ಫೆ.21ರಂದು ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನ ಮೇ ವರೆಗೂ ನಡೆಯಲಿದೆ. ಆನಂತರ ಪೂರ್ಣ ಪ್ರಮಾಣದ ಸಂಪುಟ ಪುನರ್ರಚನೆ ನಡೆಯಲಿದೆ. ಬುಧವಾರದ ಸಂಪುಟ ಮರುರಚನೆ ಹಲವು ಸಚಿವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ.
ಸಚಿವರ ಸಾಮರ್ಥ್ಯ ಪರಿಗಣಿಸಿ ಹೊಣೆಗಾರಿಕೆ ನೀಡಿರುವುದರಿಂದ ಆಡಳಿತದಲ್ಲಿ ಹೊಸ ಚಿಂತನೆ ತರಲು ಇದು ನೆರವಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಮುಂದಿನ ಕೆಲ ತಿಂಗಳುಗಳಲ್ಲಿ ಚುನಾವಣೆ ನಡೆಯಬೇಕಿದೆ.