<p><strong>ಪಟ್ನಾ:</strong> ಬಿಹಾರದ ಮಹಾರಾಜ್ಗಂಜ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆರ್ಜೆಇಡಿ ಅಭ್ಯರ್ಥಿ ಗಮನಾರ್ಹ ಅಂತರದಿಂದ ಜಯಗಳಿಸುತ್ತಿದ್ದಂತೆಯೇ ರಾಜ್ಯದ ಜನತೆಯ ರಾಜಕೀಯ ಒಲವು ತಮ್ಮೆಡೆಗೆ ವಾಲುತ್ತಿದೆ ಎಂದು ಆ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಭಾವಿಸಿದ್ದರು.<br /> <br /> ಆದರೆ ಅವರ ಆ ಎಣಿಕೆ ಅಲ್ಪಾಯುವಾಗಿದೆ. ಕಳೆದ ಕೆಲವೇ ದಿನಗಳಲ್ಲಿ ಅವರಿಗೆ ಮೂರು ಹೊಡೆತಗಳು ಬಿದ್ದಿವೆ.<br /> ಮೊದಲನೆಯದಾಗಿ, ಕೇವಲ 22 ಶಾಸಕರನ್ನು ಹೊಂದಿರುವ ಆರ್ಜೆಡಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. ಆ ಸ್ಥಾನ 91 ಶಾಸಕರ ಬಲವುಳ್ಳ, ಪ್ರಧಾನ ಪ್ರತಿಪಕ್ಷವಾದ ಬಿಜೆಪಿ ಯ ಪಾಲಾಯಿತು. ಎನ್ಡಿಎ ಕೂಟದ ಮಾಜಿ ಸಂಚಾಲಕರಾದ ನಂದ ಕಿಶೋರ್ ಯಾದವ್ ಅವರು ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದನ್ನು ಅವರು ಸಹಿಸಿಕೊಳ್ಳಬೇಕಾಯಿತು.<br /> <br /> ಇನ್ನು, ಕಾಂಗ್ರೆಸ್ಸಿನೊಂದಿಗೆ ಮಧುರ ಮೈತ್ರಿಯ ನಿರೀಕ್ಷೆಯಲ್ಲಿದ್ದಾಗಲೇ ಆ ಪಕ್ಷ ಒಳೇಟು ನೀಡಿದ್ದು ಲಾಲುಗೆ ಆದ ಎರಡನೆಯ ಆಘಾತ. ವಿಶ್ವಾಸಮತ ಸಾಬೀತು ಪಡಿಸುವ ಸಂದರ್ಭ ಎದುರಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವ ದಿಢೀರ್ ನಿರ್ಧಾರದ ಮೂಲಕ ಕಾಂಗ್ರೆಸ್ ಪಕ್ಷವು ಲಾಲು ಅವರಿಗೆ ಈ ಗುದ್ದು ನೀಡಿತು.<br /> <br /> ಲೋಕಸಭೆಯಲ್ಲಿ ತನ್ನ ನಾಲ್ವರು ಸಂಸದರನ್ನು ಹೊಂದಿ, ಯುಪಿಎ-2ರ ಅವಧಿಯ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿರುವ ಲಾಲು, ಇತ್ತೀಚಿನ ವರ್ಷಗಳಲ್ಲಿ ಸೋನಿಯಾ ಅವರನ್ನು ಗುಣಗಾನ ಮಾಡುವ ಯಾವ ಅವಕಾಶವನ್ನೂ ಬಿಟ್ಟುಕೊಟ್ಟಿಲ್ಲ. ಸೋನಿಯಾ ಅವರನ್ನು ಸಂತುಷ್ಟಗೊಳಿಸಲು ಇಷ್ಟೆಲ್ಲಾ ಯತ್ನಿಸುತ್ತಿದ್ದರೂ ಕಾಂಗ್ರೆಸ್ ಪಕ್ಷವು ಅವರನ್ನು ಇನ್ನೂ `ಕಾದು ನೋಡಬೇಕಾದವರ ಪಟ್ಟಿ'ಯಲ್ಲೇ ಇರಿಸಿಕೊಂಡು ಬಂದಿದೆ.