<p class="title">ಶ್ರೀನಗರ: ‘ಬಿಜೆಪಿಯು 2019ರ ಆಗಸ್ಟ್ 5ರಂದು ನಮ್ಮ ರಾಜ್ಯದಿಂದ ಕಸಿದುಕೊಂಡಿರುವ ಸಂವಿಧಾನದ ವಿಧಿ 370ರಡಿಯ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುತ್ತೇವೆ’ ಎಂದು ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ ಪ್ರತಿಜ್ಞೆ ಮಾಡಿದರು.</p>.<p class="bodytext">ಪಿಡಿಪಿ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಅಲ್ಲಾನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅಂದು ಬಿಜೆಪಿ ನಮ್ಮಿಂದ ಕಸಿದುಕೊಂಡಿರುವ ಯಾವುದೇ ಬಗೆಯ ವಿಶೇಷ ಸ್ಥಾನಮಾನವನ್ನು ನಮ್ಮ ರಾಜ್ಯದ ಹಿತಕ್ಕಾಗಿ ಮರಳಿ ತರಲಾಗುವುದು’ ಎಂದು ತಮ್ಮ ನಿಲುವು ಪ್ರಕಟಿಸಿದರು.</p>.<p>‘ಭಾರತವೆಂದರೆ ಬಿಜೆಪಿಯಲ್ಲ. ಬಿಜೆಪಿಯು ಭಾರತವನ್ನು ತನ್ನ ರಣಭೂಮಿಯಾಗಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ’ಎಂದು ಮುಫ್ತಿ ಗುಡುಗಿದರು.</p>.<p>ಮೈತ್ರಿ ಸಮರ್ಥನೆ: 2014ರ ಚುನಾವಣೆಯ ನಂತರ ಬಿಜೆಪಿಯೊಂದಿಗೆ ತಮ್ಮ ಪಕ್ಷ ಮಾಡಿಕೊಂಡ ಮೈತ್ರಿ ಸಮರ್ಥಿಸಿಕೊಂಡ ಅವರು, ‘ಪಿಡಿಪಿಯು ಅವರ (ಬಿಜೆಪಿಯ) ಕೈಗಳನ್ನು ಕಟ್ಟಿಹಾಕಿತ್ತು. 2018ರ ಜೂನ್ನಲ್ಲಿಮೈತ್ರಿ ಕೊನೆಗೊಂಡ ನಂತರ ಅವರು ತಮ್ಮ ರಹಸ್ಯ ಕಾರ್ಯಸೂಚಿಗಳನ್ನು ಜಮ್ಮು–ಕಾಶ್ಮೀರದಲ್ಲಿ ಕಾರ್ಯಗತಗೊಳಿಸಲು ಶುರು ಮಾಡಿದರು’ ಎಂದು ದೂರಿದರು.</p>.<p>‘ಮೊಹಮ್ಮದ್ ಸಯೀದ್ ಅವರುದೂರದೃಷ್ಟಿವುಳ್ಳ ನಾಯಕ. ಅವರು ಕರಡಿಯನ್ನು (ಬಿಜೆಪಿ) ಕಟ್ಟಿಹಾಕಿದ್ದರು. ಅದು ಯಾವಾಗ ಕಟ್ಟು ಬಿಚ್ಚಿಕೊಂಡಿತೋ ಆಗಿನಿಂದ ಇಡೀ ಕಾಶ್ಮೀರವನ್ನು ಪರಚುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಶ್ರೀನಗರ: ‘ಬಿಜೆಪಿಯು 2019ರ ಆಗಸ್ಟ್ 5ರಂದು ನಮ್ಮ ರಾಜ್ಯದಿಂದ ಕಸಿದುಕೊಂಡಿರುವ ಸಂವಿಧಾನದ ವಿಧಿ 370ರಡಿಯ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುತ್ತೇವೆ’ ಎಂದು ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ ಪ್ರತಿಜ್ಞೆ ಮಾಡಿದರು.</p>.<p class="bodytext">ಪಿಡಿಪಿ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಅಲ್ಲಾನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅಂದು ಬಿಜೆಪಿ ನಮ್ಮಿಂದ ಕಸಿದುಕೊಂಡಿರುವ ಯಾವುದೇ ಬಗೆಯ ವಿಶೇಷ ಸ್ಥಾನಮಾನವನ್ನು ನಮ್ಮ ರಾಜ್ಯದ ಹಿತಕ್ಕಾಗಿ ಮರಳಿ ತರಲಾಗುವುದು’ ಎಂದು ತಮ್ಮ ನಿಲುವು ಪ್ರಕಟಿಸಿದರು.</p>.<p>‘ಭಾರತವೆಂದರೆ ಬಿಜೆಪಿಯಲ್ಲ. ಬಿಜೆಪಿಯು ಭಾರತವನ್ನು ತನ್ನ ರಣಭೂಮಿಯಾಗಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ’ಎಂದು ಮುಫ್ತಿ ಗುಡುಗಿದರು.</p>.<p>ಮೈತ್ರಿ ಸಮರ್ಥನೆ: 2014ರ ಚುನಾವಣೆಯ ನಂತರ ಬಿಜೆಪಿಯೊಂದಿಗೆ ತಮ್ಮ ಪಕ್ಷ ಮಾಡಿಕೊಂಡ ಮೈತ್ರಿ ಸಮರ್ಥಿಸಿಕೊಂಡ ಅವರು, ‘ಪಿಡಿಪಿಯು ಅವರ (ಬಿಜೆಪಿಯ) ಕೈಗಳನ್ನು ಕಟ್ಟಿಹಾಕಿತ್ತು. 2018ರ ಜೂನ್ನಲ್ಲಿಮೈತ್ರಿ ಕೊನೆಗೊಂಡ ನಂತರ ಅವರು ತಮ್ಮ ರಹಸ್ಯ ಕಾರ್ಯಸೂಚಿಗಳನ್ನು ಜಮ್ಮು–ಕಾಶ್ಮೀರದಲ್ಲಿ ಕಾರ್ಯಗತಗೊಳಿಸಲು ಶುರು ಮಾಡಿದರು’ ಎಂದು ದೂರಿದರು.</p>.<p>‘ಮೊಹಮ್ಮದ್ ಸಯೀದ್ ಅವರುದೂರದೃಷ್ಟಿವುಳ್ಳ ನಾಯಕ. ಅವರು ಕರಡಿಯನ್ನು (ಬಿಜೆಪಿ) ಕಟ್ಟಿಹಾಕಿದ್ದರು. ಅದು ಯಾವಾಗ ಕಟ್ಟು ಬಿಚ್ಚಿಕೊಂಡಿತೋ ಆಗಿನಿಂದ ಇಡೀ ಕಾಶ್ಮೀರವನ್ನು ಪರಚುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>