<p><strong>ನವದೆಹಲಿ:</strong> ಸಬ್ಸಿಡಿ ದರದ ಅಡುಗೆ ಅನಿಲವನ್ನು (ಎಲ್ಪಿಜಿ) ವರ್ಷಕ್ಕೆ ಆರು ಸಿಲಿಂಡರ್ಗಳಿಗೆ ಮಿತಿ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ, ತನ್ನ ಈ ನಿರ್ಧಾರ ಮರು ಪರಿಶೀಲಿಸಿ ವರ್ಷಕ್ಕೆ ಒಂಬತ್ತು ಸಿಲಿಂಡರ್ ಪೂರೈಸಲು ಚಿಂತಿಸುತ್ತಿದೆ.<br /> <br /> ಗುಜರಾತ್ ವಿಧಾನಸಭಾ ಚುನಾವಣೆಯ ಬಳಿಕ (ಡಿ.17) ಈ ವಿಚಾರವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.<br /> <br /> ಆರ್ಥಿಕ ಸುಧಾರಣಾ ಕ್ರಮದಡಿಯಲ್ಲಿ ಸಬ್ಸಿಡಿ ದರದ ಎಲ್ಪಿಜಿ ಪೂರೈಕೆಗೆ ಮಿತಿ ಹೇರಿರುವ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡರೂ, ಅದಕ್ಕೆ ಕಾಂಗ್ರೆಸ್ನ ಅನೇಕ ಸಚಿವರು ಮತ್ತು ಸಂಸದರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. <br /> <br /> ಇವರು ತಮ್ಮ ಅಸಮಾಧಾನವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ್ಲ್ಲಲಿ ಹೇಳಿಕೊಂಡಿದ್ದಾರೆ. ಈ ನಿರ್ಧಾರದಿಂದ ಪಕ್ಷದ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆಂದೂ ತಿಳಿದುಬಂದಿದೆ.<br /> <br /> ಜತೆಗೆ ಯುಪಿಎ ಅಂಗಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳಿಂದ ಹಾಗೂ ವಿವಿಧ ಸಂಘಟನೆಗಳಿಂದಲೂ ಭಾರಿ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು. ಈ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಬಹುತೇಕರು ಒತ್ತಾಯಿಸಿದ್ದರು. ಕೆಲವರು ಮಿತಿಯನ್ನು ಆರರ ಬದಲು ಒಂಬತ್ತು ಸಿಲಿಂಡರ್ಗೆ ನಿಗದಿ ಮಾಡಬೇಕು ಎಂದೂ ಆಗ್ರಹಿಸಿದ್ದರು. ಆದರೆ, ಸರ್ಕಾರ ಇದನ್ನು ಒಪ್ಪಿರಲಿಲ್ಲ.<br /> <br /> ಇದೇ ಭಾನುವಾರ ಮತದಾನ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ವಿಚಾರವೇ ಪ್ರಮುಖ ಚುನಾವಣಾ ವಿಷಯವಾಗಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಗುಜರಾತ್ನಲ್ಲೂ ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಗುವ ಎಲ್ಲಾ ಸಾಧ್ಯತೆಗಳು ಇವೆ. <br /> <br /> ಈ ಎರಡೂ ರಾಜ್ಯಗಳಲ್ಲಿ ಎಲ್ಪಿಜಿ ಗ್ರಾಹಕರು ಸಿಲಿಂಡರ್ ಅಭಾವದ ಆತಂಕದಿಂದ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ್ದರು.<br /> <br /> ಎಲ್ಪಿಜಿ ಸಿಲಿಂಡರ್ ಮಿತಿಯನ್ನು ಒಂಬತ್ತಕ್ಕೆ ವಿಸ್ತರಿಸುವ ವಿಷಯವು ಇದೇ 9ರಂದು ಸೂರಜ್ಕುಂಡ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಮುಖರ ಸಮಾವೇಶದಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ. ಪಕ್ಷವು ಚುನಾವಣಾ ಸಂದರ್ಭದಲ್ಲಿ ಹೊರಡಿಸಿದ್ದ ಪ್ರಣಾಳಿಕೆಯಲ್ಲಿನ ಭರವಸೆಗಳು ಜಾರಿಯಾಗಿರುವ ಕುರಿತು ಚರ್ಚಿಸುವ ಉದ್ದೇಶದಿಂದ ಈ ಸಮಾವೇಶ ಸಂಘಟಿಸಲಾಗಿದೆ.