<p><strong>ನವದೆಹಲಿ:</strong> ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.<br /> <br /> ನ್ಯಾ. ಅಫ್ತಾಬ್ ಆಲಂ ನೇತೃತ್ವದ ಸುಪ್ರೀಂ ಕೋರ್ಟ್ ಅರಣ್ಯ ಪೀಠವು ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಕಾದಿರುವ ಎಲ್ಲ ಅರ್ಜಿಗಳಿಗೆ ಸಂಬಂಧಿಸಿದಂತೆ ತಿಂಗಳೊಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.<br /> <br /> ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಮನವಿ ಮಾಡಿರುವ ಅರ್ಜಿಗಳು ಸರ್ಕಾರದ ಮುಂದೆ ಒಂದು ವರ್ಷದಿಂದ ಇತ್ಯರ್ಥವಾಗದೆ ಉಳಿದಿವೆ. ಕೆಲವು ಗುತ್ತಿಗೆಗಳ ಪರವಾನಗಿ ಅವಧಿ ಮುಗಿಯುವ ಹಂತದಲ್ಲಿದೆ ಎಂಬ ವಾದವನ್ನು ಆಲಿಸಿದ ಅರಣ್ಯ ಪೀಠ ಈ ಆದೇಶ ನೀಡಿತು.<br /> <br /> ಅದಿರು ಕೊರತೆ ಉಕ್ಕು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಉಕ್ಕು ತಯಾರಕರ ಸಂಘ ಮಾಡಿದ ಮನವಿ ಮೇಲೆ ನ್ಯಾಯಪೀಠ ಯಾವುದೇ ಆದೇಶ ನೀಡಲಿಲ್ಲ.<br /> <br /> ಗಣಿಗಾರಿಕೆಗೆ ಅನುಮತಿ ನೀಡಬೇಕೆಂದು ಉಕ್ಕು ಉತ್ಪಾದಕರು ಮಾತ್ರ ಏಕೆ ಕೇಳುತ್ತಿದ್ದಾರೆ. ಅದಿರು ಗಣಿಗಾರಿಕೆ ನಿಷೇಧದಿಂದ ತೀವ್ರ ತೊಂದರೆಗೆ ಒಳಗಾಗಿರುವ ಗಣಿ ಗುತ್ತಿಗೆದಾರರು ಏಕೆ ಮೌನವಾಗಿದ್ದಾರೆ ಎಂದು ನ್ಯಾಯಪೀಠದ ಮತ್ತಿಬ್ಬರು ಸದಸ್ಯರಾದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ಸ್ವತಂತ್ರಕುಮಾರ್ ಪ್ರಶ್ನಿಸಿದರು.<br /> <br /> ಅವರು ನ್ಯಾಯಾಲಯದ ಮುಂದೆ ಬರದೆ ಇರಲು ಕಾರಣವೇನು? ಇದರ ಹಿಂದಿನ ಒಳಗುಟ್ಟೇನು ಎಂದು ಅರಿಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.<br /> <br /> ಉಕ್ಕು ತಯಾರಕರ ಸಂಘದ ಪರ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಎ ವರ್ಗದ 18 ಗಣಿಗಳಲ್ಲಿ ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ ಷರತ್ತುಗಳನ್ನು ಪೂರೈಸಿರುವ ಎರಡು ಗಣಿಗಳಿಗೆ ಮಾತ್ರ ಶಾಸನಾತ್ಮಕ ಮಂಜೂರಾತಿ ದೊರೆತಿದೆ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.<br /> <br /> ಸಂಘದ ಪರ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ಸಿ.