ನವದೆಹಲಿ (ಪಿಟಿಐ): ಭಾರತೀಯ ಮೀನುಗಾರರಿಬ್ಬರ ಹತ್ಯೆಗೆ ಸಂಬಂಧಿಸಿ ಇಟಲಿ ನಾವಿಕರಿಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಕೊಲೆ ಆರೋಪ ಹೊರಿಸಿದ್ದರ ಹೊರತಾಗಿಯೂ ಅವರಿಗೆ ಮರಣದಂಡನೆ ಶಿಕ್ಷೆ ನೀಡುವುದಿಲ್ಲ ಎಂಬ ಭಾರತ ನೀಡಿದ ಭರವಸೆಗೆ ಬದ್ಧವಾಗಿರುವುದಾಗಿ ಕೇಂದ್ರ ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್ ತಿಳಿಸಿದ್ದಾರೆ.