<br /> <br /> ಈ ಗಾಯಗಳಿಗೆ ಉಪ್ಪು ಸವರುವಂತೆ, ತಮ್ಮ ಕಟ್ಟಾ ಎದುರಾಳಿಯಾದ ನಿತೀಶ್ ಕುಮಾರ್ ಅವರೊಂದಿಗಿನ ಮೈತ್ರಿಗೆ ಸಿದ್ಧ ಎಂಬ ಸುಳಿವುಗಳನ್ನು ಕಾಂಗ್ರೆಸ್ ರವಾನಿಸಿದೆ. ವಿಶ್ವಾಸಮತ ಕೋರಿಕೆ ವೇಳೆ ತನ್ನ ನಾಲ್ವರು ಶಾಸಕರ ಬೆಂಬಲವನ್ನು ನಿತೀಶ್ಗೆ ನೀಡುವ ಮೂಲಕ, `ಜೆಡಿಯು ಜತೆ ದೀರ್ಘಕಾಲೀನ ಮೈತ್ರಿಗೆ ತಾನು ಸಿದ್ಧ' ಎಂಬ ಇಂಗಿತವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.<br /> <br /> ಜಿಗುಟು ಧೋರಣೆಯ ಮಮತಾ ಬ್ಯಾನರ್ಜಿ, `ಸೇರಿಗೆ ಸವ್ವಾಸೇರು' ಎನ್ನುವ ಮುಲಾಯಂ ಅಥವಾ ಮಾಯಾವತಿ ಅವರಿಗಿಂತ ಸಂವೇದನಾಶೀಲರಾದ ನಿತೀಶ್ ಅವರೊಂದಿಗಿನ ಸಖ್ಯದಲ್ಲಿ ಜಾಣ್ಮೆ ಅಡಗಿದೆ ಎಂದು ಕಾಂಗ್ರೆಸ್ಗೆ ಅನ್ನಿಸಿರುವುದು ಇದಕ್ಕೆ ಕಾರಣವಿರಬಹುದು.<br /> <br /> ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಜೆಡಿಯು ದ 20 ಸಂಸದರು ನೆರವಾಗಬಹುದು. ಅಲ್ಲದೇ, 2 ಜಿ ತರಂಗಾಂತರ ಹಗರಣದ ವಿಚಾರಣೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ಆ ಪಕ್ಷಕ್ಕೆ ಸೇರಿದ ಇಬ್ಬರು ಸದಸ್ಯರಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ಅವರನ್ನು `ಕಳಂಕ ಮುಕ್ತರು' ಎಂದು ಘೋಷಿಸಲು ಇದು ನೆರವಾಗಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ತಲೆಯಲ್ಲಿ ಸುಳಿದಾಡುತ್ತಿರಬಹುದು.<br /> <br /> `ಕಾಂಗ್ರೆಸ್ ತಳೆದ ನಿಲುವಿನಿಂದಾಗಿ ಲಾಲು ಅವರಿಗೆ ನಷ್ಟವಾಗುವುದು ನಿಜ. ಕಾಂಗ್ರೆಸ್- ಜೆಡಿಯು ಸಖ್ಯ ಏರ್ಪಟ್ಟರೆ 2014ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ನಮ್ಮನ್ನು ಕೈಬಿಟ್ಟು, ನರೇಂದ್ರ ಮೋದಿ ಅವರನ್ನು ಸೋಲಿಸಬಲ್ಲ ಪರ್ಯಾಯ ಪ್ರಬಲ ಅಭ್ಯರ್ಥಿಯತ್ತ ಮುಖ ಮಾಡಬಹುದು' ಎಂದು ಲಾಲು ಅವರ ಒಬ್ಬ ಆಪ್ತ ನಾಯಕರೇ ಹೇಳಿದ್ದಾರೆ.<br /> <br /> `ಯಾವುದೇ ಮೈತ್ರಿಯ ಬಗ್ಗೆ ಈಗಲೇ ಹೇಳುವುದು ಅಪ್ರಬುದ್ಧ ಅನ್ನಿಸಿಕೊಳ್ಳುತ್ತದೆ' ಎಂದು ನಿತೀಶ್ ಹೇಳಿದ್ದರೂ, `ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ' ಎನ್ನುವ ಮೂಲಕ ಕಾಂಗ್ರೆಸ್ನೊಂದಿಗಿನ ಸಂಧಾನ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದ್ದಾರೆ.