ಅಗರ್ತಲಾ: 25 ವರ್ಷಗಳ ಕಮ್ಯುನಿಸ್ಟ್ ಪಕ್ಷದ ಆಡಳಿತ ಅಂತ್ಯಗೊಂಡು ಬಿಜೆಪಿ ಸರ್ಕಾರ ಗದ್ದುಗೆಗೇರಿದ ತಕ್ಷಣವೇ ತ್ರಿಪುರಾದಲ್ಲಿ ಸಿಪಿಎಂ ಕಚೇರಿಗಳ ಮೇಲೆ ಆಕ್ರಮಣ ನಡೆದಿದೆ. ದಕ್ಷಿಣ ತ್ರಿಪುರಾದ ಬೆಲೋನಿಯಾದಲ್ಲಿ ಸ್ಥಾಪಿಸಿದ್ದ ಲೆನಿನ್ ಪ್ರತಿಮೆಯನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ.
ಬಿಜೆಪಿ ಕಾರ್ಯಕರ್ತರೇ ಬುಲ್ಡೋಜರ್ ತಂದಿದ್ದು ಪ್ರತಿಮೆಯನ್ನು ಕೆಡವಿದಾಗ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.