<p>ಹೈದರಾಬಾದ್ (ಐಎಎನ್ಎಸ್): ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ್ದು ಎಂದು ಶಂಕಿಸಲಾಗಿರುವ ಚೂರುಗಳು ಆಂಧ್ರ ಪ್ರದೇಶ ಕರಾವಳಿಯತ್ತ ಬುಧವಾರ ತೇಲಿ ಬಂದಿವೆ ಎಂದು ತೆಲುಗು ಟೆಲಿವಿಷನ್ ವಾಹಿನಿಯೊಂದು ವರದಿ ಮಾಡಿದೆ.<br /> <br /> ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿನ ನೆಲ್ಲೂರು ಜಿಲ್ಲೆಯ ಟಿ.ಪಿ. ಗುಡೂರು ಮಂಡಲದ ಕುಟ್ಟ ಗೌಡೂರು ಬಳಿ ಬಂಗಾಳ ಆಖಾತದಲ್ಲಿ ಅಪರಿಚಿತ ವಸ್ತು ತೇಲಿ ಬಂದಿರುವುದನ್ನು ತಾವು ನೋಡಿರುವುದಾಗಿ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ.<br /> <br /> ಟಿವಿ ವಾಹಿನಿಯ ಪ್ರಕಾರ ಅಧಿಕಾರಿಗಳು ತತ್ ಕ್ಷಣವೇ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏನಿದ್ದರೂ ಸಮುದ್ರದಲ್ಲಿ ತೇಲುತ್ತಿರುವ ವಸ್ತುಗಳು ನಿಜವಾಗಿಯೇ ವಿಮಾನದ ಚೂರುಗಳೇ ಎಂಬ ಬಗ್ಗೆ ಅಧಿಕಾರಿಗಳಿಂದ ಯಾವುದೇ ದೃಢೀಕರಣ ಲಭ್ಯವಾಗಿಲ್ಲ.<br /> <br /> ಐವರು ಭಾರತೀಯರು ಸೇರಿದಂತೆ 239 ಜನರನ್ನು ಹೊತ್ತ ಮಲೇಷ್ಯಾ ವಿಮಾನವು ಮಾರ್ಚ್ 8ರಂದು ಕ್ವಾಲಾಲಂಪುರದಿಂದ ಬೀಜಿಂಗ್ ಮಾರ್ಗವಾಗಿ ಸಾಗುತ್ತಿದ್ದಾಗ ನಿಗೂಢವಾಗಿ ಕಣ್ಮರೆಯಾಗಿತ್ತು.<br /> <br /> ವಿಮಾನವು ಬಂಗಾಳ ಆಖಾತ ಇಲ್ಲವೇ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿರಬಹುದು ಎಂದು ಮಲೇಷ್ಯಾದ ಟಿವಿ ಸುದ್ದಿ ವಾಹಿನಿಯೊಂದು ಎರಡು ದಿನಗಳ ಹಿಂದಷ್ಟೇ ವರದಿ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೈದರಾಬಾದ್ (ಐಎಎನ್ಎಸ್): ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ್ದು ಎಂದು ಶಂಕಿಸಲಾಗಿರುವ ಚೂರುಗಳು ಆಂಧ್ರ ಪ್ರದೇಶ ಕರಾವಳಿಯತ್ತ ಬುಧವಾರ ತೇಲಿ ಬಂದಿವೆ ಎಂದು ತೆಲುಗು ಟೆಲಿವಿಷನ್ ವಾಹಿನಿಯೊಂದು ವರದಿ ಮಾಡಿದೆ.<br /> <br /> ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿನ ನೆಲ್ಲೂರು ಜಿಲ್ಲೆಯ ಟಿ.ಪಿ. ಗುಡೂರು ಮಂಡಲದ ಕುಟ್ಟ ಗೌಡೂರು ಬಳಿ ಬಂಗಾಳ ಆಖಾತದಲ್ಲಿ ಅಪರಿಚಿತ ವಸ್ತು ತೇಲಿ ಬಂದಿರುವುದನ್ನು ತಾವು ನೋಡಿರುವುದಾಗಿ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ.<br /> <br /> ಟಿವಿ ವಾಹಿನಿಯ ಪ್ರಕಾರ ಅಧಿಕಾರಿಗಳು ತತ್ ಕ್ಷಣವೇ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏನಿದ್ದರೂ ಸಮುದ್ರದಲ್ಲಿ ತೇಲುತ್ತಿರುವ ವಸ್ತುಗಳು ನಿಜವಾಗಿಯೇ ವಿಮಾನದ ಚೂರುಗಳೇ ಎಂಬ ಬಗ್ಗೆ ಅಧಿಕಾರಿಗಳಿಂದ ಯಾವುದೇ ದೃಢೀಕರಣ ಲಭ್ಯವಾಗಿಲ್ಲ.<br /> <br /> ಐವರು ಭಾರತೀಯರು ಸೇರಿದಂತೆ 239 ಜನರನ್ನು ಹೊತ್ತ ಮಲೇಷ್ಯಾ ವಿಮಾನವು ಮಾರ್ಚ್ 8ರಂದು ಕ್ವಾಲಾಲಂಪುರದಿಂದ ಬೀಜಿಂಗ್ ಮಾರ್ಗವಾಗಿ ಸಾಗುತ್ತಿದ್ದಾಗ ನಿಗೂಢವಾಗಿ ಕಣ್ಮರೆಯಾಗಿತ್ತು.<br /> <br /> ವಿಮಾನವು ಬಂಗಾಳ ಆಖಾತ ಇಲ್ಲವೇ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿರಬಹುದು ಎಂದು ಮಲೇಷ್ಯಾದ ಟಿವಿ ಸುದ್ದಿ ವಾಹಿನಿಯೊಂದು ಎರಡು ದಿನಗಳ ಹಿಂದಷ್ಟೇ ವರದಿ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>