ಪ್ರಧಾನಿ ಉತ್ತರಕ್ಕೆ ಮೊದಲು ಮಣಿಪುರದ ಬಗ್ಗೆ ಮಾತನಾಡಲು ಅಲ್ಲಿನ ಸಂಸದರಿಗೆ ಅವಕಾಶ ನೀಡಬೇಕು ಎಂದು ಲೋಕಸಭಾಧ್ಯಕ್ಷ ಓಂಬಿರ್ಲಾ ಅವರನ್ನು ವಿಪಕ್ಷಗಳ ಸದಸ್ಯರು ಕೋರಿದರು. ಈಶಾನ್ಯ ರಾಜ್ಯದ ಸದಸ್ಯರು ಸೋಮವಾರವೇ ಸದನದಲ್ಲಿ ಮಾತನಾಡಿದ್ದಾರೆ ಎಂದು ಸಭಾಧ್ಯಕ್ಷರು ಸ್ಪಷ್ಟಪಡಿಸಿದರು. ಇದನ್ನು ಖಂಡಿಸಿ ವಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿ ಘೋಷಣೆಗಳನ್ನು ಕೂಗಿದರು. ಪ್ರಧಾನಿ ಭಾಷಣ ಮುಗಿಸುವ ತನಕವೂ ಧರಣಿ ಮುಂದುವರಿಸಿದರು. ಲೋಕಸಭಾಧ್ಯಕ್ಷರು ಸದಸ್ಯರಿಗೆ ಎಚ್ಚರಿಕೆ ನೀಡಿದರು.