<p><strong>ನವದೆಹಲಿ:</strong> 70 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ಸ್ವರಾಜ್ಯದಿಂದ ಸುರಾಜ್ಯ (ಉತ್ತಮ ಆಡಳಿತ)ದತ್ತ ಕೊಂಡೊಯ್ಯಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.<br /> ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಎಂಬ ಕೇಂದ್ರ ಸರಕಾರದ ಧ್ಯೇಯೋದ್ದೇಶವನ್ನು ಪುನರುಚ್ಛರಿಸಿದ ಮೋದಿ, ತಮ್ಮ ಭಾಷಣದಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆಗೆ ಭಾರತ ಮಣಿಯುವುದಿಲ್ಲ. ಪಾಕಿಸ್ತಾನದ ಉಗ್ರವಾದವನ್ನು ನಾವೆಂದೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನಾವು ನೀಡುತ್ತೇವೆ ಎಂದು ಮೋದಿ ಘರ್ಜಿಸಿದ್ದಾರೆ.</p>.<p><strong>ಮೋದಿ ಭಾಷಣದ ಮುಖ್ಯಾಂಶಗಳು</strong></p>.<p>1 ಒಬ್ಬ ರಾಜಕೀಯ ನಾಯಕನ ರೀತಿಯಿಂದ ಭಿನ್ನವಾಗಿ ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಈ ಧ್ಯೇಯವನ್ನು ಮೈಗೂಡಿಸಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ.<br /> <br /> 2. ಈ ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಮಾಡುವ ಹೊಣೆ ಭಾರತದ 125 ಕೋಟಿ ಜನರ ಮೇಲಿದೆ. ಸಂಸತ್ನಿಂದ ಪಂಚಾಯತ್ಗಳ ವರೆಗೆ, ಗ್ರಾಮ್ ಪ್ರಧಾನ್ಗಳಿಂದ ಪ್ರಧಾನಿಯವರೆಗೆ ಎಲ್ಲರೂ ತಮ್ಮ ಕರ್ತವ್ಯವನ್ನು ಪರಿಪಾಲನೆ ಮಾಡಬೇಕಾಗಿದೆ. ಹಾಗಾದರೆ ಮಾತ್ರ ಸುರಾಜ್ಯದ ಕನಸು ನನಸಾಗುತ್ತದೆ.<br /> <br /> 3. ಕೆಲವು ದಿನಗಳಿಂದ ಬಲೂಚಿಸ್ತಾನ್, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ನನಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಅವರಿಗೆ ನಾನು ಋಣಿ.<br /> <br /> 4 . ಸರಕಾರ ಏನೆಲ್ಲಾ ಕೆಲಸ ಮಾಡಿದೆ ಎಂಬುದನ್ನು ಲೆಕ್ಕ ಹಾಕುವುದು ಸುಲಭ. ಆದರೆ ಆ ಕೆಲಸ, ಯೋಜನೆಗಳನ್ನು ಆರಂಭಿಸಬೇಕಾದರೆ ಎಷ್ಟು ಕಷ್ಟವಿದೆ ಎಂಬುದು ತಿಳಿಯಬೇಕು. ಇಂದು ನಾನು 'ಕಾರ್ಯ'ದ ಬದಲು ಸರಕಾರದ ಕಾರ್ಯ ಸಂಕ್ರಾಂತಿ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ.<br /> <br /> 5. ನಾವು ಹಣದುಬ್ಬರ ದರವನ್ನು ಶೇ, 6ರಿಂದ ಕೆಳಗೆ ತಂದಿದ್ದೇವೆ. ಹಣದುಬ್ಬರದಿಂದಾಗಿ ಬಡವರು ಹಸಿವಿನಿಂದ ಬಳಲಬಾರದು. ಇದಕ್ಕಾಗಿ ನಾನು ನಿರಂತರ ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.<br /> <br /> 6. ನಮ್ಮ ಸಾಮಾಜಿಕ ಐಕ್ಯತೆ ತುಂಬಾ ಮುಖ್ಯ. ಹೆಸರು ಅಥವಾ ಜಾತಿಯ ಹೆಸರಲ್ಲಿ ಭೇದ ಭಾವ ಸಲ್ಲದು. ಮತಾಂಧತೆ ದೇಶಕ್ಕೆ ಮಾರಕ. ಈ ಎಲ್ಲ ಸಮಸ್ಯೆಗಳನ್ನು ನಾವು ಮೀರಿ ನಿಲ್ಲಬೇಕಾಗಿದೆ.