<p><strong>ನವದೆಹಲಿ (ಪಿಟಿಐ): </strong>ರಾಜಧಾನಿಯಲ್ಲಿ ಗುರುವಾರ ಭಾರಿ ಪ್ರಮಾಣದ ಖೋಟಾನೋಟು ಪತ್ತೆ ವೇಳೆ ಬಂಧಿಸಿದ ಇಬ್ಬರಲ್ಲಿ ಒಬ್ಬ ಪಾಕಿಸ್ತಾನದ ಕುಖ್ಯಾತ ಖೋಟಾನೋಟು ಚಲಾವಣೆಗಾರ ಇಕ್ಬಾಲ್ ಕಾನಾನನ್ನು ಭೇಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಈ ಖೋಟಾ ಹಣವನ್ನು ಇಕ್ಬಾಲನೇ ರವಾನಿಸಿದ್ದ. ಈತನಿಗೆ ಐಎಸ್ಐ ನಿಕಟ ಸಂಪರ್ಕವೂ ಇರಬಹುದೆಂದು ಅವರು ಶಂಕಿಸಿದ್ದಾರೆ. ದಬ್ರೀ ಪ್ರದೇಶದ ಗೋದಾಮಿನ ಬಳಿ ಎರಡು ಟೆಂಪೋಗಳಲ್ಲಿ ಬಟ್ಟೆ ಬಂಡಲ್ಗಳಲ್ಲಿ ಈ ಹಣ ಇಡಲಾಗಿತ್ತು. ಈ ಬಟ್ಟೆಯ ಬಂಡಲ್ಗಳಿಗೆ ಅಂಟಿಸಲಾಗಿದ್ದ ಕಾಗದದ ಹೊದಿಕೆ ಮೇಲೆ ಪಾಕಿಸ್ತಾನದ ಫೈಜಲಾಬಾದ್ನ ಐದು ಕಂಪೆನಿಗಳ ಹೆಸರು ಇತ್ತು. ಇದು ಈ ಖೋಟಾನೋಟುಗಳ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಸಂಶಯ ಮೂಡಿಸಿತ್ತು ಎಂದು ವಿವರಿಸಿದ್ದಾರೆ.<br /> <br /> ಆಶ್ ಮೊಹಮ್ಮದ್ ಮತ್ತು ಜೀಶನ್ ಖಾನ್ ಬಂಧಿತರಾಗಿದ್ದು ಇವರಲ್ಲಿ ಆಶ್ ಮೊಹಮ್ಮದ್ ಪಾಕಿಸ್ತಾನದ ಕುಖ್ಯಾತನನ್ನು ಭೇಟಿಯಾಗಿದ್ದ ಎಂದಿದ್ದಾರೆ. ಈ ಮುನ್ನ, ಪೊಲೀಸರು 6 ಕೋಟಿ ರೂಪಾಯಿಗೂ ಹೆಚ್ಚಿನ ಖೋಟಾಹಣ ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಆದರೆ ನಂತರ ಸ್ಪಷ್ಟನೆ ನೀಡಿ ವಶಪಡಿಸಿಕೊಂಡ ಮೊತ್ತ 2.24 ಕೋಟಿ ರೂಪಾಯಿ ಎಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ರಾಜಧಾನಿಯಲ್ಲಿ ಗುರುವಾರ ಭಾರಿ ಪ್ರಮಾಣದ ಖೋಟಾನೋಟು ಪತ್ತೆ ವೇಳೆ ಬಂಧಿಸಿದ ಇಬ್ಬರಲ್ಲಿ ಒಬ್ಬ ಪಾಕಿಸ್ತಾನದ ಕುಖ್ಯಾತ ಖೋಟಾನೋಟು ಚಲಾವಣೆಗಾರ ಇಕ್ಬಾಲ್ ಕಾನಾನನ್ನು ಭೇಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಈ ಖೋಟಾ ಹಣವನ್ನು ಇಕ್ಬಾಲನೇ ರವಾನಿಸಿದ್ದ. ಈತನಿಗೆ ಐಎಸ್ಐ ನಿಕಟ ಸಂಪರ್ಕವೂ ಇರಬಹುದೆಂದು ಅವರು ಶಂಕಿಸಿದ್ದಾರೆ. ದಬ್ರೀ ಪ್ರದೇಶದ ಗೋದಾಮಿನ ಬಳಿ ಎರಡು ಟೆಂಪೋಗಳಲ್ಲಿ ಬಟ್ಟೆ ಬಂಡಲ್ಗಳಲ್ಲಿ ಈ ಹಣ ಇಡಲಾಗಿತ್ತು. ಈ ಬಟ್ಟೆಯ ಬಂಡಲ್ಗಳಿಗೆ ಅಂಟಿಸಲಾಗಿದ್ದ ಕಾಗದದ ಹೊದಿಕೆ ಮೇಲೆ ಪಾಕಿಸ್ತಾನದ ಫೈಜಲಾಬಾದ್ನ ಐದು ಕಂಪೆನಿಗಳ ಹೆಸರು ಇತ್ತು. ಇದು ಈ ಖೋಟಾನೋಟುಗಳ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಸಂಶಯ ಮೂಡಿಸಿತ್ತು ಎಂದು ವಿವರಿಸಿದ್ದಾರೆ.<br /> <br /> ಆಶ್ ಮೊಹಮ್ಮದ್ ಮತ್ತು ಜೀಶನ್ ಖಾನ್ ಬಂಧಿತರಾಗಿದ್ದು ಇವರಲ್ಲಿ ಆಶ್ ಮೊಹಮ್ಮದ್ ಪಾಕಿಸ್ತಾನದ ಕುಖ್ಯಾತನನ್ನು ಭೇಟಿಯಾಗಿದ್ದ ಎಂದಿದ್ದಾರೆ. ಈ ಮುನ್ನ, ಪೊಲೀಸರು 6 ಕೋಟಿ ರೂಪಾಯಿಗೂ ಹೆಚ್ಚಿನ ಖೋಟಾಹಣ ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಆದರೆ ನಂತರ ಸ್ಪಷ್ಟನೆ ನೀಡಿ ವಶಪಡಿಸಿಕೊಂಡ ಮೊತ್ತ 2.24 ಕೋಟಿ ರೂಪಾಯಿ ಎಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>