ಯು. ಸಿಂಗ್ ಎನ್ಎಂಡಿಸಿ ಹೊರತೆಗೆಯುತ್ತಿರುವ ಅದಿರು ಸಾಕಾಗುತ್ತಿಲ್ಲ. ಇದರಿಂದಾಗಿ ಉಕ್ಕು ಉದ್ಯಮ ಸೊರಗುತ್ತಿದೆ ಎಂದು ವಿವರಿಸಿದರು.<br /> <br /> ಆದರೆ, ಈ ವಾದ ಕೋರ್ಟ್ ಮೇಲೆ ಪ್ರಭಾವ ಬೀರಲಿಲ್ಲ. ನಮಗೆ ಉಕ್ಕೂ ಬೇಕು. ಪರಿಸರವೂ ಉಳಿಯಬೇಕು. ಅಮೂಲ್ಯವಾದ ಪರಿಸರ ನಾಶಮಾಡಿ ಉತ್ಪಾದಿಸುವ ಉಕ್ಕಿನ ಅಗತ್ಯ ನಮಗಿಲ್ಲ. <br /> <br /> ಗಣಿಗಾರಿಕೆಯಿಂದ ನಾಶವಾಗಿರುವ ಪರಿಸರ ಮಹತ್ವದ ಬಗ್ಗೆ ಅರಿವಿದೆಯೇ ಎಂದು ನ್ಯಾಯಪೀಠ ಕೇಳಿತು. ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ನೀಡುವ ಮೊದಲು ಗುತ್ತಿಗೆದಾರರಿಂದ ಮುಚ್ಚಳಿಕೆ ಪಡೆಯಬಹುದು ಎಂದು ಸಿಂಗ್ ಹೇಳಿದರು.<br /> <br /> ಗಣಿ ಗುತ್ತಿಗೆಗಳ ಗಡಿಗಳನ್ನು ಗುರುತಿಸುವ ಕುರಿತು ಕೇಂದ್ರ ಉನ್ನತಾಧಿಕಾರ ಸಮಿತಿ ಮಾಡಿರುವ ಶಿಫಾರಸಿಗೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವಂತೆ ನ್ಯಾಯಪೀಠ ಕೇಂದ್ರ, ಕರ್ನಾಟಕ ಹಾಗೂ ಆಂಧ್ರ ಸರ್ಕಾರಕ್ಕೆ ಹೇಳಿತು. ಅನಂತರ ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.<br /> <br /> ನ್ಯಾ. ಅಫ್ತಾಬ್ ಆಲಂ ನೇತೃತ್ವದ ಸುಪ್ರೀಂ ಕೋರ್ಟ್ ಅರಣ್ಯ ಪೀಠವು ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಕಾದಿರುವ ಎಲ್ಲ ಅರ್ಜಿಗಳಿಗೆ ಸಂಬಂಧಿಸಿದಂತೆ ತಿಂಗಳೊಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.<br /> <br /> ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಮನವಿ ಮಾಡಿರುವ ಅರ್ಜಿಗಳು ಸರ್ಕಾರದ ಮುಂದೆ ಒಂದು ವರ್ಷದಿಂದ ಇತ್ಯರ್ಥವಾಗದೆ ಉಳಿದಿವೆ. ಕೆಲವು ಗುತ್ತಿಗೆಗಳ ಪರವಾನಗಿ ಅವಧಿ ಮುಗಿಯುವ ಹಂತದಲ್ಲಿದೆ ಎಂಬ ವಾದವನ್ನು ಆಲಿಸಿದ ಅರಣ್ಯ ಪೀಠ ಈ ಆದೇಶ ನೀಡಿತು.<br /> <br /> ಅದಿರು ಕೊರತೆ ಉಕ್ಕು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಉಕ್ಕು ತಯಾರಕರ ಸಂಘ ಮಾಡಿದ ಮನವಿ ಮೇಲೆ ನ್ಯಾಯಪೀಠ ಯಾವುದೇ ಆದೇಶ ನೀಡಲಿಲ್ಲ.