ಪ್ರಕರಣದ ತನಿಖೆ ನಡೆಸಿದ ಪೊಲೀಸರ ಪ್ರಕಾರ ಸರಸ್ವತಿ ಆಕೆಯ ಪ್ರಿಯಕರ ಮದ್ದು ಶಿವ ಜತೆ ಸೇರಿ ಈ ಕೃತ್ಯವೆಸಗಿದ್ದಾರೆ. ವಿಜಾಗ್ನಲ್ಲಿರುವ ಮದ್ದು ಶಿವ ಬಿ.ಟೆಕ್ ಓದಿದ್ದು, ನಿರುದ್ಯೋಗಿಯಾಗಿದ್ದಾನೆ. ಸರಸ್ವತಿಯ ಪತಿಯನ್ನು ಹತ್ಯೆಗೈಯ್ಯಲು ಮದ್ದು ಶಿವ, ತನ್ನಂತೆಯೇ ಬಿಟೆಕ್ ಪದವೀಧರ, ನಿರೋದ್ಯೋಗಿಗಳಾಗಿರುವ ಮೆರುಗು ಗೋಪಿ ಮತ್ತು ಗುರಲ್ಲಾ ಬಂಗಾರುರಾಜು ಎಂಬವರ ಜತೆ ಸೇರಿ ಈ ಕೃತ್ಯವೆಸಗಿದ್ದಾನೆ.