಾ’ ಮೈತ್ರಿಕೂಟವೂ ಬಿಡುತ್ತಿಲ್ಲ ಎಂದೂ ಅವರು ಆರೋಪಿಸಿದರು. ಅದೊಂದು ಅಭಿವೃದ್ಧಿ ವಿರೋಧಿ, ಜನವಿರೋಧಿ ಮೈತ್ರಿಕೂಟ ಎಂದು ಅವರು ಕಿಡಿಕಾರಿದರು.
‘ಇತರರ ಎಲ್ಲಾ ಭರವಸೆಗಳು ಮುಗಿಯುವಾಗ ಮೋದಿ ಗ್ಯಾರಂಟಿ ಆರಂಭವಾಗುತ್ತದೆ. ಸಿಂದ್ರಿ ರಸಗೊಬ್ಬರ ವಿಭಾಗ ಹಾಗೂ ಉತ್ತರ ಕರಣ್ಪುರ ವಿದ್ಯುತ್ ಯೋಜನೆ ಮುಂತಾದವುಗಳು ಮೋದಿ ಗ್ಯಾರಂಟಿ ಈಡೇರಿದ ಉದಾಹರಣೆಗಳು’ ಎಂದು ಅವರು ಹೇಳಿದರು.