<p><strong>ಚೆನ್ನೈ (ಪಿಟಿಐ): </strong>ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೊರ್ಟ್ ಗುರುವಾರ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ವೆಲ್ಲೂರು ಜೈಲಿನಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.<br /> <br /> ರಾಜೀವ್ ಹತ್ಯೆ ಪ್ರಕರಣದಲ್ಲಿ 23 ವರ್ಷ ಜೈಲಿನಲ್ಲಿ ಕಳೆದ ನಂತರ ಇದೀಗ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಶಾಂತನ್, ಮುರುಗನ್ ಮತ್ತು ಪೇರರಿವಾಳನ್ ಕನಸು ಭಗ್ನವಾಗಿದೆ.<br /> <br /> ರಾಜೀವ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಏಳು ಜನರನ್ನು ಮೂರು ದಿನಗಳ ಒಳಗಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಜೆ. ಜಯಲಲಿತಾ ಬುಧವಾರ ಸದನದಲ್ಲಿ ಪ್ರಕಟಿಸಿದ ನಂತರ ಹಂತಕರು ಮತ್ತು ಅವರ ಸಂಬಂಧಿಕರಲ್ಲಿ ಆಸೆಗಳು ಗರಿಗೆದರಿದ್ದವು.<br /> ಆದರೆ, ಅದಾದ 24 ಗಂಟೆಗಳ ಒಳಗಾಗಿ ಹೊರಬಿದ್ದ ಸುಪ್ರೀಂಕೋರ್ಟ್ನ ಈ ಆದೇಶ ಮೂವರು ಹಂತಕರು ಮತ್ತು ಅವರ ಸಂಬಂಧಿಗಳ ಆಸೆಗೆ ತಣ್ಣೀರು ಎರೆಚಿದೆ.<br /> <br /> ಈ ನಡುವೆ ಜಯಲಲಿತಾ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಡಿಎಂಕೆ ನಾಯಕ ಎಂ.ಕರುಣಾನಿಧಿ, ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಐಎಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.<br /> <br /> <a href="http://www.prajavani.net/article/%E0%B2%A8%E0%B2%BE%E0%B2%B5%E0%B3%81-%E0%B2%A4%E0%B2%AE%E0%B2%BF%E0%B2%B3%E0%B2%B0%E0%B2%B2%E0%B3%8D%E0%B2%B2%E0%B2%B5%E0%B3%87-%E0%B2%B8%E0%B2%82%E0%B2%A4%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%B0-%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%A6-%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86">*ನಾವು ತಮಿಳರಲ್ಲವೇ?: ಸಂತ್ರಸ್ತರ ಕುಟುಂಬದ ಪ್ರಶ್ನೆ</a></p>.<p><a href="http://www.prajavani.net/article/%E0%B2%B8%E0%B2%AE%E0%B2%BE%E0%B2%B2%E0%B3%8B%E0%B2%9A%E0%B2%A8%E0%B3%86-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF">*ಸಮಾಲೋಚನೆ ಕಡ್ಡಾಯ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ): </strong>ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೊರ್ಟ್ ಗುರುವಾರ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ವೆಲ್ಲೂರು ಜೈಲಿನಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.<br /> <br /> ರಾಜೀವ್ ಹತ್ಯೆ ಪ್ರಕರಣದಲ್ಲಿ 23 ವರ್ಷ ಜೈಲಿನಲ್ಲಿ ಕಳೆದ ನಂತರ ಇದೀಗ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಶಾಂತನ್, ಮುರುಗನ್ ಮತ್ತು ಪೇರರಿವಾಳನ್ ಕನಸು ಭಗ್ನವಾಗಿದೆ.<br /> <br /> ರಾಜೀವ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಏಳು ಜನರನ್ನು ಮೂರು ದಿನಗಳ ಒಳಗಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಜೆ. ಜಯಲಲಿತಾ ಬುಧವಾರ ಸದನದಲ್ಲಿ ಪ್ರಕಟಿಸಿದ ನಂತರ ಹಂತಕರು ಮತ್ತು ಅವರ ಸಂಬಂಧಿಕರಲ್ಲಿ ಆಸೆಗಳು ಗರಿಗೆದರಿದ್ದವು.<br /> ಆದರೆ, ಅದಾದ 24 ಗಂಟೆಗಳ ಒಳಗಾಗಿ ಹೊರಬಿದ್ದ ಸುಪ್ರೀಂಕೋರ್ಟ್ನ ಈ ಆದೇಶ ಮೂವರು ಹಂತಕರು ಮತ್ತು ಅವರ ಸಂಬಂಧಿಗಳ ಆಸೆಗೆ ತಣ್ಣೀರು ಎರೆಚಿದೆ.<br /> <br /> ಈ ನಡುವೆ ಜಯಲಲಿತಾ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಡಿಎಂಕೆ ನಾಯಕ ಎಂ.ಕರುಣಾನಿಧಿ, ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಐಎಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.<br /> <br /> <a href="http://www.prajavani.net/article/%E0%B2%A8%E0%B2%BE%E0%B2%B5%E0%B3%81-%E0%B2%A4%E0%B2%AE%E0%B2%BF%E0%B2%B3%E0%B2%B0%E0%B2%B2%E0%B3%8D%E0%B2%B2%E0%B2%B5%E0%B3%87-%E0%B2%B8%E0%B2%82%E0%B2%A4%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%B0-%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%A6-%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86">*ನಾವು ತಮಿಳರಲ್ಲವೇ?: ಸಂತ್ರಸ್ತರ ಕುಟುಂಬದ ಪ್ರಶ್ನೆ</a></p>.<p><a href="http://www.prajavani.net/article/%E0%B2%B8%E0%B2%AE%E0%B2%BE%E0%B2%B2%E0%B3%8B%E0%B2%9A%E0%B2%A8%E0%B3%86-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF">*ಸಮಾಲೋಚನೆ ಕಡ್ಡಾಯ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>