ಜನರಲ್ ವಿ.ಕೆ.ಸಿಂಗ್ ಅವರು ತೇಜಿಂದರ್ ಸಿಂಗ್ ಅವರ ವಿರುದ್ಧ 14 ಕೋಟಿ ರೂಪಾಯಿಗಳ ಲಂಚ ನೀಡಲು ಬಂದ ಆರೋಪ ಹೋರಿಸಿದ ಮರುದಿನವೇ ತೇಜಿಂದರ್ ಸಿಂಗ್ ಅವರು ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆಗ್ರಹಪಡಿಸಿದ್ದರು. ತೇಜಿಂದರ್ ತಮ್ಮ ದೂರಿನಲ್ಲಿ ಸೇನಾ ಮುಖ್ಯಸ್ಥರಾಗಿದ್ದುಕೊಂಡು ಜನರಲ್ ವಿ.ಕೆ.ಸಿಂಗ್ ಅವರು ರಾಜಕೀಯ ಮುಖಂಡರಂತೆ ಹೇಳಿಕೆ ನೀಡುತ್ತಿರುವುದರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ತಮ್ಮ ಮೊಕದ್ದಮೆಯಲ್ಲಿ ಜನರಲ್ ವಿ.ಕೆ.ಸಿಂಗ್ ಅವರನ್ನೂ ಒಬ್ಬ ಕಕ್ಷೀದಾರರನ್ನಾಗಿ ಮಾಡಿದ್ದರು.