<br /> <br /> 7. ನಾವೆಲ್ಲರೂ ಸಾಮಾಜಿಕ ಪಿಡುಗು ವಿರುದ್ಧ ಹೋರಾಡುವ ಮೂಲಕ ಸಾಮಾಜಿತ ನ್ಯಾಯಕ್ಕೆ ಬೆಂಬಲ ನೀಡಬೇಕು. ಮಹಾತ್ಮಾ ಗಾಂಧಿ, ಅಂಬೇಡ್ಕರ್ ಅವರಂಥಾ ಮಹಾನ್ ನಾಯಕರು ಸದಾ ಸಾಮಾಜಿಕ ಐಕ್ಯತೆಗೆ ಒತ್ತು ನೀಡಿದ್ದರು.<br /> <br /> 8. ಜನರು ಕಂದಾಯ ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಬೀಳುತ್ತಿದ್ದಾರೆ, ಹೆಚ್ಚಾಗಿ ಮಧ್ಯಮ ವರ್ಗ ಕುಟುಂಬಗಳು. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ, ನಾನು ಇದನ್ನು ಬದಲಿಸುತ್ತೇನೆ. ಈ ಹಿಂದೆ ಪಾಸ್ಪೋರ್ಟ್ ಸಿಗಲು ಒಂದು ತಿಂಗಳು ಕಾಯಬೇಕಾಗಿತ್ತು. ಆದರೆ ಈಗ ಕೆಲವೇ ವಾರಗಳಲ್ಲಿ ಪಾಸ್ಪೋರ್ಟ್ ಕೈ ಸೇರುತ್ತದೆ. ಸುರಾಜ್ಯದಲ್ಲಿ ಪಾರದರ್ಶಕತೆ ಅತೀ ಅಗತ್ಯ.<br /> <br /> 9. ಅದೊಂದು ಕಾಲವಿತ್ತು, ಸರಕಾರ ಆರೋಪದ ಸುಳಿಯಲ್ಲಿ ಸಿಲುಕಿರುತ್ತಿತ್ತು. ಆದರೆ ಈಗ ಜನರು ಸರಕಾರದ ಮೇಲೆ ನಿರೀಕ್ಷೆಯನ್ನಿಟ್ಟು ಕಾಯುತ್ತಿರುತ್ತಾರೆ.</p>.<p>10.ಸ್ವಾತಂತ್ರ್ಯ ಹೋರಾಟಗಾರರ ನಿವೃತ್ತಿ ವೇತನದಲ್ಲಿ ಶೇ. 20 ಏರಿಕೆ<br /> <br /> 11. ಬಡಕುಟುಂಬಗಳಿಗೆ ಸಹಾಯವಾಗುವಂತೆ ರು. 1 ಲಕ್ಷದಷ್ಟು ಔಷಧಿ ವೆಚ್ಚವನ್ನು ಭರಿಸುವುದು</p>.<p><strong>ಭಾಷಣದ ವಿಡಿಯೊ</strong></p>.<p></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 70 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ಸ್ವರಾಜ್ಯದಿಂದ ಸುರಾಜ್ಯ (ಉತ್ತಮ ಆಡಳಿತ)ದತ್ತ ಕೊಂಡೊಯ್ಯಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.<br /> ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಎಂಬ ಕೇಂದ್ರ ಸರಕಾರದ ಧ್ಯೇಯೋದ್ದೇಶವನ್ನು ಪುನರುಚ್ಛರಿಸಿದ ಮೋದಿ, ತಮ್ಮ ಭಾಷಣದಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆಗೆ ಭಾರತ ಮಣಿಯುವುದಿಲ್ಲ. ಪಾಕಿಸ್ತಾನದ ಉಗ್ರವಾದವನ್ನು ನಾವೆಂದೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನಾವು ನೀಡುತ್ತೇವೆ ಎಂದು ಮೋದಿ ಘರ್ಜಿಸಿದ್ದಾರೆ.</p>.<p><strong>ಮೋದಿ ಭಾಷಣದ ಮುಖ್ಯಾಂಶಗಳು</strong></p>.<p>1 ಒಬ್ಬ ರಾಜಕೀಯ ನಾಯಕನ ರೀತಿಯಿಂದ ಭಿನ್ನವಾಗಿ ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಈ ಧ್ಯೇಯವನ್ನು ಮೈಗೂಡಿಸಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ.<br /> <br /> 2. ಈ ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಮಾಡುವ ಹೊಣೆ ಭಾರತದ 125 ಕೋಟಿ ಜನರ ಮೇಲಿದೆ. ಸಂಸತ್ನಿಂದ ಪಂಚಾಯತ್ಗಳ ವರೆಗೆ, ಗ್ರಾಮ್ ಪ್ರಧಾನ್ಗಳಿಂದ ಪ್ರಧಾನಿಯವರೆಗೆ ಎಲ್ಲರೂ ತಮ್ಮ ಕರ್ತವ್ಯವನ್ನು ಪರಿಪಾಲನೆ ಮಾಡಬೇಕಾಗಿದೆ. ಹಾಗಾದರೆ ಮಾತ್ರ ಸುರಾಜ್ಯದ ಕನಸು ನನಸಾಗುತ್ತದೆ.