<p><strong>ನವದೆಹಲಿ (ಪಿಟಿಐ): </strong>`ಪಾಕಿಸ್ತಾನವು ನಮ್ಮ ಅವಳಿ ಸಹೋದರನಾಗಿದ್ದು, ಭಾರತ ಮಹಾನ್ ಸ್ನೇಹಿತ~ ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಬುಧವಾರ ಇಲ್ಲಿ ಹೇಳುವ ಮೂಲಕ ಭಾರತದೊಂದಿಗೆ ತಮ್ಮ ರಾಷ್ಟ್ರ ಮಾಡಿಕೊಂಡಿರುವ ತಂತ್ರಗಾರಿಕೆಯ ಪಾಲುದಾರಿಕೆ ಒಪ್ಪಂದವು ಪಾಕ್ ಅನ್ನು ಗುರಿಯಾಗಿಸಿದ್ದಲ್ಲ ಎಂಬುದನ್ನು ಪುನರುಚ್ಚರಿಸಿದರು.<br /> <br /> ತಮ್ಮ ಎರಡು ದಿನಗಳ ಭಾರತ ಪ್ರವಾಸ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅಬ್ಸವರ್ ರಿಸರ್ಚ್ ಫೌಂಡೇಷನ್ ಏರ್ಪಡಿಸಿದ್ದ ಮೂರನೇ ಆರ್.ಕೆ.ಮಿಶ್ರಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ಸಂವಾದದಲ್ಲಿ ಪಾಲ್ಗೊಂಡ ಅವರು, `ನಮ್ಮ ಸ್ನೇಹಿತ (ಭಾರತ)ನೊಂದಿಗೆ ಮಾಡಿಕೊಂಡ ಒಪ್ಪಂದವು ಸಹೋದರ (ಪಾಕ್)ನಿಗೆ ಯಾವುದೇ ತೊಂದರೆಯಾಗದು~ ಎಂದು ಪ್ರತಿಕ್ರಿಯಿಸಿದರು.<br /> <br /> ಆಫ್ಘಾನಿಸ್ತಾನವಾಗಲೀ ಅಥವಾ ಭಾರತವಾಗಲೀ ತಮ್ಮ ನಡುವಿನ ತಂತ್ರಕಾರಿಕೆಯ ಪಾಲುದಾರಿಕೆ ಒಪ್ಪಂದವನ್ನು ಉಭಯತ್ರರ ಗಡಿಯನ್ನು ದಾಟಿಸಿ, ಬೇರೆ ರಾಷ್ಟ್ರಕ್ಕೆ ಪ್ರವೇಶ ಮಾಡುವ ಉದ್ದೇಶ ಹೊಂದಿಲ್ಲ. ಈ ಒಪ್ಪಂದ ಯಾವುದೇ ದೇಶದ ವಿರುದ್ಧವಲ್ಲ ಮತ್ತು ಯಾರನ್ನೂ ಗುರಿಯಾಗಿಸಿದ್ದಲ್ಲ. ಇದು ಕೇವಲ ಭಾರತದ ಬಲದಿಂದ ಆಫ್ಘಾನಿಸ್ತಾನ ಲಾಭ ಹೊಂದುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.<br /> <br /> ಕಳೆದ ಕೆಲವು ವರ್ಷಗಳಿಂದ ಎರಡೂ ದೇಶಗಳು ಪರಸ್ಪರ ಸಹಕಾರದಲ್ಲಿ ಭಾಗಿಯಾಗಿವೆ. ಆಫ್ಘಾನಿಸ್ತಾನದಲ್ಲಿ ಸುಮಾರು 2000 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಸ್ತೆ ಮತ್ತು ಜಾರಂಗಿ-ದೇಲಾರಾಮ್ ಹೆದ್ದಾರಿ, ಉತ್ತರ ಆಫ್ಘನ್ನಿಂದ ಕಾಬೂಲ್ವರೆಗೆ ವಿದ್ಯುತ್ ಸರಬರಾಜು ಮಾರ್ಗ ಹಾಗೂ ಸಂಸತ್ ಭವನ ನಿರ್ಮಾಣ ಇತ್ಯಾದಿ ಕಾರ್ಯದಲ್ಲಿ ಭಾರತ ನೆರವಾಗಿದೆ ಎಂದು ವಿವರಿಸಿದರು.