<p><strong>ಬಿಜ್ನೋರ್, (ಉತ್ತರ ಪ್ರದೇಶ):</strong> ಬಾಲಿವುಡ್ ನಟ ಮುಷ್ತಾಕ್ ಖಾನ್ ಅವರನ್ನು ಅಪಹರಿಸಲಾಗಿದ್ದು, ಒಂದು ದಿನ ಅಪಹರಣಕಾರರ ಹಿಡಿತದಲ್ಲಿದ್ದ ನಟ ಸ್ವಯಂ ಪಾರಾಗಿದ್ದಾರೆ. ‘ವೆಲ್ಕಂ’, ‘ಸ್ತ್ರೀ–2’ ಚಿತ್ರಗಳಲ್ಲಿ ಮುಷ್ತಾಕ್ ಖಾನ್ ನಟಿಸಿದ್ದರು.</p>.<p>ಖಾನ್ ಅವರ ಕಾರ್ಯಕ್ರಮಗಳ ವ್ಯವಸ್ಥಾಪಕರಾಗಿರುವ ಶಿವಂ ಯಾದವ್ ಈ ಕುರಿತು ಬಿಜ್ನೋರ್ ಕೊಟ್ವಾಲಿ ಠಾಣೆಗೆ ದೂರು ನೀಡಿದ್ದಾರೆ.</p>.<p>ರಾಹುಲ್ ಸೈನಿ ಎಂಬುವವರು ಅ. 15ರಂದು, ಮೀರತ್ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿದ ಖಾನ್ರನ್ನು ಆಹ್ವಾನಿಸಿದ್ದು, ಮುಂಗಡವಾಗಿ ಹಣ ನೀಡಿದ್ದರು. ವಿಮಾನದ ಟಿಕೆಟ್ ಅನ್ನೂ ಕಳುಹಿಸಿದ್ದರು. </p>.<p>ಮುಂಬೈನಿಂದ ದೆಹಲಿಗೆ ಬಂದಿಳಿದ ನಟನನ್ನು ಕಾರಿನಲ್ಲಿ ಕರೆದೊಯ್ಯಲಾಗಿದ್ದು, ಆ ಕಾರಿನಲ್ಲಿ ಇತರ ಇಬ್ಬರಿದ್ದರು. ಮಾರ್ಗದಲ್ಲಿ ಮತ್ತೊಂದು ವಾಹನಕ್ಕೆ ಹತ್ತಿಸಿದರು. ಖಾನ್ ಈ ಹಂತದಲ್ಲಿ ಪ್ರತಿಭಟಿಸಿದಾಗ ಜೀವ ಬೆದರಿಕೆಯನ್ನು ಒಡ್ಡಲಾಗಿತ್ತು. </p>.<p>ದೂರಿನ ಪ್ರಕಾರ, ದುಷ್ಕರ್ಮಿಗಳ ಹಿಡಿತದಲ್ಲಿದ್ದ ಅವಧಿಯಲ್ಲಿ ಮೊಬೈಲ್ ಫೋನ್ ಬಳಸಿಕೊಂಡು ₹2 ಲಕ್ಷ ಸುಲಿಗೆ ಮಾಡಿದ್ದರು. ನ.21ರಂದು ನಟ ಸ್ವಯಂ ಪಾರಾಗಿದ್ದು, ಮುಂಬೈಗೆ ಮರಳಿದ್ದಾರೆ. ಪ್ರಕರಣದ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.</p>.<p>ವಾರದ ಹಿಂದೆ, ಹಾಸನಟ ಸುನಿಲ್ ಪಾಲ್ ಕೂಡ ಉತ್ತರಾಖಂಡಕ್ಕೆ ಹೋಗುವ ಮಾರ್ಗದಲ್ಲಿ ತನ್ನನ್ನು ಅಪಹರಿಸಲಾಗಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದರು. ₹20 ಲಕ್ಷ ನೀಡಲು ಒತ್ತಾಯಿಸಿದ್ದು, ₹8 ಲಕ್ಷ ಪಡೆದು ಬಿಡುಗಡೆ ಮಾಡಿದ್ದರು ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜ್ನೋರ್, (ಉತ್ತರ ಪ್ರದೇಶ):</strong> ಬಾಲಿವುಡ್ ನಟ ಮುಷ್ತಾಕ್ ಖಾನ್ ಅವರನ್ನು ಅಪಹರಿಸಲಾಗಿದ್ದು, ಒಂದು ದಿನ ಅಪಹರಣಕಾರರ ಹಿಡಿತದಲ್ಲಿದ್ದ ನಟ ಸ್ವಯಂ ಪಾರಾಗಿದ್ದಾರೆ. ‘ವೆಲ್ಕಂ’, ‘ಸ್ತ್ರೀ–2’ ಚಿತ್ರಗಳಲ್ಲಿ ಮುಷ್ತಾಕ್ ಖಾನ್ ನಟಿಸಿದ್ದರು.</p>.<p>ಖಾನ್ ಅವರ ಕಾರ್ಯಕ್ರಮಗಳ ವ್ಯವಸ್ಥಾಪಕರಾಗಿರುವ ಶಿವಂ ಯಾದವ್ ಈ ಕುರಿತು ಬಿಜ್ನೋರ್ ಕೊಟ್ವಾಲಿ ಠಾಣೆಗೆ ದೂರು ನೀಡಿದ್ದಾರೆ.</p>.<p>ರಾಹುಲ್ ಸೈನಿ ಎಂಬುವವರು ಅ. 15ರಂದು, ಮೀರತ್ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿದ ಖಾನ್ರನ್ನು ಆಹ್ವಾನಿಸಿದ್ದು, ಮುಂಗಡವಾಗಿ ಹಣ ನೀಡಿದ್ದರು. ವಿಮಾನದ ಟಿಕೆಟ್ ಅನ್ನೂ ಕಳುಹಿಸಿದ್ದರು. </p>.<p>ಮುಂಬೈನಿಂದ ದೆಹಲಿಗೆ ಬಂದಿಳಿದ ನಟನನ್ನು ಕಾರಿನಲ್ಲಿ ಕರೆದೊಯ್ಯಲಾಗಿದ್ದು, ಆ ಕಾರಿನಲ್ಲಿ ಇತರ ಇಬ್ಬರಿದ್ದರು. ಮಾರ್ಗದಲ್ಲಿ ಮತ್ತೊಂದು ವಾಹನಕ್ಕೆ ಹತ್ತಿಸಿದರು. ಖಾನ್ ಈ ಹಂತದಲ್ಲಿ ಪ್ರತಿಭಟಿಸಿದಾಗ ಜೀವ ಬೆದರಿಕೆಯನ್ನು ಒಡ್ಡಲಾಗಿತ್ತು. </p>.<p>ದೂರಿನ ಪ್ರಕಾರ, ದುಷ್ಕರ್ಮಿಗಳ ಹಿಡಿತದಲ್ಲಿದ್ದ ಅವಧಿಯಲ್ಲಿ ಮೊಬೈಲ್ ಫೋನ್ ಬಳಸಿಕೊಂಡು ₹2 ಲಕ್ಷ ಸುಲಿಗೆ ಮಾಡಿದ್ದರು. ನ.21ರಂದು ನಟ ಸ್ವಯಂ ಪಾರಾಗಿದ್ದು, ಮುಂಬೈಗೆ ಮರಳಿದ್ದಾರೆ. ಪ್ರಕರಣದ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.</p>.<p>ವಾರದ ಹಿಂದೆ, ಹಾಸನಟ ಸುನಿಲ್ ಪಾಲ್ ಕೂಡ ಉತ್ತರಾಖಂಡಕ್ಕೆ ಹೋಗುವ ಮಾರ್ಗದಲ್ಲಿ ತನ್ನನ್ನು ಅಪಹರಿಸಲಾಗಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದರು. ₹20 ಲಕ್ಷ ನೀಡಲು ಒತ್ತಾಯಿಸಿದ್ದು, ₹8 ಲಕ್ಷ ಪಡೆದು ಬಿಡುಗಡೆ ಮಾಡಿದ್ದರು ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>