ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಚುನಾವಣಾ ರ್ಯಾಲಿಯಲ್ಲಿ ಗಾಂಧಿ ಹಂತಕನನ್ನು ‘ದೇಶಭಕ್ತ’ ಎಂದು ಹೊಗಳಿದ್ದ ಹೇಳಿಕೆಗೆ ಸತ್ಯಾರ್ಥಿ ಪ್ರತಿಕ್ರಿಯಿಸಿದ್ದಾರೆ. ‘ಗೋಡ್ಸೆ, ಗಾಂಧಿ ಅವರ ದೇಹ ಕೊಲೆ ಮಾಡಿದ. ಆದರೆ ಪ್ರಜ್ಞಾ ದೇಶದ ಅಹಿಂಸೆ, ಶಾಂತಿಯನ್ನೇ ಕೊಲೆ ಮಾಡುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.