<br /> <br /> ತಂತ್ರಗಾರಿಕೆ ಒಪ್ಪಂದದನ್ವಯ ಭಾರತವು ಆಫ್ಘನ್ ಸೇನಾ ಮತ್ತು ಭದ್ರತಾಪಡೆ ಸಿಬ್ಬಂದಿಗೆ ತರಬೇತಿ ನೀಡಲಿದೆ. ಭಾರತದ ಈ ಎಲ್ಲ ಸಹಾಯಗಳಿಗೆ ಆಫ್ಘಾನಿಸ್ತಾನ ಸದಾ ಕೃತಜ್ಞನಾಗಿರುವುದಾಗಿ ಅವರು ತಮ್ಮ ಉಪನ್ಯಾಸದಲ್ಲಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>`ಪಾಕಿಸ್ತಾನವು ನಮ್ಮ ಅವಳಿ ಸಹೋದರನಾಗಿದ್ದು, ಭಾರತ ಮಹಾನ್ ಸ್ನೇಹಿತ~ ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಬುಧವಾರ ಇಲ್ಲಿ ಹೇಳುವ ಮೂಲಕ ಭಾರತದೊಂದಿಗೆ ತಮ್ಮ ರಾಷ್ಟ್ರ ಮಾಡಿಕೊಂಡಿರುವ ತಂತ್ರಗಾರಿಕೆಯ ಪಾಲುದಾರಿಕೆ ಒಪ್ಪಂದವು ಪಾಕ್ ಅನ್ನು ಗುರಿಯಾಗಿಸಿದ್ದಲ್ಲ ಎಂಬುದನ್ನು ಪುನರುಚ್ಚರಿಸಿದರು.<br /> <br /> ತಮ್ಮ ಎರಡು ದಿನಗಳ ಭಾರತ ಪ್ರವಾಸ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅಬ್ಸವರ್ ರಿಸರ್ಚ್ ಫೌಂಡೇಷನ್ ಏರ್ಪಡಿಸಿದ್ದ ಮೂರನೇ ಆರ್.ಕೆ.ಮಿಶ್ರಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ಸಂವಾದದಲ್ಲಿ ಪಾಲ್ಗೊಂಡ ಅವರು, `ನಮ್ಮ ಸ್ನೇಹಿತ (ಭಾರತ)ನೊಂದಿಗೆ ಮಾಡಿಕೊಂಡ ಒಪ್ಪಂದವು ಸಹೋದರ (ಪಾಕ್)ನಿಗೆ ಯಾವುದೇ ತೊಂದರೆಯಾಗದು~ ಎಂದು ಪ್ರತಿಕ್ರಿಯಿಸಿದರು.<br /> <br /> ಆಫ್ಘಾನಿಸ್ತಾನವಾಗಲೀ ಅಥವಾ ಭಾರತವಾಗಲೀ ತಮ್ಮ ನಡುವಿನ ತಂತ್ರಕಾರಿಕೆಯ ಪಾಲುದಾರಿಕೆ ಒಪ್ಪಂದವನ್ನು ಉಭಯತ್ರರ ಗಡಿಯನ್ನು ದಾಟಿಸಿ, ಬೇರೆ ರಾಷ್ಟ್ರಕ್ಕೆ ಪ್ರವೇಶ ಮಾಡುವ ಉದ್ದೇಶ ಹೊಂದಿಲ್ಲ. ಈ ಒಪ್ಪಂದ ಯಾವುದೇ ದೇಶದ ವಿರುದ್ಧವಲ್ಲ ಮತ್ತು ಯಾರನ್ನೂ ಗುರಿಯಾಗಿಸಿದ್ದಲ್ಲ. ಇದು ಕೇವಲ ಭಾರತದ ಬಲದಿಂದ ಆಫ್ಘಾನಿಸ್ತಾನ ಲಾಭ ಹೊಂದುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.<br /> <br /> ಕಳೆದ ಕೆಲವು ವರ್ಷಗಳಿಂದ ಎರಡೂ ದೇಶಗಳು ಪರಸ್ಪರ ಸಹಕಾರದಲ್ಲಿ ಭಾಗಿಯಾಗಿವೆ. ಆಫ್ಘಾನಿಸ್ತಾನದಲ್ಲಿ ಸುಮಾರು 2000 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಸ್ತೆ ಮತ್ತು ಜಾರಂಗಿ-ದೇಲಾರಾಮ್ ಹೆದ್ದಾರಿ, ಉತ್ತರ ಆಫ್ಘನ್ನಿಂದ ಕಾಬೂಲ್ವರೆಗೆ ವಿದ್ಯುತ್ ಸರಬರಾಜು ಮಾರ್ಗ ಹಾಗೂ ಸಂಸತ್ ಭವನ ನಿರ್ಮಾಣ ಇತ್ಯಾದಿ ಕಾರ್ಯದಲ್ಲಿ ಭಾರತ ನೆರವಾಗಿದೆ ಎಂದು ವಿವರಿಸಿದರು.<br /> <br /> ತಂತ್ರಗಾರಿಕೆ ಒಪ್ಪಂದದನ್ವಯ ಭಾರತವು ಆಫ್ಘನ್ ಸೇನಾ ಮತ್ತು ಭದ್ರತಾಪಡೆ ಸಿಬ್ಬಂದಿಗೆ ತರಬೇತಿ ನೀಡಲಿದೆ. ಭಾರತದ ಈ ಎಲ್ಲ ಸಹಾಯಗಳಿಗೆ ಆಫ್ಘಾನಿಸ್ತಾನ ಸದಾ ಕೃತಜ್ಞನಾಗಿರುವುದಾಗಿ ಅವರು ತಮ್ಮ ಉಪನ್ಯಾಸದಲ್ಲಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>