<p>ಅಹಮದಾಬಾದ್, (ಪಿಟಿಐ): ಗೋದ್ರಾ ನಂತರದ ಹಿಂಸಾಚಾರದ ನೈತಿಕ ಹೊಣೆ ಹೊರುವ ವಿಚಾರ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆಯೇ?<br /> <br /> ಸದ್ಬಾವನಾ ಉಪವಾಸದ ಎರಡನೇ ದಿನವಾದ ಭಾನುವಾರ ನಡೆದ ಕೆಲವು ಘಟನಾವಳಿಗಳ ಹಿನ್ನೆಲೆಯಲ್ಲಿ ಪರ್ತಕರ್ತರು ಈ ಪ್ರಶ್ನೆಯನ್ನು ಮೋದಿ ಅವರ ಮುಂದಿಟ್ಟಾಗ ತೀವ್ರ ಸಿಡಿಮಿಡಿಗೊಂಡರಲ್ಲದೆ, `ನೀವು (ಪತ್ರಕರ್ತರು) ನಿಮಗೆ ಇಷ್ಟವಾದ ಸುಳ್ಳನ್ನು ಉದ್ದ ಮಾಡುತ್ತಾ ಹೋಗುತ್ತೀರಿ~ ಎಂದು ಹೇಳಿದರು.<br /> <br /> `2002ರ ಹಿಂಸಾಚಾರದಲ್ಲಿ ಮಡಿದವರ ಬಗ್ಗೆ ನೀವು ಯಾವ ರೀತಿ ವಿಷಾದ ವ್ಯಕ್ತಪಡಿಸುತ್ತೀರಿ ಎಂದು ಮತ್ತೆ ಪ್ರಶ್ನಿಸಿದಾಗ, ` ನಾನು ಈ ದೇಶದ ಜನತೆಯನ್ನು ಉದ್ದೇಶಿಸಿ ಬರೆದಿರುವ ಬಹಿರಂಗ ಪತ್ರದಲ್ಲಿ ಈ ಬಗ್ಗೆ ವಿವರವಾಗಿಯೇ ಎಲ್ಲವನ್ನೂ ಹೇಳಿದ್ದೇನೆ , ಮುಖ್ಯಮಂತ್ರಿಯಾಗಿ ರಾಜ್ಯದ ಯಾವುದೆ ವ್ಯಕ್ತಿಗೆ ನೋವಾದರೂ ಅದು ನನ್ನ ನೋವು ಎಂದು ಭಾವಿಸುತ್ತೇನೆ ಮತ್ತು ಅಂತಹ ಜನರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ~ ಎಂದು ತಿಳಿಸಿದ್ದೇನೆ ಎಂದು ಹೇಳಿದರು.<br /> <br /> ನನ್ನ ಹೇಳಿಕೆಯನ್ನು `ಮೊದಲ ಬಾರಿಗೆ ಮೋದಿ ಅವರು ವಿಷಾದ ವ್ಯಕ್ತಪಡಿಸುವ ಸೂಚನೆ ನೀಡಿದ್ದಾರೆ~ ಎಂದು ನೀವು ಅರ್ಥೈಸಿದ್ದೀರಿ ಎಂದು ಹೇಳಿದರು.<br /> <br /> ಎಹ್ಸಾನ್ ಜಾಫ್ರಿ ಕೊಲೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಸಂತೋಷ ಆಚರಿಸುತ್ತಿದ್ದೇನೆ ಎಂಬುದು ಸುಳ್ಳು, ನಾನು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ಮೋದಿ ಹೇಳಿದರು.<br /> <br /> `ನೀವು ಯಾವ ತೀರ್ಪಿನ ಬಗ್ಗೆ ಮಾತನಾಡುತ್ತಿದ್ದೀರಿ, ಈ ಮೋದಿಯ ವಿರುದ್ಧ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಒಂದಾದರೂ ಎಫ್ಐಆರ್ ದಾಖಲಾಗಿದೆಯೇ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾವುದಾದರು ಪ್ರಕರಣದಲ್ಲಿ ನನ್ನ ಹೆಸರು ಸೇರಿದೆಯೇ~ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆಗಳ ಸುರಿಮಳೆಗೈದರು. <br /> <br /> `ಯಾರೂ ಪರಿಪೂರ್ಣರಲ್ಲ, ಯಾವ ವ್ಯವಸ್ಥೆಯೂ ಸಂಪೂರ್ಣ ಸರಿಯಾಗಿ ಇರುವುದಿಲ್ಲ~ ಎಂದು ತಿಳಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಟೀಕೆಗೆ ಸ್ವಾಗತವಿದೆ; ಆದರೆ ನನ್ನ ವಿರುದ್ಧ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಒಳ್ಳೆಯ ಆಡಳಿತ ನೀಡಿದರೆ ಎಲ್ಲರನ್ನೂ ಒಟ್ಟಿಗೆ ಒಯ್ಯಲು ಸಾಧ್ಯ ಎಂಬುದನ್ನು ಗುಜರಾತ್ ಆಡಳಿತ ತೋರಿಸಿಕೊಟ್ಟಿದೆ. ಇಡೀ ದೇಶಕ್ಕೆ ಗುಜರಾತ್ ಆಡಳಿತ ಮಾದರಿಯಾಗಬೇಕು ಎಂದು ತಿಳಿಸುವುದೇ ನನ್ನ ಉಪವಾಸದ ಉದ್ದೇಶ ಎಂದರು.<br /> <br /> ಕೋಮು ಸೌಹಾರ್ದವೇ ನನ್ನ ಉಪವಾಸದ ಉದ್ದೇಶ. ಅನೇಕ ಪಕ್ಷಗಳ ಮುಖಂಡರು ಇಲ್ಲಿದ್ದಾರೆ. ನನಗೆ ಇಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಮೊದಿ ಸ್ಪಷ್ಟಪಡಿಸಿದರು.<br /> <br /> ಜೆಡಿ (ಯು) ವಿರೋಧ: ಎನ್ಡಿಎದ ಪ್ರಮುಖ ಪಾಲುದಾರ ಪಕ್ಷವಾದ ಜೆಡಿ(ಯು) ಮೊದಿ ಉಪವಾಸ ಸತ್ಯಾಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದೆ.<br /> <br /> ರಾಜ್ಯದ ಆರು ಕೋಟಿ ಜನತೆಗೆ ಸಂಬಂಧಿಸಿದಂತೆ ರಾಜಧರ್ಮ ಅನುಸರಿಸಲು ವಿಫಲರಾದ ಮೋದಿ ಅವರು 125 ಕೋಟಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೆ ಎಂದು ಜೆಡಿ (ಯು) ಮುಖಂಡರು ಪ್ರಶ್ನಿಸಿದ್ದಾರೆ.<br /> <br /> `ಮುಸ್ಲಿಮರ ಬೆಂಬಲ~: ಮೋದಿ ಅವರನ್ನು ಬೆಂಬಲಿಸಿ ರಾಜ್ಯದ ಮುಸ್ಲಿಮರು `ಸದ್ಭಾವನಾ ಉಪವಾಸ~ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಹೇಳಿದ್ದಾರೆ.<br /> <br /> ಜಾರ್ಖಂಡ್ ವರದಿ: ಮೋದಿ ಅವರಿಗೆ ಬೆಂಬಲ ನೀಡಲು ಸೋಮವಾರ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಕೂಡ ಅಹಮದಾಬಾದ್ಗೆ ತೆರಳಲಿದ್ದಾರೆ.<br /> <br /> ಶ್ರೀನಗರ ವರದಿ: ಮೋದಿ ಅವರನ್ನು ಬೆಂಬಲಿಸಿ ಭಾನುವಾರ ಕಾಶ್ಮೀರದ ಬಿಜೆಪಿ ಕಾರ್ಯಕರ್ತರು ಶ್ರೀನಗರದ ಪ್ರತಾಪ್ ಉದ್ಯಾನದಲ್ಲಿ ರ್ಯಾಲಿ ನಡೆಸಿದರು.