ಪ್ರಕೃತಿ ಮುನಿಸಿಕೊಂಡಿದೆ. ಸೌಂದರ್ಯದ ಖನಿ ಜಮ್ಮು ಮತ್ತು ಕಾಶ್ಮೀರ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಹಸಿರಿನ ಸರದೌತಣ ಉಣಬಡಿಸುವ ನಾಡಿನಲ್ಲಿ ಅನುರಣಿಸುತ್ತಿರುವ ನೋವು, ಅಳಲಿನ ಆಕ್ರಂದನ ದೇಶದ ಅಂತಃಕರಣವನ್ನು ತಟ್ಟಿದೆ. ಆಹಾರ, ಆಶ್ರಯ ಹಾಗೂ ಜೀವ ಜಲಕ್ಕಾಗಿ ಮೊರೆಯಿಡುತ್ತಿರುವ ಸಂತ್ರಸ್ತರಿಗೆ 'ನೆರವು ನೀಡಲು ಕೈ ಜೋಡಿಸಿ' ಎಂಬ ಸಂದೇಶ ಸಾರುವ ಕಲಾಕೃತಿಯನ್ನು ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲು ತೀರದಲ್ಲಿ ಭಾನುವಾರ ರಚಿಸಿದ ಬಗೆ... –ಪಿಟಿಐ ಚಿತ್ರ