<p><strong>ಚೆನ್ನೈ (ಪಿಟಿಐ):</strong> ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸುವ ನಿಟ್ಟಿನಲ್ಲಿ, `ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಪರ್ಯಾಯ' ಮಾರ್ಗವೊಂದನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿ ಎಐಎಡಿಎಂಕೆ ಮತ್ತು ಸಿಪಿಐ ಮುಂಬರುವ ಲೋಕಸಭೆ ಚುನಾವಣೆಗಳನ್ನು ಮೈತ್ರಿಕೂಟ ರಚಿಸುವ ಮೂಲಕ ಎದುರಿಸುವುದಾಗಿ ಭಾನುವಾರ ಘೋಷಿಸಿದವು.<br /> <br /> ತಮ್ಮ ನಿವಾಸದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು `ಮುಂಬರುವ ಲೋಕಸಭೆ ಚುನಾವಣೆಗಳನ್ನು ಎಐಎಡಿಎಂಕೆ ಹಾಗೂ ಸಿಪಿಐ ಜಂಟಿಯಾಗಿ ಎದುರಿಸಲು ತೀರ್ಮಾನಿಸಿವೆ' ಎಂದು ಹೇಳಿದರು.<br /> <br /> ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ಎ.ಬಿ.ಬರ್ಧನ್ ಮತ್ತು ಸುಧಾಕರ್ ರೆಡ್ಡಿ ಅವರು ಉಪಸ್ಥಿತರಿದ್ದರು, ಬರ್ಧನ್ ಅವರು ಮಾತನಾಡಿ `ಜಯಲಲಿತಾ ಅವರು ಹೇಳಿದ್ದನ್ನು ನಾನು ದೃಢಿಕರಿಸುತ್ತೇನೆ. ನಮ್ಮ ಮೈತ್ರಿಕೂಟವು ವಿಜಯ ಸಾಧಿಸಲಿದ್ದು, ನಾವು ಗೆಲುತ್ತೇವೆ' ಎಂದು ಹೇಳಿದರು.<br /> <br /> ಜಯಲಲಿತಾ ಅವರೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಎಐಎಡಿಎಂಕೆಯ ಕಾರ್ಯಕರ್ತರು ಕೂಗು ಹೆಚ್ಚುತ್ತಿದೆಯಲ್ಲ ಎಂಬ ಪ್ರಶ್ನೆಗೆ ಬರ್ಧನ್ ಅವರು `ಒಂದೊಮ್ಮೆ ಚುನಾವಣೆಯಲ್ಲಿ ನಾವು ಜಯ ಗಳಿಸಿದರೆ. ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.<br /> <br /> `ತಮಿಳುನಾಡು ಮತ್ತು ಪುದುಚೇರಿಯಲ್ಲಿ 40 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು, ಶಾಂತಿ, ಸಮೃದ್ಧಿ, ಪ್ರಗತಿ ಎನ್ನುವುದು ನಮ್ಮ ಚುನಾವಣಾ ಘೋಷವಾಕ್ಯವಾಗಿದೆ' ಎಂದು ಜಯಲಲಿತಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ):</strong> ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸುವ ನಿಟ್ಟಿನಲ್ಲಿ, `ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಪರ್ಯಾಯ' ಮಾರ್ಗವೊಂದನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿ ಎಐಎಡಿಎಂಕೆ ಮತ್ತು ಸಿಪಿಐ ಮುಂಬರುವ ಲೋಕಸಭೆ ಚುನಾವಣೆಗಳನ್ನು ಮೈತ್ರಿಕೂಟ ರಚಿಸುವ ಮೂಲಕ ಎದುರಿಸುವುದಾಗಿ ಭಾನುವಾರ ಘೋಷಿಸಿದವು.<br /> <br /> ತಮ್ಮ ನಿವಾಸದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು `ಮುಂಬರುವ ಲೋಕಸಭೆ ಚುನಾವಣೆಗಳನ್ನು ಎಐಎಡಿಎಂಕೆ ಹಾಗೂ ಸಿಪಿಐ ಜಂಟಿಯಾಗಿ ಎದುರಿಸಲು ತೀರ್ಮಾನಿಸಿವೆ' ಎಂದು ಹೇಳಿದರು.<br /> <br /> ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ಎ.ಬಿ.ಬರ್ಧನ್ ಮತ್ತು ಸುಧಾಕರ್ ರೆಡ್ಡಿ ಅವರು ಉಪಸ್ಥಿತರಿದ್ದರು, ಬರ್ಧನ್ ಅವರು ಮಾತನಾಡಿ `ಜಯಲಲಿತಾ ಅವರು ಹೇಳಿದ್ದನ್ನು ನಾನು ದೃಢಿಕರಿಸುತ್ತೇನೆ. ನಮ್ಮ ಮೈತ್ರಿಕೂಟವು ವಿಜಯ ಸಾಧಿಸಲಿದ್ದು, ನಾವು ಗೆಲುತ್ತೇವೆ' ಎಂದು ಹೇಳಿದರು.<br /> <br /> ಜಯಲಲಿತಾ ಅವರೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಎಐಎಡಿಎಂಕೆಯ ಕಾರ್ಯಕರ್ತರು ಕೂಗು ಹೆಚ್ಚುತ್ತಿದೆಯಲ್ಲ ಎಂಬ ಪ್ರಶ್ನೆಗೆ ಬರ್ಧನ್ ಅವರು `ಒಂದೊಮ್ಮೆ ಚುನಾವಣೆಯಲ್ಲಿ ನಾವು ಜಯ ಗಳಿಸಿದರೆ. ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.<br /> <br /> `ತಮಿಳುನಾಡು ಮತ್ತು ಪುದುಚೇರಿಯಲ್ಲಿ 40 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು, ಶಾಂತಿ, ಸಮೃದ್ಧಿ, ಪ್ರಗತಿ ಎನ್ನುವುದು ನಮ್ಮ ಚುನಾವಣಾ ಘೋಷವಾಕ್ಯವಾಗಿದೆ' ಎಂದು ಜಯಲಲಿತಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>