ನವದೆಹಲಿ (ಪಿಟಿಐ): ಖನಿಜಗಳ ಮಾಲೀಕತ್ವ ಭೂ ಮಾಲೀಕನಿಗೆ ಸೇರಿರುತ್ತದೆ ಹೊರತು ಸರ್ಕಾರಕ್ಕೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠವು 'ಮಣ್ಣಿನೊಳಗಿನ ಭಾಗ ಅಥವಾ ಖನಿಜ ಸಂಪತ್ತಿಗೆ ಸರ್ಕಾರ ಮಾಲೀಕ ಎಂದು ಘೋಷಿಸುವ ಯಾವುದೇ ಕಾನೂನು ರಾಷ್ಟ್ರದಲ್ಲಿ ಇಲ್ಲ ಎಂದು ಹೇಳಿತು.
ಮಣ್ಣಿನ ಒಳಗಿನ ಎಲ್ಲ ಖನಿಜ ಸಂಪತ್ತಿನ ಹಕ್ಕುಗಳು ಸರ್ಕಾರಕ್ಕೆ ಸೇರಿವೆ ಎಂಬುದಾಗಿ ಘೋಷಿಸುವಂತಹ ಯಾವುದೇ ವಿಧಿ ಕಾನೂನಿನಲ್ಲಿ ಇಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದು ಪೀಠ ತಿಳಿಸಿತು.