<p><strong>ನವದೆಹಲಿ (ಪಿಟಿಐ): </strong>ಕಾಂಗ್ರೆಸ್ ಒಂದು `ಮುಳುಗುತ್ತಿರುವ ಹಡಗು' ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಕಾಂಗ್ರೆಸ್ನ ಹಿರಿಯ ಮುಖಂಡರು ಪಕ್ಷ ತ್ಯಜಿಸಲು ನಿರ್ಧರಿಸುತ್ತಿರುವಾಗಲೇ, ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.<br /> <br /> ಈ ಕುರಿತಂತೆ ತಮ್ಮ ಬ್ಲಾಗ್ನಲ್ಲಿ ಬರೆದಿರುವ ಅವರು `ಸೋಲುವ ಭಯದಿಂದ ಮುಳುಗುತ್ತಿರುವ ಕಾಂಗ್ರೆಸ್ ಹಡಗನ್ನು ತೊರೆಯಲು ಹಲವು ಮುಖಂಡರು ನಿರ್ಧರಿಸಿರುವಾಗಲೇ, ಕೆಲವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಉಳಿದವರು ಅನಾರೋಗ್ಯದ ಕಟ್ಟುಕಥೆ ಹೇಳಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ' ಎಂದಿದ್ದಾರೆ.<br /> <br /> ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ದಾಳಿ ನಡೆಸಿರುವ ಜೇಟ್ಲಿ ಅವರು `ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶಗಳನ್ನು ಹಾಸ್ಯಾಸ್ಪದ ಎಂದು ಅವರು (ರಾಹುಲ್) ಕರೆದಿರುವುದು, ಮುಳುಗುತ್ತಿರುವ ಪಕ್ಷದ ನೈತಿಕತೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳುತ್ತಿರುವ ಬಡಿವಾರದ ಮಾತುಗಳೆಂದು ಅರ್ಥಮಾಡಿಕೊಳ್ಳಬಹುದಾಗಿದೆ. ಒಂದೊಮ್ಮೆ ಅವರು ಇದನ್ನು ಪ್ರಾಮಾಣಿಕವಾಗಿ ನಿಜವೆಂದು ಒಪ್ಪಿಕೊಳ್ಳದಿದ್ದರೆ ವಾಸ್ತವವೇ ಅವರಿಗೆ ಅರ್ಥವಾಗಿಲ್ಲ ಎಂದು ಭಾವಿಸಬಹುದು ' ಎಂದು ಬರೆದಿದ್ದಾರೆ.<br /> <br /> ಕಳೆದ ಬಾರಿ ಯುಪಿಎಯೊಂದಿಗೆ ಮೈತ್ರಿಯನ್ನು ವಿಸ್ತರಿಸಿದ್ದ ಹಲವು ಮಿತ್ರಪಕ್ಷಗಳು ಇದೀಗ ಕಾಂಗ್ರೆಸ್ನಿಂದ ತಾವಾಗಿಯೇ ದೂರ ಸರಿಯುತ್ತಿವೆ ಎಂದು ಜೇಟ್ಲಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕಾಂಗ್ರೆಸ್ ಒಂದು `ಮುಳುಗುತ್ತಿರುವ ಹಡಗು' ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಕಾಂಗ್ರೆಸ್ನ ಹಿರಿಯ ಮುಖಂಡರು ಪಕ್ಷ ತ್ಯಜಿಸಲು ನಿರ್ಧರಿಸುತ್ತಿರುವಾಗಲೇ, ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.<br /> <br /> ಈ ಕುರಿತಂತೆ ತಮ್ಮ ಬ್ಲಾಗ್ನಲ್ಲಿ ಬರೆದಿರುವ ಅವರು `ಸೋಲುವ ಭಯದಿಂದ ಮುಳುಗುತ್ತಿರುವ ಕಾಂಗ್ರೆಸ್ ಹಡಗನ್ನು ತೊರೆಯಲು ಹಲವು ಮುಖಂಡರು ನಿರ್ಧರಿಸಿರುವಾಗಲೇ, ಕೆಲವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಉಳಿದವರು ಅನಾರೋಗ್ಯದ ಕಟ್ಟುಕಥೆ ಹೇಳಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ' ಎಂದಿದ್ದಾರೆ.<br /> <br /> ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ದಾಳಿ ನಡೆಸಿರುವ ಜೇಟ್ಲಿ ಅವರು `ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶಗಳನ್ನು ಹಾಸ್ಯಾಸ್ಪದ ಎಂದು ಅವರು (ರಾಹುಲ್) ಕರೆದಿರುವುದು, ಮುಳುಗುತ್ತಿರುವ ಪಕ್ಷದ ನೈತಿಕತೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳುತ್ತಿರುವ ಬಡಿವಾರದ ಮಾತುಗಳೆಂದು ಅರ್ಥಮಾಡಿಕೊಳ್ಳಬಹುದಾಗಿದೆ. ಒಂದೊಮ್ಮೆ ಅವರು ಇದನ್ನು ಪ್ರಾಮಾಣಿಕವಾಗಿ ನಿಜವೆಂದು ಒಪ್ಪಿಕೊಳ್ಳದಿದ್ದರೆ ವಾಸ್ತವವೇ ಅವರಿಗೆ ಅರ್ಥವಾಗಿಲ್ಲ ಎಂದು ಭಾವಿಸಬಹುದು ' ಎಂದು ಬರೆದಿದ್ದಾರೆ.<br /> <br /> ಕಳೆದ ಬಾರಿ ಯುಪಿಎಯೊಂದಿಗೆ ಮೈತ್ರಿಯನ್ನು ವಿಸ್ತರಿಸಿದ್ದ ಹಲವು ಮಿತ್ರಪಕ್ಷಗಳು ಇದೀಗ ಕಾಂಗ್ರೆಸ್ನಿಂದ ತಾವಾಗಿಯೇ ದೂರ ಸರಿಯುತ್ತಿವೆ ಎಂದು ಜೇಟ್ಲಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>