ನವದೆಹಲಿ (ಪಿಟಿಐ): ಪತಿಯ ಕುಟುಂಬದ ಸದಸ್ಯರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಛತ್ತೀಸ್ಗಡದ ವಕೀಲೆಯೊಬ್ಬರು ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಅಳುತ್ತಾ ಕುಸಿದುಬಿದ್ದ ಘಟನೆ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ಆರ್. ಎಂ ಲೋಧಾ ನೇತೃತ್ವದ ನ್ಯಾಯಪೀಠವು ದಿನದ ಕಲಾಪ ಮುಗಿಸಿ ಹೊರಡುತ್ತಿದ್ದ ವೇಳೆ, ಅತ್ಯಾಚಾರದ ಬಗ್ಗೆ ದೂರು ನೀಡಿದ್ದರೂ ಛತ್ತೀಸ್ಗಡ ಪೊಲೀಸರಿಂದ ತಮಗೆ ನ್ಯಾಯ ದೊರೆತಿಲ್ಲ ಎಂದು ಅಳುತ್ತ ಮಹಿಳಾ ವಕೀಲೆ ಕುಸಿದುಬಿದ್ದರು.
ಇತರ ಮಹಿಳಾ ವಕೀಲರು ಅವರ ಬಳಿ ತೆರಳಿ ವಿಚಾರಿಸಿದಾಗ ಅವರು ನುಸಿ (ಡಾಮರು) ಗುಳಿಗೆಯನ್ನು ಸೇವಿಸಿರುವುದು ಗೊತ್ತಾಯಿತು. ಕೂಡಲೇ ಪೊಲೀಸರನ್ನು ಕರೆಯಿಸಲಾಯಿತು. ನಂತರ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು.
ನ್ಯಾಯಮೂರ್ತಿಗಳು ತಾವು ಸ್ವಪ್ರೇರಣೆಯಿಂದ ಮಹಿಳೆಯ ದೂರನ್ನು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿದರು.
2013ರ ನವೆಂಬರ್ನಲ್ಲಿಯೇ ತಾವು ದೂರು ಸಲ್ಲಿಸಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ವಕೀಲೆ ದೂರಿದ್ದಾರೆ.