ನವದೆಹಲಿ: ಬಿಜೆಪಿ ಕಾರ್ಯಕರ್ತನೊಬ್ಬಜಾರ್ಖಂಡ್ ಸಂಸದ ನಿಶಿಕಾಂತ್ ದುಬೇ ಅವರಪಾದ ತೊಳೆದು, ಆ ನೀರನ್ನು ಸೇವಿಸಿದ್ದಾನೆ. ಇದುತಮ್ಮ ಅಭಿಮಾನಿಯ ಪ್ರೀತಿ ಎಂದು ದುಬೇ ಸಮರ್ಥನೆ ಮಾಡಿಕೊಂಡಿದ್ದಾರೆ. ದುಬೇ ಅವರು ಮೋದಿಯ ಪಾದ ತೊಳೆದು ಆ ಕೊಳಕುನೀರನ್ನು ಕುಡಿಯುತ್ತಾರಾ? ಹಾಗೆ ಕುಡಿಯದಿದ್ದರೆ, ದುಬೇ ಅವರು ಮೋದಿಯವರನ್ನು ಪ್ರೀತಿಸುತ್ತಿಲ್ಲ ಎಂದು ಅರ್ಥ' - ಹಿರಿಯ ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಈ ರೀತಿ ಟ್ವೀಟ್ ಮಾಡಿದ್ದಾರೆ.
Supporter of Nishikant Dubey washes his feet and then drinks the dirty water
Dubey says it is an expression of the supporter’s love for him
Will Dubeyji wash Modiji’s feet and drink the dirty water ?
ಭಾನುವಾರ ಜಾರ್ಖಂಡ್ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬಬಿಜೆಪಿ ಸಂಸದ ನಿಶಿಕಾಂತ್ ದುಬೇ ಅವರ ಪಾದ ತೊಳೆದು, ಈ ನೀರನ್ನು ಸೇವಿಸಿರುವ ಘಟನೆಗೆ ಸಿಬಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪವನ್ ಶಾ ಎಂಬಾತ ದುಬೇ ಅವರ ಪಾದ ತೊಳೆದು ಆ ನೀರನ್ನು ಸೇವಿಸುತ್ತಿರುವ ವಿಡಿಯೊ ವೈರಲ್ ಆಗುವುದರ ಜತೆಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
This should not be politicized, what crime did I commit if I washed his feet &drank water? It was my sentiment. He is like my elder brother. Will file case against all those slandering me: Pawan Sah, BJP worker who washed feet of BJP Jharkhand MP Nishikant Dubey drank the water pic.twitter.com/JJQdTKfDlB
ಈ ಬಗ್ಗೆ ಪ್ರತಿಕ್ರಿಯಿಸಿದ ಪವನ್ ಶಾ, ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ನಾನು ಪಾದ ತೊಳೆದು, ಆ ನೀರನ್ನು ಕುಡಿಯುವ ಮೂಲಕ ಯಾವ ತಪ್ಪು ಮಾಡಿದೆ?.ಅವರು ನನಗೆ ಅಣ್ಣನಂತೆ, ನನ್ನ ಮೇಲೆ ಟೀಕಾಪ್ರಹಾರ ಮಾಡುವ ಜನರ ವಿರುದ್ಧ ನಾನು ದೂರು ನೀಡುತ್ತೇನೆ ಎಂದಿದ್ದಾರೆ.