‘ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಸೇನೆಯನ್ನು ಕರೆಸಲಾಗಿದ್ದು, ಅಹಮದಾಬಾದ್, ಸೂರತ್, ರಾಜ್ಕೋಟ್, ಮೆಹಸಾನ್, ಪಟಾನ್, ಪಾಲಂಪುರ್, ಉಂಝಾ, ವಿಸ್ನಗರ ಹಾಗೂ ಜಾಮ್ ನಗರಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಪಟೇಲ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಕಾನೂನು ಹಾಗೂ ಸುವ್ಯವಸ್ಥೆ ನಿಯಂತ್ರಿಸುವುದಕ್ಕೆ ಸೇನೆಯ ತುಕಡಿಗಳನ್ನು ಕರೆಸಲಾಗಿದ್ದು, ಅರೆ ಸೇನಾಪಡೆಯ ಸುಮಾರು 50ಸಾವಿರ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ ಎಂದು ಅಹಮದಾಬಾದ್ ಜಿಲ್ಲಾಧಿಕಾರಿ ರಾಜ್ಕುಮಾರ್ ಬೇಣಿವಾಲ್ ಗುರುವಾರ ತಿಳಿಸಿದ್ದಾರೆ.