<br /> <br /> ಬಿಹಾರ ರಾಜ್ಯ ಕಾಂಗ್ರೆಸ್ ವಕ್ತಾರರಾದ ಪ್ರೇಮ್ಚಂದ್ರ ಮಿಶ್ರಾ ಕೂಡ ಇದಕ್ಕೆ ಪೂರಕವಾದ ಮಾತುಗಳನ್ನು ಆಡಿದ್ದಾರೆ. `ಲಾಲು ಅವರೊಂದಿಗಿನ ನಮ್ಮ ಮೈತ್ರಿ ಸಾಧ್ಯತೆ ತುಂಬ ಕ್ಷೀಣ. ನಾವು ಚುನಾವಣೆಗೆ ಏಕಾಂಗಿಯಾಗಿ ಅಥವಾ ಜೆಡಿಯು ಜತೆ ಕೈಜೋಡಿಸಿ ಹೋಗಲಿದ್ದೇವೆ. ಜೆಡಿಯು ಜತೆ ಕ್ಷೇತ್ರ ಹೊಂದಾಣಿಕೆ ನಮ್ಮ ಮುಂದಿರುವ ಮತ್ತೊಂದು ಆಯ್ಕೆ' ಎಂದು ಅವರು ದಾಳ ಉರುಳಿಸಿದ್ದಾರೆ.<br /> <br /> ಮತ್ತೊಂದೆಡೆ, ಎಲ್ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರನ್ನೂ ಮೈತ್ರಿಗೆ ಸೆಳೆಯುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂದರೆ, `ಕಾಂಗ್ರೆಸ್- ಜೆಡಿಯು- ಕಮ್ಯುನಿಸ್ಟರು- ಎಲ್ಜೆಪಿ'ಗಳ ವಿಶಾಲ ತಳಹದಿಯೊಂದಿಗೆ ಮೈತ್ರಿಕೂಟ ರಚಿಸುವುದು ಆ ಪಕ್ಷದ ಉದ್ದೇಶ.<br /> <br /> ಎಲ್ಜೆಪಿ ಜತೆ ಕೈಜೋಡಿಸುವುದು ನಿತೀಶ್ಗೆ ಸುತರಾಂ ಇಷ್ಟವಿಲ್ಲವಾದರೂ, ಲಾಲು ಹಾಗೂ ಪಾಸ್ವಾನ್ ನಡುವೆ ಕಂದಕ ಸೃಷ್ಟಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಲಾಗದ ಸ್ಥಿತಿಯಲ್ಲಿ ಅವರು ಈಗ ಇದ್ದಾರೆ. ಮುಂಬರುವ ಚುನಾವಣೆಯಲ್ಲಿ ಲಾಲು ಜತೆಗೆ ಇಬ್ಬರು ಮೋದಿಗಳಾದ- ನರೇಂದ್ರ ಮೋದಿ ಮತ್ತು ಸುಶೀಲ್ ಮೋದಿ ಅವರನ್ನು ಎದುರಿಸಬೇಕಾದ ಸವಾಲು ನಿತೀಶ್ಗೆ ಎದುರಾಗಲಿದೆ. ಇದನ್ನು ಅವರು ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ.<br /> <br /> ಇದೇ ವೇಳೆ ಲಾಲು ಅವರನ್ನು ಈಗ ಮೂರನೆಯ ಚಿಂತೆಯೊಂದು ಬಾಧಿಸುತ್ತಿದೆ. 900 ಕೋಟಿ ರೂಪಾಯಿಗಳ 17 ವರ್ಷ ಹಳೆಯದಾದ ಮೇವು ಹಗರಣದ ಸಂಬಂಧ ಸಿಬಿಐ ನ್ಯಾಯಾಲಯ ಜುಲೈ 15ರಂದು ಏನು ತೀರ್ಪು ನೀಡಲಿದೆಯೋ ಎಂಬುದೇ ಈ ಚಿಂತೆ. ಲಾಲು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ತೀರ್ಪು ಪ್ರಕಟವಾದರೆ ಅದು ಅವರ ರಾಜಕೀಯ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಬಿಹಾರದ ಮಹಾರಾಜ್ಗಂಜ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆರ್ಜೆಇಡಿ ಅಭ್ಯರ್ಥಿ ಗಮನಾರ್ಹ ಅಂತರದಿಂದ ಜಯಗಳಿಸುತ್ತಿದ್ದಂತೆಯೇ ರಾಜ್ಯದ ಜನತೆಯ ರಾಜಕೀಯ ಒಲವು ತಮ್ಮೆಡೆಗೆ ವಾಲುತ್ತಿದೆ ಎಂದು ಆ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಭಾವಿಸಿದ್ದರು.<br /> <br /> ಆದರೆ ಅವರ ಆ ಎಣಿಕೆ ಅಲ್ಪಾಯುವಾಗಿದೆ. ಕಳೆದ ಕೆಲವೇ ದಿನಗಳಲ್ಲಿ ಅವರಿಗೆ ಮೂರು ಹೊಡೆತಗಳು ಬಿದ್ದಿವೆ.<br /> ಮೊದಲನೆಯದಾಗಿ, ಕೇವಲ 22 ಶಾಸಕರನ್ನು ಹೊಂದಿರುವ ಆರ್ಜೆಡಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. ಆ ಸ್ಥಾನ 91 ಶಾಸಕರ ಬಲವುಳ್ಳ, ಪ್ರಧಾನ ಪ್ರತಿಪಕ್ಷವಾದ ಬಿಜೆಪಿ ಯ ಪಾಲಾಯಿತು. ಎನ್ಡಿಎ ಕೂಟದ ಮಾಜಿ ಸಂಚಾಲಕರಾದ ನಂದ ಕಿಶೋರ್ ಯಾದವ್ ಅವರು ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದನ್ನು ಅವರು ಸಹಿಸಿಕೊಳ್ಳಬೇಕಾಯಿತು.<br /> <br /> ಇನ್ನು, ಕಾಂಗ್ರೆಸ್ಸಿನೊಂದಿಗೆ ಮಧುರ ಮೈತ್ರಿಯ ನಿರೀಕ್ಷೆಯಲ್ಲಿದ್ದಾಗಲೇ ಆ ಪಕ್ಷ ಒಳೇಟು ನೀಡಿದ್ದು ಲಾಲುಗೆ ಆದ ಎರಡನೆಯ ಆಘಾತ. ವಿಶ್ವಾಸಮತ ಸಾಬೀತು ಪಡಿಸುವ ಸಂದರ್ಭ ಎದುರಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವ ದಿಢೀರ್ ನಿರ್ಧಾರದ ಮೂಲಕ ಕಾಂಗ್ರೆಸ್ ಪಕ್ಷವು ಲಾಲು ಅವರಿಗೆ ಈ ಗುದ್ದು ನೀಡಿತು.<br /> <br /> ಲೋಕಸಭೆಯಲ್ಲಿ ತನ್ನ ನಾಲ್ವರು ಸಂಸದರನ್ನು ಹೊಂದಿ, ಯುಪಿಎ-2ರ ಅವಧಿಯ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿರುವ ಲಾಲು, ಇತ್ತೀಚಿನ ವರ್ಷಗಳಲ್ಲಿ ಸೋನಿಯಾ ಅವರನ್ನು ಗುಣಗಾನ ಮಾಡುವ ಯಾವ ಅವಕಾಶವನ್ನೂ ಬಿಟ್ಟುಕೊಟ್ಟಿಲ್ಲ. ಸೋನಿಯಾ ಅವರನ್ನು ಸಂತುಷ್ಟಗೊಳಿಸಲು ಇಷ್ಟೆಲ್ಲಾ ಯತ್ನಿಸುತ್ತಿದ್ದರೂ ಕಾಂಗ್ರೆಸ್ ಪಕ್ಷವು ಅವರನ್ನು ಇನ್ನೂ `ಕಾದು ನೋಡಬೇಕಾದವರ ಪಟ್ಟಿ'ಯಲ್ಲೇ ಇರಿಸಿಕೊಂಡು ಬಂದಿದೆ.