ಅಂದ ಹಾಗೆ ಸುರೇಂದ್ರ ಸಿಂಗ್ ಈ ರೀತಿಯ ಹೇಳಿಕೆ ನೀಡಿದ್ದು ಇದೇ ಮೊದಲೇನೂ ಅಲ್ಲ. ಫೆಬ್ರುವರಿಯಲ್ಲಿ ರಾಟ್ಸಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್, ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಎನ್ನದವರಿಗೆ ಈ ದೇಶದಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲ, ಇಂಥ ಜನರು ರಾಜಕೀಯ ಪ್ರವೇಶಿಸಲು ಅವಕಾಶ ನೀಡಬಾರದು. ‘ಭಾರತ್ ಮಾತಾ ಕಿ ಜೈ’ ಎನ್ನದವರು ಪಾಕಿಸ್ತಾನಿಗಳು ಎಂದು ಹೇಳಿ ವಿವಾದಕ್ಕೀಡಾಗಿದಿದ್ದರು.