<p><strong>ಪಣಜಿ (ಐಎಎನ್ಎಸ್</strong>): ಸೂಕ್ಷ್ಮ ಪರಿಸರ ಪ್ರದೇಶವೆಂದೇ ಗುರುತಿಸುವ ಪಶ್ಚಿಮ ಘಟ್ಟಗಳ ಸಂಕ್ಷಣೆ ಕುರಿತು ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ (ಎಚ್ಎಲ್ಡಬ್ಲುಜಿ) ಸಿದ್ಧಪಡಿಸಿರುವ ವರದಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಅದೊಂದು `ನಿರುಂಕುಶ ಮನಸ್ಥಿತಿಯವರು' ತಯಾರಿಸಿರುವ ವರದಿ ಎಂದು ಟೀಕಿಸಿದ್ದಾರೆ.<br /> <br /> ಈ ವರದಿಯಿಂದ ಪಶ್ಚಿಮ ಘಟ್ಟಗಳಲ್ಲಿರುವ ಸ್ವಾಭಾವಿಕ ಸಂಪನ್ಮೂಲಗಳು ಲೂಟಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದು ಶ್ರೀಮಂತರು, ಅಧಿಕಾರಶಾಹಿ ವರ್ಗ ಹಾಗೂ ಜಾಗತೀಕರಣ ಪ್ರಪಂಚವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದ ವರದಿಯಾಗಿದೆ ಎಂದು ದೂರಿದ್ದಾರೆ.<br /> <br /> `ಕಸ್ತೂರಿ ರಂಗನ್ ತಂಡದ ವರದಿಯಲ್ಲಿ ದೇಶದ ನೈರುತ್ಯ ಭಾಗಕ್ಕೆ ನೀರುಣಿಸುವ ಜಲಪಾತ್ರೆಯಾಗಿರುವ ಪಶ್ಚಿಮ ಘಟ್ಟವನ್ನು ಸಮಗ್ರವಾಗಿ ರಕ್ಷಿಸುವ ಬದಲು, ಆರ್ಥಿಕವಾಗಿ ಅತಿಯಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದೆ' ಎಂದು ಗಾಡ್ಗೀಳ್ ಆರೋಪಿಸಿದ್ದಾರೆ.<br /> <br /> ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅಧ್ಯಯನ ನಡೆಸಿರುವ ಇಸ್ರೋ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್ ನೇತೃತ್ವದ ಹತ್ತು ಸದಸ್ಯರ ಉನ್ನತಮಟ್ಟದ ಕಾರ್ಯಪಡೆ, ಕೇಂದ್ರ ಸರ್ಕಾರಕ್ಕೆ ಕೆಲವು ಸಂಗತಿಗಳನ್ನು ಶಿಫಾರಸು ಮಾಡಿದೆ. `ಎಚ್ಎಲ್ಡಬ್ಲುಜಿ' ವರದಿಗಿಂತ ಮುಂಚೆ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ವರದಿ ಸಲ್ಲಿಸಿದ್ದರು. ಅದರಲ್ಲಿ ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ಗೋವಾದ ಗಣಿಗಾರಿಕೆಯನ್ನು ಹತ್ತಿಕ್ಕುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದರು.<br /> <br /> `ನಾವು ಪಶ್ಚಿಮ ಘಟ್ಟಗಳ ಕ್ಷೇತ್ರ ಭೇಟಿ ಮಾಡಿ, ಅಲ್ಲಿನ ಜನರನ್ನು ಸಂದರ್ಶಿಸಿ, ಚರ್ಚೆ ನಡೆಸಿ ತಯಾರಿಸಿರುವ ವರದಿಯನ್ನು ಕೇಂದ್ರದ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ್ದೇವೆ. ಆ ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ರಕ್ಷಿಸುವಲ್ಲಿ ತಳಮಟ್ಟದ ಮಾಹಿತಿಗಳು ಹೇಗೆ ನೆರವಾಗುತ್ತವೆ ಎಂಬ ವಿಚಾರವನ್ನು ಸೇರಿಸಿದ್ದೆವು' ಎಂದು ಗಾಡ್ಗೀಳ್ ಪರಿಸರ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ (ಐಎಎನ್ಎಸ್</strong>): ಸೂಕ್ಷ್ಮ ಪರಿಸರ ಪ್ರದೇಶವೆಂದೇ ಗುರುತಿಸುವ ಪಶ್ಚಿಮ ಘಟ್ಟಗಳ ಸಂಕ್ಷಣೆ ಕುರಿತು ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ (ಎಚ್ಎಲ್ಡಬ್ಲುಜಿ) ಸಿದ್ಧಪಡಿಸಿರುವ ವರದಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಅದೊಂದು `ನಿರುಂಕುಶ ಮನಸ್ಥಿತಿಯವರು' ತಯಾರಿಸಿರುವ ವರದಿ ಎಂದು ಟೀಕಿಸಿದ್ದಾರೆ.<br /> <br /> ಈ ವರದಿಯಿಂದ ಪಶ್ಚಿಮ ಘಟ್ಟಗಳಲ್ಲಿರುವ ಸ್ವಾಭಾವಿಕ ಸಂಪನ್ಮೂಲಗಳು ಲೂಟಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದು ಶ್ರೀಮಂತರು, ಅಧಿಕಾರಶಾಹಿ ವರ್ಗ ಹಾಗೂ ಜಾಗತೀಕರಣ ಪ್ರಪಂಚವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದ ವರದಿಯಾಗಿದೆ ಎಂದು ದೂರಿದ್ದಾರೆ.<br /> <br /> `ಕಸ್ತೂರಿ ರಂಗನ್ ತಂಡದ ವರದಿಯಲ್ಲಿ ದೇಶದ ನೈರುತ್ಯ ಭಾಗಕ್ಕೆ ನೀರುಣಿಸುವ ಜಲಪಾತ್ರೆಯಾಗಿರುವ ಪಶ್ಚಿಮ ಘಟ್ಟವನ್ನು ಸಮಗ್ರವಾಗಿ ರಕ್ಷಿಸುವ ಬದಲು, ಆರ್ಥಿಕವಾಗಿ ಅತಿಯಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದೆ' ಎಂದು ಗಾಡ್ಗೀಳ್ ಆರೋಪಿಸಿದ್ದಾರೆ.<br /> <br /> ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅಧ್ಯಯನ ನಡೆಸಿರುವ ಇಸ್ರೋ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್ ನೇತೃತ್ವದ ಹತ್ತು ಸದಸ್ಯರ ಉನ್ನತಮಟ್ಟದ ಕಾರ್ಯಪಡೆ, ಕೇಂದ್ರ ಸರ್ಕಾರಕ್ಕೆ ಕೆಲವು ಸಂಗತಿಗಳನ್ನು ಶಿಫಾರಸು ಮಾಡಿದೆ. `ಎಚ್ಎಲ್ಡಬ್ಲುಜಿ' ವರದಿಗಿಂತ ಮುಂಚೆ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ವರದಿ ಸಲ್ಲಿಸಿದ್ದರು. ಅದರಲ್ಲಿ ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ಗೋವಾದ ಗಣಿಗಾರಿಕೆಯನ್ನು ಹತ್ತಿಕ್ಕುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದರು.<br /> <br /> `ನಾವು ಪಶ್ಚಿಮ ಘಟ್ಟಗಳ ಕ್ಷೇತ್ರ ಭೇಟಿ ಮಾಡಿ, ಅಲ್ಲಿನ ಜನರನ್ನು ಸಂದರ್ಶಿಸಿ, ಚರ್ಚೆ ನಡೆಸಿ ತಯಾರಿಸಿರುವ ವರದಿಯನ್ನು ಕೇಂದ್ರದ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ್ದೇವೆ. ಆ ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ರಕ್ಷಿಸುವಲ್ಲಿ ತಳಮಟ್ಟದ ಮಾಹಿತಿಗಳು ಹೇಗೆ ನೆರವಾಗುತ್ತವೆ ಎಂಬ ವಿಚಾರವನ್ನು ಸೇರಿಸಿದ್ದೆವು' ಎಂದು ಗಾಡ್ಗೀಳ್ ಪರಿಸರ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>