<p><strong>ಲೋಕಪಾಲ ಮಸೂದೆಗೆ ಬದ್ಧ- ಪ್ರಧಾನಿ ಸಿಂಗ್<br /> ಅಮೃತಸರ (ಐಎಎನ್ಎಸ್):</strong> ಲೋಕಪಾಲ ಮಸೂದೆಗೆ ಸಂಸತ್ನಲ್ಲಿ ಅಡ್ಡಿಯಾಗಿದ್ದರೂ ಸಹ, ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಯುಪಿಎ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.<br /> <br /> ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಗೆ ಆಗಮಿಸಿರುವ ಪ್ರಧಾನಿ ಸಿಂಗ್ ಅಮೃತಸರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದರು. ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಗಂಭೀರ ಸಮಸ್ಯೆಯಾಗಿದೆ. ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪ್ರಬಲ ಲೋಕಪಾಲ ಮಸೂದೆಗೆ ತಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದರು.<br /> <br /> <strong>`ಕೊಲವೆರಿ ಡಿ~ಗೆ ಮನಸೋತ ಬಿಜೆಪಿ<br /> ಪಣಜಿ (ಪಿಟಿಐ):</strong> ಚುನಾವಣಾ ಪ್ರಚಾರಕ್ಕೆ ರಂಗು ತರಲು ಮತ್ತು ಮತದಾರರನ್ನು ತನ್ನತ್ತ ಸೆಳೆಯುವ ಯತ್ನವಾಗಿ ಬಿಜೆಪಿಯು ಜನಪ್ರಿಯ ಚಲನಚಿತ್ರ ಗೀತೆ `ಕೊಲವೆರಿ ಡಿ~ ಹಾಡನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.<br /> <br /> ಹಿರಿಯ ಸಾಹಿತಿ ವಿಷ್ಣು ವಾಘ್ ಅವರು ಈಚೆಗೆ ಬಿಜೆಪಿ ಸೇರಿದ್ದು, ಕವಿತೆಯೊಂದನ್ನು ರಚನೆ ಮಾಡಿದ್ದಾರೆ. ಈ ಕವಿತೆಯನ್ನು `ಕೊಲವೇರಿ ಡಿ~ ಹಾಡಿನ ಸಂಗೀತಕ್ಕೆ ಅಳವಡಿಸಲಾಗಿದ್ದು, ಕೊಂಚ ಬದಲಾವಣೆ ಮಾಡಿ `ಕೊಲವೇರಿ ಡಿ~ ಬದಲಿಗೆ ಬಿಜೆಪಿ ಚಿನ್ಹೆ ಕಮಲವನ್ನು ಒಳಗೊಂಡಂತೆ `ಕಮಲವಾರಿ ಡಿ~ ಎನ್ನುವ ಹಾಡನ್ನು ರಚಿಸಲಾಗಿದೆ. ಪ್ರಚಾರದ ವೇಳೆ ಹಾಡನ್ನು ಬಳಸಿಕೊಳ್ಳಲು ಸಿದ್ಧತೆ ನಡೆದಿದೆ.<br /> <br /> ಮಾರ್ಚ್ 3ರಂದು ಗೋವಾದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದೆ. ಇದಕ್ಕಾಗಿ `ಜನ ಸಂಪರ್ಕ ಅಭಿಯಾನ~ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುತ್ತಿದೆ.<br /> <br /> <strong>ನವಜೋತ್ ಸಿಂಗ್ ಸಿಧು ಪತ್ನಿ ಚುನಾವಣೆ ಕಣಕ್ಕೆ<br /> ಅಮೃತಸರ (ಪಿಟಿಐ):</strong> ಕ್ರಿಕೆಟಿಗ ಹಾಗೂ ಸಂಸದ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಅವರು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.<br /> <br /> ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಸಿಂಪರ್ಪ್ರೀತ್ ಕೌರ್ ಬಾಟಿಯಾ ಪಕ್ಷೇತರ ಅಭ್ಯರ್ಥಿಯಾಗಿದ್ದು, ನವಜೋತ್ ಕೌರ್ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲಿಗೆ ಸಿಂಪರ್ಪ್ರೀತ್ ಕೌರ್ ಅವರಿಗೆ ಟಿಕೆಟ್ ನೀಡಿತ್ತಾದರೂ, ಕೊನೆ ಗಳಿಗೆಯಲ್ಲಿ ಟಿಕೆಟ್ ನಿರಾಕರಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಪಾಲ ಮಸೂದೆಗೆ ಬದ್ಧ- ಪ್ರಧಾನಿ ಸಿಂಗ್<br /> ಅಮೃತಸರ (ಐಎಎನ್ಎಸ್):</strong> ಲೋಕಪಾಲ ಮಸೂದೆಗೆ ಸಂಸತ್ನಲ್ಲಿ ಅಡ್ಡಿಯಾಗಿದ್ದರೂ ಸಹ, ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಯುಪಿಎ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.<br /> <br /> ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಗೆ ಆಗಮಿಸಿರುವ ಪ್ರಧಾನಿ ಸಿಂಗ್ ಅಮೃತಸರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದರು. ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಗಂಭೀರ ಸಮಸ್ಯೆಯಾಗಿದೆ. ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪ್ರಬಲ ಲೋಕಪಾಲ ಮಸೂದೆಗೆ ತಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದರು.<br /> <br /> <strong>`ಕೊಲವೆರಿ ಡಿ~ಗೆ ಮನಸೋತ ಬಿಜೆಪಿ<br /> ಪಣಜಿ (ಪಿಟಿಐ):</strong> ಚುನಾವಣಾ ಪ್ರಚಾರಕ್ಕೆ ರಂಗು ತರಲು ಮತ್ತು ಮತದಾರರನ್ನು ತನ್ನತ್ತ ಸೆಳೆಯುವ ಯತ್ನವಾಗಿ ಬಿಜೆಪಿಯು ಜನಪ್ರಿಯ ಚಲನಚಿತ್ರ ಗೀತೆ `ಕೊಲವೆರಿ ಡಿ~ ಹಾಡನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.<br /> <br /> ಹಿರಿಯ ಸಾಹಿತಿ ವಿಷ್ಣು ವಾಘ್ ಅವರು ಈಚೆಗೆ ಬಿಜೆಪಿ ಸೇರಿದ್ದು, ಕವಿತೆಯೊಂದನ್ನು ರಚನೆ ಮಾಡಿದ್ದಾರೆ. ಈ ಕವಿತೆಯನ್ನು `ಕೊಲವೇರಿ ಡಿ~ ಹಾಡಿನ ಸಂಗೀತಕ್ಕೆ ಅಳವಡಿಸಲಾಗಿದ್ದು, ಕೊಂಚ ಬದಲಾವಣೆ ಮಾಡಿ `ಕೊಲವೇರಿ ಡಿ~ ಬದಲಿಗೆ ಬಿಜೆಪಿ ಚಿನ್ಹೆ ಕಮಲವನ್ನು ಒಳಗೊಂಡಂತೆ `ಕಮಲವಾರಿ ಡಿ~ ಎನ್ನುವ ಹಾಡನ್ನು ರಚಿಸಲಾಗಿದೆ. ಪ್ರಚಾರದ ವೇಳೆ ಹಾಡನ್ನು ಬಳಸಿಕೊಳ್ಳಲು ಸಿದ್ಧತೆ ನಡೆದಿದೆ.<br /> <br /> ಮಾರ್ಚ್ 3ರಂದು ಗೋವಾದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದೆ. ಇದಕ್ಕಾಗಿ `ಜನ ಸಂಪರ್ಕ ಅಭಿಯಾನ~ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುತ್ತಿದೆ.<br /> <br /> <strong>ನವಜೋತ್ ಸಿಂಗ್ ಸಿಧು ಪತ್ನಿ ಚುನಾವಣೆ ಕಣಕ್ಕೆ<br /> ಅಮೃತಸರ (ಪಿಟಿಐ):</strong> ಕ್ರಿಕೆಟಿಗ ಹಾಗೂ ಸಂಸದ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಅವರು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.<br /> <br /> ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಸಿಂಪರ್ಪ್ರೀತ್ ಕೌರ್ ಬಾಟಿಯಾ ಪಕ್ಷೇತರ ಅಭ್ಯರ್ಥಿಯಾಗಿದ್ದು, ನವಜೋತ್ ಕೌರ್ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲಿಗೆ ಸಿಂಪರ್ಪ್ರೀತ್ ಕೌರ್ ಅವರಿಗೆ ಟಿಕೆಟ್ ನೀಡಿತ್ತಾದರೂ, ಕೊನೆ ಗಳಿಗೆಯಲ್ಲಿ ಟಿಕೆಟ್ ನಿರಾಕರಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>