<p><strong>ಮುಂಬೈ:</strong> ದೇಶದಲ್ಲಿ ಪೆಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಗಳು ನಡೆಯುತ್ತಿರುವಾಗ ಉದ್ದವ್ ಠಾಕ್ರೆ ತಮ್ಮ ಕುಟುಂಬದ ಜೊತೆ ಯುರೋಪ್ ಪ್ರವಾಸ ಮಾಡುತ್ತಿದ್ದರೇ ಇತ್ತ ಕಾರ್ಯಕರ್ತರು ಕೋಮಾದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟೀಕಿಸಿದ್ದಾರೆ. </p><p>ಉದ್ದವ್ ಅವರು ಏಪ್ರಿಲ್ 19ರಂದು ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ನಂತರದಲ್ಲಿ ಯುರೋಪ್ಗೆ ತೆರಳಿದ್ದರು. ಇದೀಗ ಅವರು ವಾಪಸಾಗಿದ್ದಾರೆ ಎಂದು ಉದ್ದವ್ ಆಪ್ತರು ಹೇಳಿದ್ದಾರೆ.</p><p>ಪೆಹಲ್ಗಾಮ್ ದಾಳಿ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೂ ಉದ್ದವ್ ಗೈರಾಗಿದ್ದರು. </p><p>ಮಹಾರಾಷ್ಟ್ರಕ್ಕೆ ಪೂರ್ಣಕಾಲ ಸೇವೆ ಸಲ್ಲಿಸುವ ನಾಯಕರು ಬೇಕಾಗಿದ್ದಾರೆ, ಪಾರ್ಟ್ ಟೈಮ್ ಕೆಲಸ ಮಾಡುವ ನಾಯಕರಲ್ಲ ಎಂದು ಶಿಂಧೆ ಉದ್ದವ್ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲೂ ಅವರು ಪ್ರವಾಸ ಮಾಡಬೇಕೇ? ಎಂದು ಶಿಂಧೆ ಪ್ರಶ್ನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ದೇಶದಲ್ಲಿ ಪೆಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಗಳು ನಡೆಯುತ್ತಿರುವಾಗ ಉದ್ದವ್ ಠಾಕ್ರೆ ತಮ್ಮ ಕುಟುಂಬದ ಜೊತೆ ಯುರೋಪ್ ಪ್ರವಾಸ ಮಾಡುತ್ತಿದ್ದರೇ ಇತ್ತ ಕಾರ್ಯಕರ್ತರು ಕೋಮಾದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟೀಕಿಸಿದ್ದಾರೆ. </p><p>ಉದ್ದವ್ ಅವರು ಏಪ್ರಿಲ್ 19ರಂದು ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ನಂತರದಲ್ಲಿ ಯುರೋಪ್ಗೆ ತೆರಳಿದ್ದರು. ಇದೀಗ ಅವರು ವಾಪಸಾಗಿದ್ದಾರೆ ಎಂದು ಉದ್ದವ್ ಆಪ್ತರು ಹೇಳಿದ್ದಾರೆ.</p><p>ಪೆಹಲ್ಗಾಮ್ ದಾಳಿ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೂ ಉದ್ದವ್ ಗೈರಾಗಿದ್ದರು. </p><p>ಮಹಾರಾಷ್ಟ್ರಕ್ಕೆ ಪೂರ್ಣಕಾಲ ಸೇವೆ ಸಲ್ಲಿಸುವ ನಾಯಕರು ಬೇಕಾಗಿದ್ದಾರೆ, ಪಾರ್ಟ್ ಟೈಮ್ ಕೆಲಸ ಮಾಡುವ ನಾಯಕರಲ್ಲ ಎಂದು ಶಿಂಧೆ ಉದ್ದವ್ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲೂ ಅವರು ಪ್ರವಾಸ ಮಾಡಬೇಕೇ? ಎಂದು ಶಿಂಧೆ ಪ್ರಶ್ನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>