ನವದೆಹಲಿ (ಐಎಎನ್ಎಸ್): ನನ್ನ ಜೀವಿತಾವಧಿಯಲ್ಲೇ ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನವು ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಹೇಳಿದರು.
ನೌಕಾಪಡೆ ದಿನಾಚರಣೆ ಸಮಾರಂಭದ ಔತಣಕೂಟದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದ ಅವರು `ಕಾಶ್ಮೀರ ಸಮಸ್ಯೆ ಭಾರತದೊಂದಿಗೆ ನಾಲ್ಕನೇ ಯುದ್ಧಕ್ಕೆ ಕಾರಣವಾಗುತ್ತದೆ' ಎಂಬ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.