<p><strong>ಕರ್ನೂಲು (ಆಂಧ್ರಪ್ರದೇಶ):</strong> ಮಾಜಿ ಪ್ರಿಯಕರನ ಪತ್ನಿಗೆ ಎಚ್ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ನೀಡಿದ ಆರೋಪದಡಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.</p>.<p>ಕರ್ನೂಲು ನಿವಾಸಿ ಬಿ. ಬೋಯ ವಸುಂಧರಾ (34), ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ(40) ಮತ್ತು ಅವರ ಇಬ್ಬರು ಮಕ್ಕಳು ಬಂಧಿತ ಆರೋಪಿಗಳು.</p>.<p>ಮಾಜಿ ಪ್ರಿಯಕರನು ವೈದ್ಯೆಯೊಬ್ಬರನ್ನು ಮದುವೆಯಾಗಿರುವುದನ್ನು ಸಹಿಸದ ಆರೋಪಿ ವಸುಂಧರಾ ಎಚ್ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ನೀಡಿ ಅವರನ್ನು ದೂರ ಮಾಡಲು ಯತ್ನಿಸಿದ್ದಾರೆ.</p>.<p>ಸಂತ್ರಸ್ತೆಯು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಮೋಟಾರು ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಗುದ್ದಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡಿದ್ದ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಆರೋಪಿ ವಸುಂಧರಾ, ಆಟೊ ರಿಕ್ಷಾದಲ್ಲಿ ಕೂರಿಸಲು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅನುಮಾನಗೊಂಡ ಸಂತ್ರಸ್ತೆ ಕಿರುಚಾಡಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮೊದಲು ಆರೋಪಿ ವಸುಂಧರಾ ಸಂತ್ರಸ್ತೆಗೆ ಎಚ್ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ಅನ್ನು ಚುಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದ ವ್ಯಕ್ತಿಗಳಿಂದ ಆರೋಪಿಗಳು ಎಚ್ಐವಿ ಸೋಂಕಿತ ರಕ್ತವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರ್ನೂಲು (ಆಂಧ್ರಪ್ರದೇಶ):</strong> ಮಾಜಿ ಪ್ರಿಯಕರನ ಪತ್ನಿಗೆ ಎಚ್ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ನೀಡಿದ ಆರೋಪದಡಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.</p>.<p>ಕರ್ನೂಲು ನಿವಾಸಿ ಬಿ. ಬೋಯ ವಸುಂಧರಾ (34), ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ(40) ಮತ್ತು ಅವರ ಇಬ್ಬರು ಮಕ್ಕಳು ಬಂಧಿತ ಆರೋಪಿಗಳು.</p>.<p>ಮಾಜಿ ಪ್ರಿಯಕರನು ವೈದ್ಯೆಯೊಬ್ಬರನ್ನು ಮದುವೆಯಾಗಿರುವುದನ್ನು ಸಹಿಸದ ಆರೋಪಿ ವಸುಂಧರಾ ಎಚ್ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ನೀಡಿ ಅವರನ್ನು ದೂರ ಮಾಡಲು ಯತ್ನಿಸಿದ್ದಾರೆ.</p>.<p>ಸಂತ್ರಸ್ತೆಯು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಮೋಟಾರು ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಗುದ್ದಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡಿದ್ದ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಆರೋಪಿ ವಸುಂಧರಾ, ಆಟೊ ರಿಕ್ಷಾದಲ್ಲಿ ಕೂರಿಸಲು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅನುಮಾನಗೊಂಡ ಸಂತ್ರಸ್ತೆ ಕಿರುಚಾಡಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮೊದಲು ಆರೋಪಿ ವಸುಂಧರಾ ಸಂತ್ರಸ್ತೆಗೆ ಎಚ್ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ಅನ್ನು ಚುಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದ ವ್ಯಕ್ತಿಗಳಿಂದ ಆರೋಪಿಗಳು ಎಚ್ಐವಿ ಸೋಂಕಿತ ರಕ್ತವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>