<br /> <br /> ಈ ಗಾಯಗಳಿಗೆ ಉಪ್ಪು ಸವರುವಂತೆ, ತಮ್ಮ ಕಟ್ಟಾ ಎದುರಾಳಿಯಾದ ನಿತೀಶ್ ಕುಮಾರ್ ಅವರೊಂದಿಗಿನ ಮೈತ್ರಿಗೆ ಸಿದ್ಧ ಎಂಬ ಸುಳಿವುಗಳನ್ನು ಕಾಂಗ್ರೆಸ್ ರವಾನಿಸಿದೆ. ವಿಶ್ವಾಸಮತ ಕೋರಿಕೆ ವೇಳೆ ತನ್ನ ನಾಲ್ವರು ಶಾಸಕರ ಬೆಂಬಲವನ್ನು ನಿತೀಶ್ಗೆ ನೀಡುವ ಮೂಲಕ, `ಜೆಡಿಯು ಜತೆ ದೀರ್ಘಕಾಲೀನ ಮೈತ್ರಿಗೆ ತಾನು ಸಿದ್ಧ' ಎಂಬ ಇಂಗಿತವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.<br /> <br /> ಜಿಗುಟು ಧೋರಣೆಯ ಮಮತಾ ಬ್ಯಾನರ್ಜಿ, `ಸೇರಿಗೆ ಸವ್ವಾಸೇರು' ಎನ್ನುವ ಮುಲಾಯಂ ಅಥವಾ ಮಾಯಾವತಿ ಅವರಿಗಿಂತ ಸಂವೇದನಾಶೀಲರಾದ ನಿತೀಶ್ ಅವರೊಂದಿಗಿನ ಸಖ್ಯದಲ್ಲಿ ಜಾಣ್ಮೆ ಅಡಗಿದೆ ಎಂದು ಕಾಂಗ್ರೆಸ್ಗೆ ಅನ್ನಿಸಿರುವುದು ಇದಕ್ಕೆ ಕಾರಣವಿರಬಹುದು.<br /> <br /> ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಜೆಡಿಯು ದ 20 ಸಂಸದರು ನೆರವಾಗಬಹುದು. ಅಲ್ಲದೇ, 2 ಜಿ ತರಂಗಾಂತರ ಹಗರಣದ ವಿಚಾರಣೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ಆ ಪಕ್ಷಕ್ಕೆ ಸೇರಿದ ಇಬ್ಬರು ಸದಸ್ಯರಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ಅವರನ್ನು `ಕಳಂಕ ಮುಕ್ತರು' ಎಂದು ಘೋಷಿಸಲು ಇದು ನೆರವಾಗಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ತಲೆಯಲ್ಲಿ ಸುಳಿದಾಡುತ್ತಿರಬಹುದು.<br /> <br /> `ಕಾಂಗ್ರೆಸ್ ತಳೆದ ನಿಲುವಿನಿಂದಾಗಿ ಲಾಲು ಅವರಿಗೆ ನಷ್ಟವಾಗುವುದು ನಿಜ. ಕಾಂಗ್ರೆಸ್- ಜೆಡಿಯು ಸಖ್ಯ ಏರ್ಪಟ್ಟರೆ 2014ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ನಮ್ಮನ್ನು ಕೈಬಿಟ್ಟು, ನರೇಂದ್ರ ಮೋದಿ ಅವರನ್ನು ಸೋಲಿಸಬಲ್ಲ ಪರ್ಯಾಯ ಪ್ರಬಲ ಅಭ್ಯರ್ಥಿಯತ್ತ ಮುಖ ಮಾಡಬಹುದು' ಎಂದು ಲಾಲು ಅವರ ಒಬ್ಬ ಆಪ್ತ ನಾಯಕರೇ ಹೇಳಿದ್ದಾರೆ.<br /> <br /> `ಯಾವುದೇ ಮೈತ್ರಿಯ ಬಗ್ಗೆ ಈಗಲೇ ಹೇಳುವುದು ಅಪ್ರಬುದ್ಧ ಅನ್ನಿಸಿಕೊಳ್ಳುತ್ತದೆ' ಎಂದು ನಿತೀಶ್ ಹೇಳಿದ್ದರೂ, `ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ' ಎನ್ನುವ ಮೂಲಕ ಕಾಂಗ್ರೆಸ್ನೊಂದಿಗಿನ ಸಂಧಾನ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದ್ದಾರೆ.