<br /> <br /> 3. ಕೆಲವು ದಿನಗಳಿಂದ ಬಲೂಚಿಸ್ತಾನ್, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ನನಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಅವರಿಗೆ ನಾನು ಋಣಿ.<br /> <br /> 4 . ಸರಕಾರ ಏನೆಲ್ಲಾ ಕೆಲಸ ಮಾಡಿದೆ ಎಂಬುದನ್ನು ಲೆಕ್ಕ ಹಾಕುವುದು ಸುಲಭ. ಆದರೆ ಆ ಕೆಲಸ, ಯೋಜನೆಗಳನ್ನು ಆರಂಭಿಸಬೇಕಾದರೆ ಎಷ್ಟು ಕಷ್ಟವಿದೆ ಎಂಬುದು ತಿಳಿಯಬೇಕು. ಇಂದು ನಾನು 'ಕಾರ್ಯ'ದ ಬದಲು ಸರಕಾರದ ಕಾರ್ಯ ಸಂಕ್ರಾಂತಿ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ.<br /> <br /> 5. ನಾವು ಹಣದುಬ್ಬರ ದರವನ್ನು ಶೇ, 6ರಿಂದ ಕೆಳಗೆ ತಂದಿದ್ದೇವೆ. ಹಣದುಬ್ಬರದಿಂದಾಗಿ ಬಡವರು ಹಸಿವಿನಿಂದ ಬಳಲಬಾರದು. ಇದಕ್ಕಾಗಿ ನಾನು ನಿರಂತರ ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.<br /> <br /> 6. ನಮ್ಮ ಸಾಮಾಜಿಕ ಐಕ್ಯತೆ ತುಂಬಾ ಮುಖ್ಯ. ಹೆಸರು ಅಥವಾ ಜಾತಿಯ ಹೆಸರಲ್ಲಿ ಭೇದ ಭಾವ ಸಲ್ಲದು. ಮತಾಂಧತೆ ದೇಶಕ್ಕೆ ಮಾರಕ. ಈ ಎಲ್ಲ ಸಮಸ್ಯೆಗಳನ್ನು ನಾವು ಮೀರಿ ನಿಲ್ಲಬೇಕಾಗಿದೆ.<br /> <br /> 7. ನಾವೆಲ್ಲರೂ ಸಾಮಾಜಿಕ ಪಿಡುಗು ವಿರುದ್ಧ ಹೋರಾಡುವ ಮೂಲಕ ಸಾಮಾಜಿತ ನ್ಯಾಯಕ್ಕೆ ಬೆಂಬಲ ನೀಡಬೇಕು. ಮಹಾತ್ಮಾ ಗಾಂಧಿ, ಅಂಬೇಡ್ಕರ್ ಅವರಂಥಾ ಮಹಾನ್ ನಾಯಕರು ಸದಾ ಸಾಮಾಜಿಕ ಐಕ್ಯತೆಗೆ ಒತ್ತು ನೀಡಿದ್ದರು.<br /> <br /> 8. ಜನರು ಕಂದಾಯ ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಬೀಳುತ್ತಿದ್ದಾರೆ, ಹೆಚ್ಚಾಗಿ ಮಧ್ಯಮ ವರ್ಗ ಕುಟುಂಬಗಳು. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ, ನಾನು ಇದನ್ನು ಬದಲಿಸುತ್ತೇನೆ. ಈ ಹಿಂದೆ ಪಾಸ್ಪೋರ್ಟ್ ಸಿಗಲು ಒಂದು ತಿಂಗಳು ಕಾಯಬೇಕಾಗಿತ್ತು. ಆದರೆ ಈಗ ಕೆಲವೇ ವಾರಗಳಲ್ಲಿ ಪಾಸ್ಪೋರ್ಟ್ ಕೈ ಸೇರುತ್ತದೆ. ಸುರಾಜ್ಯದಲ್ಲಿ ಪಾರದರ್ಶಕತೆ ಅತೀ ಅಗತ್ಯ.<br /> <br /> 9. ಅದೊಂದು ಕಾಲವಿತ್ತು, ಸರಕಾರ ಆರೋಪದ ಸುಳಿಯಲ್ಲಿ ಸಿಲುಕಿರುತ್ತಿತ್ತು. ಆದರೆ ಈಗ ಜನರು ಸರಕಾರದ ಮೇಲೆ ನಿರೀಕ್ಷೆಯನ್ನಿಟ್ಟು ಕಾಯುತ್ತಿರುತ್ತಾರೆ.</p>.<p>10.ಸ್ವಾತಂತ್ರ್ಯ ಹೋರಾಟಗಾರರ ನಿವೃತ್ತಿ ವೇತನದಲ್ಲಿ ಶೇ. 20 ಏರಿಕೆ<br /> <br /> 11. ಬಡಕುಟುಂಬಗಳಿಗೆ ಸಹಾಯವಾಗುವಂತೆ ರು. 1 ಲಕ್ಷದಷ್ಟು ಔಷಧಿ ವೆಚ್ಚವನ್ನು ಭರಿಸುವುದು</p>.<p><strong>ಭಾಷಣದ ವಿಡಿಯೊ</strong></p>.<p></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>