ಚಂಡೀಗಡ (ಐಎಎನ್ಎಸ್): ನಾಲ್ವರು ಬಂದೂಕುಧಾರಿ ಯುವಕರು ಹಣವನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಬ್ಯಾಂಕೊಂದರ ವಾಹನವನ್ನು ಅಡ್ಡಗಟ್ಟಿ ರೂ.1.75 ಕೋಟಿ ಅಪಹರಿಸಿರುವ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ನಡೆದಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.