<br /> <br /> ಗಣಿಗಾರಿಕೆಗೆ ಅನುಮತಿ ನೀಡಬೇಕೆಂದು ಉಕ್ಕು ಉತ್ಪಾದಕರು ಮಾತ್ರ ಏಕೆ ಕೇಳುತ್ತಿದ್ದಾರೆ. ಅದಿರು ಗಣಿಗಾರಿಕೆ ನಿಷೇಧದಿಂದ ತೀವ್ರ ತೊಂದರೆಗೆ ಒಳಗಾಗಿರುವ ಗಣಿ ಗುತ್ತಿಗೆದಾರರು ಏಕೆ ಮೌನವಾಗಿದ್ದಾರೆ ಎಂದು ನ್ಯಾಯಪೀಠದ ಮತ್ತಿಬ್ಬರು ಸದಸ್ಯರಾದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ಸ್ವತಂತ್ರಕುಮಾರ್ ಪ್ರಶ್ನಿಸಿದರು.<br /> <br /> ಅವರು ನ್ಯಾಯಾಲಯದ ಮುಂದೆ ಬರದೆ ಇರಲು ಕಾರಣವೇನು? ಇದರ ಹಿಂದಿನ ಒಳಗುಟ್ಟೇನು ಎಂದು ಅರಿಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.<br /> <br /> ಉಕ್ಕು ತಯಾರಕರ ಸಂಘದ ಪರ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಎ ವರ್ಗದ 18 ಗಣಿಗಳಲ್ಲಿ ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ ಷರತ್ತುಗಳನ್ನು ಪೂರೈಸಿರುವ ಎರಡು ಗಣಿಗಳಿಗೆ ಮಾತ್ರ ಶಾಸನಾತ್ಮಕ ಮಂಜೂರಾತಿ ದೊರೆತಿದೆ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.<br /> <br /> ಸಂಘದ ಪರ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ಸಿ.ಯು. ಸಿಂಗ್ ಎನ್ಎಂಡಿಸಿ ಹೊರತೆಗೆಯುತ್ತಿರುವ ಅದಿರು ಸಾಕಾಗುತ್ತಿಲ್ಲ. ಇದರಿಂದಾಗಿ ಉಕ್ಕು ಉದ್ಯಮ ಸೊರಗುತ್ತಿದೆ ಎಂದು ವಿವರಿಸಿದರು.<br /> <br /> ಆದರೆ, ಈ ವಾದ ಕೋರ್ಟ್ ಮೇಲೆ ಪ್ರಭಾವ ಬೀರಲಿಲ್ಲ. ನಮಗೆ ಉಕ್ಕೂ ಬೇಕು. ಪರಿಸರವೂ ಉಳಿಯಬೇಕು. ಅಮೂಲ್ಯವಾದ ಪರಿಸರ ನಾಶಮಾಡಿ ಉತ್ಪಾದಿಸುವ ಉಕ್ಕಿನ ಅಗತ್ಯ ನಮಗಿಲ್ಲ. <br /> <br /> ಗಣಿಗಾರಿಕೆಯಿಂದ ನಾಶವಾಗಿರುವ ಪರಿಸರ ಮಹತ್ವದ ಬಗ್ಗೆ ಅರಿವಿದೆಯೇ ಎಂದು ನ್ಯಾಯಪೀಠ ಕೇಳಿತು. ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ನೀಡುವ ಮೊದಲು ಗುತ್ತಿಗೆದಾರರಿಂದ ಮುಚ್ಚಳಿಕೆ ಪಡೆಯಬಹುದು ಎಂದು ಸಿಂಗ್ ಹೇಳಿದರು.<br /> <br /> ಗಣಿ ಗುತ್ತಿಗೆಗಳ ಗಡಿಗಳನ್ನು ಗುರುತಿಸುವ ಕುರಿತು ಕೇಂದ್ರ ಉನ್ನತಾಧಿಕಾರ ಸಮಿತಿ ಮಾಡಿರುವ ಶಿಫಾರಸಿಗೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವಂತೆ ನ್ಯಾಯಪೀಠ ಕೇಂದ್ರ, ಕರ್ನಾಟಕ ಹಾಗೂ ಆಂಧ್ರ ಸರ್ಕಾರಕ್ಕೆ ಹೇಳಿತು. ಅನಂತರ ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>