ಶ್ರೀನಗರದಿಂದ 95 ಕಿ.ಮೀ. ದೂರದಲ್ಲಿರುವ ಹಂದ್ವಾರಾ ಪ್ರದೇಶದ ಸೊಚಲ್ಯಾರಿ ಅರಣ್ಯದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಳೆದ ರಾತ್ರಿ (ಬುಧವಾರ) ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಗುರುವಾರ ನಸುಕಿನ ವರೆಗೂ ಸಾಗಿದ ಎನ್ಕೌಂಟರ್ನಲ್ಲಿ 9 ಪಾರಾಗೆ ಸೇರಿದ ಯೋಧರೊಬ್ಬರು ಹುತಾತ್ಮರಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.