<br /> <br /> ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಮಿತಿ ವಿಧಿಸಿದ ಬಳಿಕ ರಾಷ್ಟ್ರದ ಅನೇಕ ಕಡೆಗಳಲ್ಲಿ ವಾಣಿಜ್ಯ ಉದ್ದೇಶದ ಸಿಲಿಂಡರ್ಗಳು ಸೇರಿದಂತೆ ಎಲ್ಪಿಜಿ ಸಿಲಿಂಡರ್ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈ ಗೊಂದಲಗಳನ್ನು ನಿವಾರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕೂಡ ಕಾರ್ಯೋನ್ಮುಖವಾಗಿದೆ.<br /> <br /> ಸಿಲಿಂಡರ್ ಪೂರೈಕೆಯಲ್ಲಿನ ಗೊಂದಲದ ಬಗ್ಗೆ ವರದಿ ನೀಡುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಸೂಚಿಸಿದ್ದಾರೆ ಎಂದೂ ತಿಳಿದುಬಂದಿದೆ.<br /> <br /> ಸೆಪ್ಟೆಂಬರ್ನಲ್ಲಿ ಸಬ್ಸಿಡಿ ದರದ ಸಿಲಿಂಡರ್ಗಳನ್ನು 2 ತಿಂಗಳಿಗೆ ಒಂದರಂತೆ ವರ್ಷಕ್ಕೆ ಆರು ಮಾತ್ರ ಪೂರೈಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಹೆಚ್ಚುವರಿಯಾಗಿ ಸಿಲಿಂಡರ್ ಬೇಕಿದ್ದರೆ ಸಬ್ಸಿಡಿ ರಹಿತ ದರ ನೀಡಿ ಖರೀದಿಸುವಂತೆಯೂ ಹೇಳಿತ್ತು. <br /> <br /> ಸದ್ಯ ನವದೆಹಲಿಯಲ್ಲಿ ಸಬ್ಸಿಡಿ ದರದ ಸಿಲಿಂಡರ್ ದರ ರೂ 410.12 ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರ ರೂ 895.50 ರೂಪಾಯಿ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಬ್ಸಿಡಿ ದರದ ಅಡುಗೆ ಅನಿಲವನ್ನು (ಎಲ್ಪಿಜಿ) ವರ್ಷಕ್ಕೆ ಆರು ಸಿಲಿಂಡರ್ಗಳಿಗೆ ಮಿತಿ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ, ತನ್ನ ಈ ನಿರ್ಧಾರ ಮರು ಪರಿಶೀಲಿಸಿ ವರ್ಷಕ್ಕೆ ಒಂಬತ್ತು ಸಿಲಿಂಡರ್ ಪೂರೈಸಲು ಚಿಂತಿಸುತ್ತಿದೆ.<br /> <br /> ಗುಜರಾತ್ ವಿಧಾನಸಭಾ ಚುನಾವಣೆಯ ಬಳಿಕ (ಡಿ.17) ಈ ವಿಚಾರವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.<br /> <br /> ಆರ್ಥಿಕ ಸುಧಾರಣಾ ಕ್ರಮದಡಿಯಲ್ಲಿ ಸಬ್ಸಿಡಿ ದರದ ಎಲ್ಪಿಜಿ ಪೂರೈಕೆಗೆ ಮಿತಿ ಹೇರಿರುವ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡರೂ, ಅದಕ್ಕೆ ಕಾಂಗ್ರೆಸ್ನ ಅನೇಕ ಸಚಿವರು ಮತ್ತು ಸಂಸದರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. <br /> <br /> ಇವರು ತಮ್ಮ ಅಸಮಾಧಾನವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ್ಲ್ಲಲಿ ಹೇಳಿಕೊಂಡಿದ್ದಾರೆ. ಈ ನಿರ್ಧಾರದಿಂದ ಪಕ್ಷದ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆಂದೂ ತಿಳಿದುಬಂದಿದೆ.<br /> <br /> ಜತೆಗೆ ಯುಪಿಎ ಅಂಗಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳಿಂದ ಹಾಗೂ ವಿವಿಧ ಸಂಘಟನೆಗಳಿಂದಲೂ ಭಾರಿ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು. ಈ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಬಹುತೇಕರು ಒತ್ತಾಯಿಸಿದ್ದರು. ಕೆಲವರು ಮಿತಿಯನ್ನು ಆರರ ಬದಲು ಒಂಬತ್ತು ಸಿಲಿಂಡರ್ಗೆ ನಿಗದಿ ಮಾಡಬೇಕು ಎಂದೂ ಆಗ್ರಹಿಸಿದ್ದರು. ಆದರೆ, ಸರ್ಕಾರ ಇದನ್ನು ಒಪ್ಪಿರಲಿಲ್ಲ.<br /> <br /> ಇದೇ ಭಾನುವಾರ ಮತದಾನ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ವಿಚಾರವೇ ಪ್ರಮುಖ ಚುನಾವಣಾ ವಿಷಯವಾಗಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಗುಜರಾತ್ನಲ್ಲೂ ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಗುವ ಎಲ್ಲಾ ಸಾಧ್ಯತೆಗಳು ಇವೆ. <br /> <br /> ಈ ಎರಡೂ ರಾಜ್ಯಗಳಲ್ಲಿ ಎಲ್ಪಿಜಿ ಗ್ರಾಹಕರು ಸಿಲಿಂಡರ್ ಅಭಾವದ ಆತಂಕದಿಂದ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ್ದರು.<br /> <br /> ಎಲ್ಪಿಜಿ ಸಿಲಿಂಡರ್ ಮಿತಿಯನ್ನು ಒಂಬತ್ತಕ್ಕೆ ವಿಸ್ತರಿಸುವ ವಿಷಯವು ಇದೇ 9ರಂದು ಸೂರಜ್ಕುಂಡ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಮುಖರ ಸಮಾವೇಶದಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ. ಪಕ್ಷವು ಚುನಾವಣಾ ಸಂದರ್ಭದಲ್ಲಿ ಹೊರಡಿಸಿದ್ದ ಪ್ರಣಾಳಿಕೆಯಲ್ಲಿನ ಭರವಸೆಗಳು ಜಾರಿಯಾಗಿರುವ ಕುರಿತು ಚರ್ಚಿಸುವ ಉದ್ದೇಶದಿಂದ ಈ ಸಮಾವೇಶ ಸಂಘಟಿಸಲಾಗಿದೆ.<br /> <br /> ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಮಿತಿ ವಿಧಿಸಿದ ಬಳಿಕ ರಾಷ್ಟ್ರದ ಅನೇಕ ಕಡೆಗಳಲ್ಲಿ ವಾಣಿಜ್ಯ ಉದ್ದೇಶದ ಸಿಲಿಂಡರ್ಗಳು ಸೇರಿದಂತೆ ಎಲ್ಪಿಜಿ ಸಿಲಿಂಡರ್ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈ ಗೊಂದಲಗಳನ್ನು ನಿವಾರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕೂಡ ಕಾರ್ಯೋನ್ಮುಖವಾಗಿದೆ.<br /> <br /> ಸಿಲಿಂಡರ್ ಪೂರೈಕೆಯಲ್ಲಿನ ಗೊಂದಲದ ಬಗ್ಗೆ ವರದಿ ನೀಡುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಸೂಚಿಸಿದ್ದಾರೆ ಎಂದೂ ತಿಳಿದುಬಂದಿದೆ.<br /> <br /> ಸೆಪ್ಟೆಂಬರ್ನಲ್ಲಿ ಸಬ್ಸಿಡಿ ದರದ ಸಿಲಿಂಡರ್ಗಳನ್ನು 2 ತಿಂಗಳಿಗೆ ಒಂದರಂತೆ ವರ್ಷಕ್ಕೆ ಆರು ಮಾತ್ರ ಪೂರೈಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಹೆಚ್ಚುವರಿಯಾಗಿ ಸಿಲಿಂಡರ್ ಬೇಕಿದ್ದರೆ ಸಬ್ಸಿಡಿ ರಹಿತ ದರ ನೀಡಿ ಖರೀದಿಸುವಂತೆಯೂ ಹೇಳಿತ್ತು. <br /> <br /> ಸದ್ಯ ನವದೆಹಲಿಯಲ್ಲಿ ಸಬ್ಸಿಡಿ ದರದ ಸಿಲಿಂಡರ್ ದರ ರೂ 410.12 ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರ ರೂ 895.50 ರೂಪಾಯಿ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>