<br /> <br /> ಕಾಂಗ್ರೆಸ್ ಉಪವಾಸ: ಈ ನಡುವೆ, ಮೋದಿಗೆ ಪ್ರತಿಯಾಗಿ ಗುಜರಾತ್ ಕಾಂಗ್ರೆಸ್ ಮುಖಂಡರಾದ ಶಂಕರ್ಸಿಂಗ್ ವಘೇಲಾ, ಅರ್ಜುನ್ ಮೊಧ್ವಾಡಿಯಾ ಮತ್ತಿತರರು ಸಬರಮತಿ ಆಶ್ರಮದಲ್ಲಿ ಆರಂಭಿಸಿರುವ ಉಪವಾಸವು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. <br /> <br /> ಹವಾನಿಯಂತ್ರಿತ ಸಭಾಭವನದಲ್ಲಿ ಮೋದಿ ಉಪವಾಸ ಕೈಗೊಂಡಿರುವುದನ್ನು `ಇದೊಂದು ಪಂಚತಾರಾ~ ಉಪವಾಸ ಎಂದು ಈ ನಾಯಕರು ಗೇಲಿ ಮಾಡಿದ್ದಾರೆ.<br /> <br /> ಮೋದಿ ಉಪವಾಸ ನಾಟಕಕ್ಕೆ 100 ಕೋಟಿಗೂ ಅಧಿಕ ಹಣ ಪೋಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.<br /> </p>.<table align="center" border="3" cellpadding="1" cellspacing="1" width="450"> <tbody> <tr> <td><strong>ಮೋದಿ ಉಪವಾಸಕ್ಕೆ ಅಮೆರಿಕದಲ್ಲೂ ಬೆಂಬಲ</strong></td> </tr> <tr> <td>ವಾಷಿಂಗ್ಟನ್, (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶನಿವಾರದಿಂದ ಆರಂಭಿಸಿರುವ ಮೂರು ದಿನಗಳ `ಸದ್ಭಾವನಾ ಉಪವಾಸ~ವನ್ನು ಬೆಂಬಲಿಸಿ `ಬಿಜೆಪಿಯ ಕಡಲಾಚೆಯ ಗೆಳೆಯರು (ಒಎಫ್ಬಿಜೆಪಿ)~ ಅಮೆರಿಕದ ಸುಮಾರು ಹನ್ನೆರಡು ನಗರಗಳಲ್ಲಿ ಉಪವಾಸ ಆರಂಭಿಸಿದ್ದಾರೆ.<br /> <br /> ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೆನಿಯಾ, ದೆಲವಾರೆ, ವಾಷಿಂಗ್ಟನ್, ಅಟ್ಲಾಂಟಾ, ಸೆಂಟ್ ಲೂಯಿಸ್, ಷಿಕಾಗೊ, ಕೆಂಟುಕಿ, ಮಿನೆಸೊಟ, ಫ್ಲಾರಿಡಾ, ಟೆಕ್ಸಾಸ್ ಹಾಗೂ ಕ್ಯಾಲಿಫೋರ್ನಿಯಾಗಳಲ್ಲಿ ಮೋದಿಯವರನ್ನು ಬೆಂಬಲಿಸಿ ಉಪವಾಸ ನಡೆಸಲಾಗುತ್ತದೆ ಎಂದು ಬಿಜೆಪಿಯ ಕಡಲಾಚೆಯ ಗೆಳೆಯರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.<br /> <br /> ಸುಳ್ಳು ಪ್ರಕರಣಗಳು, ಕ್ಷುದ್ರ ಕಾನೂನು ಸಂಗತಿಗಳು ಹಾಗೂ ಬಹುಸಂಖ್ಯಾತರ ಸುಳ್ಳು ಆರೋಪಗಳ ನಡುವೆ ಉಲ್ಲೇಖಾರ್ಹ ಸಹನೆ, ಧೈರ್ಯ ಪ್ರದರ್ಶಿಸಿದ್ದಕ್ಕಾಗಿ ಗೆಳೆಯರ ಬಳಗ ಮೋದಿ ಅವರನ್ನು ಅಭಿನಂದಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಹಮದಾಬಾದ್, (ಪಿಟಿಐ): ಗೋದ್ರಾ ನಂತರದ ಹಿಂಸಾಚಾರದ ನೈತಿಕ ಹೊಣೆ ಹೊರುವ ವಿಚಾರ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆಯೇ?<br /> <br /> ಸದ್ಬಾವನಾ ಉಪವಾಸದ ಎರಡನೇ ದಿನವಾದ ಭಾನುವಾರ ನಡೆದ ಕೆಲವು ಘಟನಾವಳಿಗಳ ಹಿನ್ನೆಲೆಯಲ್ಲಿ ಪರ್ತಕರ್ತರು ಈ ಪ್ರಶ್ನೆಯನ್ನು ಮೋದಿ ಅವರ ಮುಂದಿಟ್ಟಾಗ ತೀವ್ರ ಸಿಡಿಮಿಡಿಗೊಂಡರಲ್ಲದೆ, `ನೀವು (ಪತ್ರಕರ್ತರು) ನಿಮಗೆ ಇಷ್ಟವಾದ ಸುಳ್ಳನ್ನು ಉದ್ದ ಮಾಡುತ್ತಾ ಹೋಗುತ್ತೀರಿ~ ಎಂದು ಹೇಳಿದರು.<br /> <br /> `2002ರ ಹಿಂಸಾಚಾರದಲ್ಲಿ ಮಡಿದವರ ಬಗ್ಗೆ ನೀವು ಯಾವ ರೀತಿ ವಿಷಾದ ವ್ಯಕ್ತಪಡಿಸುತ್ತೀರಿ ಎಂದು ಮತ್ತೆ ಪ್ರಶ್ನಿಸಿದಾಗ, ` ನಾನು ಈ ದೇಶದ ಜನತೆಯನ್ನು ಉದ್ದೇಶಿಸಿ ಬರೆದಿರುವ ಬಹಿರಂಗ ಪತ್ರದಲ್ಲಿ ಈ ಬಗ್ಗೆ ವಿವರವಾಗಿಯೇ ಎಲ್ಲವನ್ನೂ ಹೇಳಿದ್ದೇನೆ , ಮುಖ್ಯಮಂತ್ರಿಯಾಗಿ ರಾಜ್ಯದ ಯಾವುದೆ ವ್ಯಕ್ತಿಗೆ ನೋವಾದರೂ ಅದು ನನ್ನ ನೋವು ಎಂದು ಭಾವಿಸುತ್ತೇನೆ ಮತ್ತು ಅಂತಹ ಜನರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ~ ಎಂದು ತಿಳಿಸಿದ್ದೇನೆ ಎಂದು ಹೇಳಿದರು.<br /> <br /> ನನ್ನ ಹೇಳಿಕೆಯನ್ನು `ಮೊದಲ ಬಾರಿಗೆ ಮೋದಿ ಅವರು ವಿಷಾದ ವ್ಯಕ್ತಪಡಿಸುವ ಸೂಚನೆ ನೀಡಿದ್ದಾರೆ~ ಎಂದು ನೀವು ಅರ್ಥೈಸಿದ್ದೀರಿ ಎಂದು ಹೇಳಿದರು.<br /> <br /> ಎಹ್ಸಾನ್ ಜಾಫ್ರಿ ಕೊಲೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಸಂತೋಷ ಆಚರಿಸುತ್ತಿದ್ದೇನೆ ಎಂಬುದು ಸುಳ್ಳು, ನಾನು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ಮೋದಿ ಹೇಳಿದರು.<br /> <br /> `ನೀವು ಯಾವ ತೀರ್ಪಿನ ಬಗ್ಗೆ ಮಾತನಾಡುತ್ತಿದ್ದೀರಿ, ಈ ಮೋದಿಯ ವಿರುದ್ಧ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಒಂದಾದರೂ ಎಫ್ಐಆರ್ ದಾಖಲಾಗಿದೆಯೇ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾವುದಾದರು ಪ್ರಕರಣದಲ್ಲಿ ನನ್ನ ಹೆಸರು ಸೇರಿದೆಯೇ~ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆಗಳ ಸುರಿಮಳೆಗೈದರು. <br /> <br /> `ಯಾರೂ ಪರಿಪೂರ್ಣರಲ್ಲ, ಯಾವ ವ್ಯವಸ್ಥೆಯೂ ಸಂಪೂರ್ಣ ಸರಿಯಾಗಿ ಇರುವುದಿಲ್ಲ~ ಎಂದು ತಿಳಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಟೀಕೆಗೆ ಸ್ವಾಗತವಿದೆ; ಆದರೆ ನನ್ನ ವಿರುದ್ಧ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಒಳ್ಳೆಯ ಆಡಳಿತ ನೀಡಿದರೆ ಎಲ್ಲರನ್ನೂ ಒಟ್ಟಿಗೆ ಒಯ್ಯಲು ಸಾಧ್ಯ ಎಂಬುದನ್ನು ಗುಜರಾತ್ ಆಡಳಿತ ತೋರಿಸಿಕೊಟ್ಟಿದೆ. ಇಡೀ ದೇಶಕ್ಕೆ ಗುಜರಾತ್ ಆಡಳಿತ ಮಾದರಿಯಾಗಬೇಕು ಎಂದು ತಿಳಿಸುವುದೇ ನನ್ನ ಉಪವಾಸದ ಉದ್ದೇಶ ಎಂದರು.<br /> <br /> ಕೋಮು ಸೌಹಾರ್ದವೇ ನನ್ನ ಉಪವಾಸದ ಉದ್ದೇಶ. ಅನೇಕ ಪಕ್ಷಗಳ ಮುಖಂಡರು ಇಲ್ಲಿದ್ದಾರೆ. ನನಗೆ ಇಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಮೊದಿ ಸ್ಪಷ್ಟಪಡಿಸಿದರು.<br /> <br /> ಜೆಡಿ (ಯು) ವಿರೋಧ: ಎನ್ಡಿಎದ ಪ್ರಮುಖ ಪಾಲುದಾರ ಪಕ್ಷವಾದ ಜೆಡಿ(ಯು) ಮೊದಿ ಉಪವಾಸ ಸತ್ಯಾಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದೆ.<br /> <br /> ರಾಜ್ಯದ ಆರು ಕೋಟಿ ಜನತೆಗೆ ಸಂಬಂಧಿಸಿದಂತೆ ರಾಜಧರ್ಮ ಅನುಸರಿಸಲು ವಿಫಲರಾದ ಮೋದಿ ಅವರು 125 ಕೋಟಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೆ ಎಂದು ಜೆಡಿ (ಯು) ಮುಖಂಡರು ಪ್ರಶ್ನಿಸಿದ್ದಾರೆ.<br /> <br /> `ಮುಸ್ಲಿಮರ ಬೆಂಬಲ~: ಮೋದಿ ಅವರನ್ನು ಬೆಂಬಲಿಸಿ ರಾಜ್ಯದ ಮುಸ್ಲಿಮರು `ಸದ್ಭಾವನಾ ಉಪವಾಸ~ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಹೇಳಿದ್ದಾರೆ.<br /> <br /> ಜಾರ್ಖಂಡ್ ವರದಿ: ಮೋದಿ ಅವರಿಗೆ ಬೆಂಬಲ ನೀಡಲು ಸೋಮವಾರ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಕೂಡ ಅಹಮದಾಬಾದ್ಗೆ ತೆರಳಲಿದ್ದಾರೆ.<br /> <br /> ಶ್ರೀನಗರ ವರದಿ: ಮೋದಿ ಅವರನ್ನು ಬೆಂಬಲಿಸಿ ಭಾನುವಾರ ಕಾಶ್ಮೀರದ ಬಿಜೆಪಿ ಕಾರ್ಯಕರ್ತರು ಶ್ರೀನಗರದ ಪ್ರತಾಪ್ ಉದ್ಯಾನದಲ್ಲಿ ರ್ಯಾಲಿ ನಡೆಸಿದರು.