‘ಪಿಸಿಐ ಕೇವಲ ನೀತಿಸಂಹಿತೆಗಳನ್ನು ಹೇಳುತ್ತದೆ. ಅವನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಿ ಎಂದು ಹೇಳುವುದಿಲ್ಲ. ಪಿಸಿಐ ಮಾರ್ಗಸೂಚಿಗಳಿಗೆ ಅಷ್ಟೊಂದು ಪ್ರಾಮುಖ್ಯವನ್ನು ಹೇಗೆ ನೀಡುತ್ತೀರಿ? ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ದಂಡ ವಿಧಿಸುತ್ತೀರಾ? ಯೋಚಿಸುವ ಸ್ವಾತಂತ್ರ್ಯವಿಲ್ಲದೆ, ಏನನ್ನಾದರೂ ಅಭಿವ್ಯಕ್ತಿಪಡಿಸಲು ಹೇಗೆ ಸಾಧ್ಯ? ಬೇರೊಬ್ಬರ ಯೋಚನಾ ಲಹರಿಯನ್ನು ನೀವು ಹೇಗೆ ನಿರ್ಬಂಧಿಸುತ್ತೀರಿ’ ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು.