<p><strong>ಲಖನೌ (ಐಎಎನ್ಎಸ್):</strong> ಚೆನ್ನೈನಿಂದ ಹೊರಟಿದ್ದ ದೆಹಲಿ ಗ್ರ್ಯಾಂಡ್ ಟ್ರಂಕ್ (ಜಿಟಿ) ಎಕ್ಸ್ಪ್ರೆಸ್ ರೈಲಿಗೆ ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ನುಗ್ಗಿ ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಘಟನೆ ಶನಿವಾರ ಆಗ್ರಾ ಸಮೀಪ ನಡೆದಿದೆ.<br /> <br /> ರೈಲಿನ ಹವಾನಿಯಂತ್ರಿತ ಬೋಗಿ ನುಗ್ಗಿದ್ದ ಏಳು ಮಂದಿ ಡಕಾಯಿತರು ಬಂದೂಕಿನಿಂದ ಪ್ರಯಾಣಿಕರನ್ನು ಬೆದರಿಸಿ ನಗನಾಣ್ಯಗಳನ್ನು ದೋಚಿದ್ದಾರೆ.<br /> <br /> <strong>ಪತ್ನಿ ಕೊಲೆ: ಜಡ್ಜ್ ವಿರುದ್ಧ ದೂರು<br /> ಗುಡಗಾಂವ್ (ಐಎಎನ್ಎಸ್):</strong> ಹೆಂಡತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಜೆಎಂ ನ್ಯಾಯಾಧೀಶ ರವ್ನೀತ್ ಗರ್ಗ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.<br /> <br /> ರವ್ನೀತ್ ಅವರ ಪತ್ನಿ 24 ವರ್ಷದ ಗೀತಾಂಜಲಿ ಎರಡು ದಿನಗಳ ಹಿಂದೆ ಗುಂಡೇಟಿನಿಂದ ಕೊಲೆಯಾಗಿದ್ದರು. ಈ ಸಂಬಂಧ ಗೀತಾಂಜಲಿ ಅವರ ಸಹೋದರ ಪ್ರದೀಪ್ ಅಗರ್ವಾಲ್ ಅವರು ರವ್ನೀತ್ ಮತ್ತು ರವ್ನೀತ್ ಪೋಷಕರ ವಿರುದ್ಧ ಕೊಲೆ ದೂರು ನೀಡಿದ್ದರು.<br /> <br /> ಗೀತಾಂಜಲಿ ಅವರ ಶವ ಗುರುವಾರ ಸಂಜೆ ಪತ್ತೆಯಾದ ಸಂದರ್ಭದಲ್ಲಿ ಹತ್ತಿರದಲ್ಲೇ ರವ್ನೀತ್ ಅವರ ಅಧಿಕೃತ ರಿವಾಲ್ವರ್ ಕೂಡ ಪತ್ತೆಯಾಗಿತ್ತು.<br /> <br /> <strong>ಆಂಧ್ರಪ್ರದೇಶ ಮಾಜಿ ಸಚಿವ ನಿಧನ<br /> ಹೈದರಾಬಾದ್ (ಐಎಎನ್ಎಸ್):</strong> ಆಂಧ್ರ ಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆ. ವಿದ್ಯಾಧರ್ ರಾವ್ (65) ಶನಿವಾರ ಬೆಳಿಗ್ಗೆ ಗೋದಾವರಿ ಜಿಲ್ಲೆಯ ತಮ್ಮ ಎಲೂರು ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ (ಐಎಎನ್ಎಸ್):</strong> ಚೆನ್ನೈನಿಂದ ಹೊರಟಿದ್ದ ದೆಹಲಿ ಗ್ರ್ಯಾಂಡ್ ಟ್ರಂಕ್ (ಜಿಟಿ) ಎಕ್ಸ್ಪ್ರೆಸ್ ರೈಲಿಗೆ ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ನುಗ್ಗಿ ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಘಟನೆ ಶನಿವಾರ ಆಗ್ರಾ ಸಮೀಪ ನಡೆದಿದೆ.<br /> <br /> ರೈಲಿನ ಹವಾನಿಯಂತ್ರಿತ ಬೋಗಿ ನುಗ್ಗಿದ್ದ ಏಳು ಮಂದಿ ಡಕಾಯಿತರು ಬಂದೂಕಿನಿಂದ ಪ್ರಯಾಣಿಕರನ್ನು ಬೆದರಿಸಿ ನಗನಾಣ್ಯಗಳನ್ನು ದೋಚಿದ್ದಾರೆ.<br /> <br /> <strong>ಪತ್ನಿ ಕೊಲೆ: ಜಡ್ಜ್ ವಿರುದ್ಧ ದೂರು<br /> ಗುಡಗಾಂವ್ (ಐಎಎನ್ಎಸ್):</strong> ಹೆಂಡತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಜೆಎಂ ನ್ಯಾಯಾಧೀಶ ರವ್ನೀತ್ ಗರ್ಗ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.<br /> <br /> ರವ್ನೀತ್ ಅವರ ಪತ್ನಿ 24 ವರ್ಷದ ಗೀತಾಂಜಲಿ ಎರಡು ದಿನಗಳ ಹಿಂದೆ ಗುಂಡೇಟಿನಿಂದ ಕೊಲೆಯಾಗಿದ್ದರು. ಈ ಸಂಬಂಧ ಗೀತಾಂಜಲಿ ಅವರ ಸಹೋದರ ಪ್ರದೀಪ್ ಅಗರ್ವಾಲ್ ಅವರು ರವ್ನೀತ್ ಮತ್ತು ರವ್ನೀತ್ ಪೋಷಕರ ವಿರುದ್ಧ ಕೊಲೆ ದೂರು ನೀಡಿದ್ದರು.<br /> <br /> ಗೀತಾಂಜಲಿ ಅವರ ಶವ ಗುರುವಾರ ಸಂಜೆ ಪತ್ತೆಯಾದ ಸಂದರ್ಭದಲ್ಲಿ ಹತ್ತಿರದಲ್ಲೇ ರವ್ನೀತ್ ಅವರ ಅಧಿಕೃತ ರಿವಾಲ್ವರ್ ಕೂಡ ಪತ್ತೆಯಾಗಿತ್ತು.<br /> <br /> <strong>ಆಂಧ್ರಪ್ರದೇಶ ಮಾಜಿ ಸಚಿವ ನಿಧನ<br /> ಹೈದರಾಬಾದ್ (ಐಎಎನ್ಎಸ್):</strong> ಆಂಧ್ರ ಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆ. ವಿದ್ಯಾಧರ್ ರಾವ್ (65) ಶನಿವಾರ ಬೆಳಿಗ್ಗೆ ಗೋದಾವರಿ ಜಿಲ್ಲೆಯ ತಮ್ಮ ಎಲೂರು ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>