<br /> <br /> ಕಾಂಗ್ರೆಸ್ ಉಪವಾಸ: ಈ ನಡುವೆ, ಮೋದಿಗೆ ಪ್ರತಿಯಾಗಿ ಗುಜರಾತ್ ಕಾಂಗ್ರೆಸ್ ಮುಖಂಡರಾದ ಶಂಕರ್ಸಿಂಗ್ ವಘೇಲಾ, ಅರ್ಜುನ್ ಮೊಧ್ವಾಡಿಯಾ ಮತ್ತಿತರರು ಸಬರಮತಿ ಆಶ್ರಮದಲ್ಲಿ ಆರಂಭಿಸಿರುವ ಉಪವಾಸವು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. <br /> <br /> ಹವಾನಿಯಂತ್ರಿತ ಸಭಾಭವನದಲ್ಲಿ ಮೋದಿ ಉಪವಾಸ ಕೈಗೊಂಡಿರುವುದನ್ನು `ಇದೊಂದು ಪಂಚತಾರಾ~ ಉಪವಾಸ ಎಂದು ಈ ನಾಯಕರು ಗೇಲಿ ಮಾಡಿದ್ದಾರೆ.<br /> <br /> ಮೋದಿ ಉಪವಾಸ ನಾಟಕಕ್ಕೆ 100 ಕೋಟಿಗೂ ಅಧಿಕ ಹಣ ಪೋಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.<br /> </p>.<table align="center" border="3" cellpadding="1" cellspacing="1" width="450"> <tbody> <tr> <td><strong>ಮೋದಿ ಉಪವಾಸಕ್ಕೆ ಅಮೆರಿಕದಲ್ಲೂ ಬೆಂಬಲ</strong></td> </tr> <tr> <td>ವಾಷಿಂಗ್ಟನ್, (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶನಿವಾರದಿಂದ ಆರಂಭಿಸಿರುವ ಮೂರು ದಿನಗಳ `ಸದ್ಭಾವನಾ ಉಪವಾಸ~ವನ್ನು ಬೆಂಬಲಿಸಿ `ಬಿಜೆಪಿಯ ಕಡಲಾಚೆಯ ಗೆಳೆಯರು (ಒಎಫ್ಬಿಜೆಪಿ)~ ಅಮೆರಿಕದ ಸುಮಾರು ಹನ್ನೆರಡು ನಗರಗಳಲ್ಲಿ ಉಪವಾಸ ಆರಂಭಿಸಿದ್ದಾರೆ.<br /> <br /> ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೆನಿಯಾ, ದೆಲವಾರೆ, ವಾಷಿಂಗ್ಟನ್, ಅಟ್ಲಾಂಟಾ, ಸೆಂಟ್ ಲೂಯಿಸ್, ಷಿಕಾಗೊ, ಕೆಂಟುಕಿ, ಮಿನೆಸೊಟ, ಫ್ಲಾರಿಡಾ, ಟೆಕ್ಸಾಸ್ ಹಾಗೂ ಕ್ಯಾಲಿಫೋರ್ನಿಯಾಗಳಲ್ಲಿ ಮೋದಿಯವರನ್ನು ಬೆಂಬಲಿಸಿ ಉಪವಾಸ ನಡೆಸಲಾಗುತ್ತದೆ ಎಂದು ಬಿಜೆಪಿಯ ಕಡಲಾಚೆಯ ಗೆಳೆಯರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.<br /> <br /> ಸುಳ್ಳು ಪ್ರಕರಣಗಳು, ಕ್ಷುದ್ರ ಕಾನೂನು ಸಂಗತಿಗಳು ಹಾಗೂ ಬಹುಸಂಖ್ಯಾತರ ಸುಳ್ಳು ಆರೋಪಗಳ ನಡುವೆ ಉಲ್ಲೇಖಾರ್ಹ ಸಹನೆ, ಧೈರ್ಯ ಪ್ರದರ್ಶಿಸಿದ್ದಕ್ಕಾಗಿ ಗೆಳೆಯರ ಬಳಗ ಮೋದಿ ಅವರನ್ನು ಅಭಿನಂದಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>