<br /> <br /> ಬಿಹಾರ ರಾಜ್ಯ ಕಾಂಗ್ರೆಸ್ ವಕ್ತಾರರಾದ ಪ್ರೇಮ್ಚಂದ್ರ ಮಿಶ್ರಾ ಕೂಡ ಇದಕ್ಕೆ ಪೂರಕವಾದ ಮಾತುಗಳನ್ನು ಆಡಿದ್ದಾರೆ. `ಲಾಲು ಅವರೊಂದಿಗಿನ ನಮ್ಮ ಮೈತ್ರಿ ಸಾಧ್ಯತೆ ತುಂಬ ಕ್ಷೀಣ. ನಾವು ಚುನಾವಣೆಗೆ ಏಕಾಂಗಿಯಾಗಿ ಅಥವಾ ಜೆಡಿಯು ಜತೆ ಕೈಜೋಡಿಸಿ ಹೋಗಲಿದ್ದೇವೆ. ಜೆಡಿಯು ಜತೆ ಕ್ಷೇತ್ರ ಹೊಂದಾಣಿಕೆ ನಮ್ಮ ಮುಂದಿರುವ ಮತ್ತೊಂದು ಆಯ್ಕೆ' ಎಂದು ಅವರು ದಾಳ ಉರುಳಿಸಿದ್ದಾರೆ.<br /> <br /> ಮತ್ತೊಂದೆಡೆ, ಎಲ್ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರನ್ನೂ ಮೈತ್ರಿಗೆ ಸೆಳೆಯುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂದರೆ, `ಕಾಂಗ್ರೆಸ್- ಜೆಡಿಯು- ಕಮ್ಯುನಿಸ್ಟರು- ಎಲ್ಜೆಪಿ'ಗಳ ವಿಶಾಲ ತಳಹದಿಯೊಂದಿಗೆ ಮೈತ್ರಿಕೂಟ ರಚಿಸುವುದು ಆ ಪಕ್ಷದ ಉದ್ದೇಶ.<br /> <br /> ಎಲ್ಜೆಪಿ ಜತೆ ಕೈಜೋಡಿಸುವುದು ನಿತೀಶ್ಗೆ ಸುತರಾಂ ಇಷ್ಟವಿಲ್ಲವಾದರೂ, ಲಾಲು ಹಾಗೂ ಪಾಸ್ವಾನ್ ನಡುವೆ ಕಂದಕ ಸೃಷ್ಟಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಲಾಗದ ಸ್ಥಿತಿಯಲ್ಲಿ ಅವರು ಈಗ ಇದ್ದಾರೆ. ಮುಂಬರುವ ಚುನಾವಣೆಯಲ್ಲಿ ಲಾಲು ಜತೆಗೆ ಇಬ್ಬರು ಮೋದಿಗಳಾದ- ನರೇಂದ್ರ ಮೋದಿ ಮತ್ತು ಸುಶೀಲ್ ಮೋದಿ ಅವರನ್ನು ಎದುರಿಸಬೇಕಾದ ಸವಾಲು ನಿತೀಶ್ಗೆ ಎದುರಾಗಲಿದೆ. ಇದನ್ನು ಅವರು ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ.<br /> <br /> ಇದೇ ವೇಳೆ ಲಾಲು ಅವರನ್ನು ಈಗ ಮೂರನೆಯ ಚಿಂತೆಯೊಂದು ಬಾಧಿಸುತ್ತಿದೆ. 900 ಕೋಟಿ ರೂಪಾಯಿಗಳ 17 ವರ್ಷ ಹಳೆಯದಾದ ಮೇವು ಹಗರಣದ ಸಂಬಂಧ ಸಿಬಿಐ ನ್ಯಾಯಾಲಯ ಜುಲೈ 15ರಂದು ಏನು ತೀರ್ಪು ನೀಡಲಿದೆಯೋ ಎಂಬುದೇ ಈ ಚಿಂತೆ. ಲಾಲು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ತೀರ್ಪು ಪ್ರಕಟವಾದರೆ ಅದು ಅವರ ರಾಜಕೀಯ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>