ನವದೆಹಲಿ (ಪಿಟಿಐ): ಕೋಲ್ಕತ್ತದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಿಹಾರದ ಯುವತಿಯ ಕುಟುಂಬದವರು ರಾಷ್ಟ್ರಪತಿ ಪ್ರಣವ್್ ಮುಖರ್ಜಿ ಅವರನ್ನು ಮಂಗಳವಾರ ಭೇಟಿಯಾಗಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರಪತಿ ಭವನದಲ್ಲಿ ಮುಖರ್ಜಿ ಅವರನ್ನು ಭೇಟಿಯಾದ ಕುಟುಂಬದ ಸದಸ್ಯರ ಜತೆ ಸಿಪಿಎಂ ಪಾಲಿಟ್ಬ್ಯುರೊ ಸದಸ್ಯೆ ಬೃಂದಾ ಕಾರಟ್್ ಮತ್ತಿತರ ಮಹಿಳಾ ಮುಖಂಡರು ಕೂಡ ಇದ್ದರು.
ಅಕ್ಟೋಬರ್ನಲ್ಲಿ ಈ ಯುವತಿ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಂತರ ಕಾಮುಕರು ಆಕೆಯನ್ನು ಸಜೀವದಹನ ಮಾಡಲು ಯತ್ನಿಸಿದ್ದರು. ಸುಟ್ಟಗಾಯಗಳಿಂದಾಗಿ ಡಿಸೆಂಬರ್್ 23ರಂದು ಆಕೆ ಕೊನೆಯುಸಿರೆಳೆದಿದ್ದಳು.
ತನಿಖೆಗೆ ಆಗ್ರಹ: ‘ಯುವತಿಯ ಕುಟುಂಬದವರನ್ನು ಕೆಟ್ಟದಾಗಿ ನಡೆಸಿಕೊಂಡ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು’ ಎಂದು ಪಶ್ಚಿಮಬಂಗಾಳ ಸರ್ಕಾರವನ್ನು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.
‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದೇವೆ’ ಎಂದು ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಹೇಳಿದ್ದಾರೆ.