<p><strong>ಕೋಯಮತ್ತೂರು:</strong> ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹಿಂದೂಗಳ ಹಬ್ಬಕ್ಕೆ ಶುಭ ಕೋರುತ್ತಾರೆಯೇ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಕೋಯಮತ್ತೂರು ದಕ್ಷಿಣ ಕ್ಷೇತ್ರದ ಶಾಸಕಿ ವಾನತಿ ಶ್ರೀನಿವಾಸನ್ ಪ್ರಶ್ನಿಸಿದ್ದಾರೆ.</p>.<p>'ದ್ರಾವಿಡ ಸಂಸ್ಕೃತಿ' ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲವರು ಡಿಎಂಕೆಯನ್ನು ಹಿಂದೂ ವಿರೋಧಿಯಾಗಿ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂಬ ಸ್ಟಾಲಿನ್ ಆರೋಪಕ್ಕೆ ಸಂಬಂಧಿಸಿ ವಾನತಿ ಶ್ರೀನಿವಾಸನ್ ಪ್ರತಿಕ್ರಿಯಿಸಿದರು.</p>.<p>ಭಾರತದ ದಕ್ಷಿಣ ಭಾಗಗಳನ್ನು 'ದ್ರಾವಿಡಮ್' ಎಂದು ಕರೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಜೀವಿಸುತ್ತಿರುವ ಎಲ್ಲರೂ ದ್ರಾವಿಡರು. ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ದ್ರಾವಿಡಮ್ ರಚನೆಯಾಯಿತು. ಇದರ ಫಲಿತಾಂಶವಾಗಿ ಜಸ್ಟಿಸ್ ಪಾರ್ಟಿ, ದ್ರಾವಿಡರ್ ಕಳಗಂ ನಂತರ ಡಿಎಂಕೆ ರಚನೆಯಾಯಿತು ಎಂದು ವಾನತಿ ಶ್ರೀನಿವಾಸನ್ ಹೇಳಿದರು.</p>.<p>'ತಮ್ಮ ಸರ್ಕಾರವು ಯಾವುದೇ ಧರ್ಮದ ನಂಬಿಕೆಗೆ ವಿರುದ್ಧವಾಗಿಲ್ಲ. ಆದರೆ ಧರ್ಮಾಂಧತೆಯನ್ನು ವಿರೋಧಿಸುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದರು.</p>.<p>ರಾಜ್ಯ ಸರ್ಕಾರ ಹಿಂದೂ ಧರ್ಮಕ್ಕೆ ವಿರುದ್ಧವಾಗಿಲ್ಲ ಎಂದಾದರೆ ಸ್ಟಾಲಿನ್ ಅವರು ಹಿಂದೂ ಹಬ್ಬಗಳಂದು ಜನರಿಗೆ ಸಾರ್ವಜನಿಕವಾಗಿ ಶುಭ ಕೋರುವುದಿಲ್ಲ ಏಕೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವುದಿಲ್ಲ ಏಕೆ ಎಂದು ವಾನತಿ ಶ್ರೀನಿವಾಸನ್ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಮತ್ತೂರು:</strong> ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹಿಂದೂಗಳ ಹಬ್ಬಕ್ಕೆ ಶುಭ ಕೋರುತ್ತಾರೆಯೇ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಕೋಯಮತ್ತೂರು ದಕ್ಷಿಣ ಕ್ಷೇತ್ರದ ಶಾಸಕಿ ವಾನತಿ ಶ್ರೀನಿವಾಸನ್ ಪ್ರಶ್ನಿಸಿದ್ದಾರೆ.</p>.<p>'ದ್ರಾವಿಡ ಸಂಸ್ಕೃತಿ' ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲವರು ಡಿಎಂಕೆಯನ್ನು ಹಿಂದೂ ವಿರೋಧಿಯಾಗಿ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂಬ ಸ್ಟಾಲಿನ್ ಆರೋಪಕ್ಕೆ ಸಂಬಂಧಿಸಿ ವಾನತಿ ಶ್ರೀನಿವಾಸನ್ ಪ್ರತಿಕ್ರಿಯಿಸಿದರು.</p>.<p>ಭಾರತದ ದಕ್ಷಿಣ ಭಾಗಗಳನ್ನು 'ದ್ರಾವಿಡಮ್' ಎಂದು ಕರೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಜೀವಿಸುತ್ತಿರುವ ಎಲ್ಲರೂ ದ್ರಾವಿಡರು. ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ದ್ರಾವಿಡಮ್ ರಚನೆಯಾಯಿತು. ಇದರ ಫಲಿತಾಂಶವಾಗಿ ಜಸ್ಟಿಸ್ ಪಾರ್ಟಿ, ದ್ರಾವಿಡರ್ ಕಳಗಂ ನಂತರ ಡಿಎಂಕೆ ರಚನೆಯಾಯಿತು ಎಂದು ವಾನತಿ ಶ್ರೀನಿವಾಸನ್ ಹೇಳಿದರು.</p>.<p>'ತಮ್ಮ ಸರ್ಕಾರವು ಯಾವುದೇ ಧರ್ಮದ ನಂಬಿಕೆಗೆ ವಿರುದ್ಧವಾಗಿಲ್ಲ. ಆದರೆ ಧರ್ಮಾಂಧತೆಯನ್ನು ವಿರೋಧಿಸುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದರು.</p>.<p>ರಾಜ್ಯ ಸರ್ಕಾರ ಹಿಂದೂ ಧರ್ಮಕ್ಕೆ ವಿರುದ್ಧವಾಗಿಲ್ಲ ಎಂದಾದರೆ ಸ್ಟಾಲಿನ್ ಅವರು ಹಿಂದೂ ಹಬ್ಬಗಳಂದು ಜನರಿಗೆ ಸಾರ್ವಜನಿಕವಾಗಿ ಶುಭ ಕೋರುವುದಿಲ್ಲ ಏಕೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವುದಿಲ್ಲ ಏಕೆ ಎಂದು ವಾನತಿ ಶ್ರೀನಿವಾಸನ್ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>