<p>‘ಹಿಂದೂ ಎಲ್ಲಾ ಒಂದು’ ಆಗುವುದನ್ನು ಯಾರೂ ಬೇಡ ಅನ್ನುವುದಿಲ್ಲ. ಇದಕ್ಕಾಗಿ ಬೇರೆ ಧರ್ಮವನ್ನು ದ್ವೇಷಿಸುವ ಅಗತ್ಯವಿಲ್ಲ. ಬದಲಾಗಿ ಹಿಂದೂ ಧರ್ಮಕ್ಕೆ ಪ್ರೀತಿ ಪೂರ್ವಕ ಬರುವವರನ್ನು ಸ್ವಾಗತಿಸಬೇಕು.<br /> <br /> ಈಗ ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವಿಭಾಗಗಳಿವೆ. ಅವು ರದ್ದಾಗಬೇಕು. ಆಗ ಹಿಂದು ಎಲ್ಲಾ ಒಂದಾಗುತ್ತಾರೆ.<br /> <br /> 1932ರಲ್ಲೇ ಮಹಾತ್ಮ ಗಾಂಧಿ ಹೇಳಿದ್ದು, ‘ಇದೀಗ ವರ್ಣ ವ್ಯವಸ್ಥೆಯು ಮುರಿದು ಬಿದ್ದಿದೆ. ಈಗ ನಿಜವಾದ ಬ್ರಾಹ್ಮಣ, ಕ್ಷತ್ರಿಯಾ, ವೈಶ್ಯ ಯಾರೂ ಇಲ್ಲ. ಹಿಂದೂಗಳೆಲ್ಲರೂ ಶೂದ್ರರಾಗಿ ಒಂದೇ ವರ್ಣದವರಾಗಿದ್ದೇವೆ. ಜೊತೆಗೆ ಅಸ್ಪೃಶ್ಯತೆಯನ್ನು ತೆಗೆದು ಹಾಕತಕ್ಕದ್ದು. ಇದರಿಂದ ಉತ್ತಮರು - ಕನಿಷ್ಠರು, ಮೇಲು- ಕೀಳು ಎಂಬ ಭಾವನೆ ನಾಶವಾಗುತ್ತದೆ’ ಎಂದಿದ್ದಾರೆ. ಆಗ ಹಿಂದೂ ಎಲ್ಲಾ ಒಂದು ಎಂಬುದು ಅರ್ಥಪೂರ್ಣವಾಗುತ್ತದೆ. ಇದನ್ನು ಕಾಯಾ- ವಾಚಾ- ಮನಸಾ ಎಲ್ಲರೂ ಅನುಸರಿಸತಕ್ಕದ್ದು.<br /> <br /> ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದು ಮತ್ತು ಭಾಗವಹಿಸುವುದು.<br /> ಈ ಸುಧಾರಣೆಗಳಿಗೆ ಒಪ್ಪಿ- ಆಚರಣೆಯಲ್ಲಿ ತರುವವರಿಗೆ ಮಾತ್ರ ಎಲ್ಲಾ ರೀತಿಯ ಚುನಾವಣೆಗಳಲ್ಲಿ ಮತ ನೀಡತಕ್ಕದ್ದು.<br /> ಈ 5 ಅಂಶಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ- ಪ್ರೋತ್ಸಾಹ- ಬೆಂಬಲಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಹಿಂದೂ ಎಲ್ಲಾ ಒಂದು’ ಆಗುವುದನ್ನು ಯಾರೂ ಬೇಡ ಅನ್ನುವುದಿಲ್ಲ. ಇದಕ್ಕಾಗಿ ಬೇರೆ ಧರ್ಮವನ್ನು ದ್ವೇಷಿಸುವ ಅಗತ್ಯವಿಲ್ಲ. ಬದಲಾಗಿ ಹಿಂದೂ ಧರ್ಮಕ್ಕೆ ಪ್ರೀತಿ ಪೂರ್ವಕ ಬರುವವರನ್ನು ಸ್ವಾಗತಿಸಬೇಕು.<br /> <br /> ಈಗ ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವಿಭಾಗಗಳಿವೆ. ಅವು ರದ್ದಾಗಬೇಕು. ಆಗ ಹಿಂದು ಎಲ್ಲಾ ಒಂದಾಗುತ್ತಾರೆ.<br /> <br /> 1932ರಲ್ಲೇ ಮಹಾತ್ಮ ಗಾಂಧಿ ಹೇಳಿದ್ದು, ‘ಇದೀಗ ವರ್ಣ ವ್ಯವಸ್ಥೆಯು ಮುರಿದು ಬಿದ್ದಿದೆ. ಈಗ ನಿಜವಾದ ಬ್ರಾಹ್ಮಣ, ಕ್ಷತ್ರಿಯಾ, ವೈಶ್ಯ ಯಾರೂ ಇಲ್ಲ. ಹಿಂದೂಗಳೆಲ್ಲರೂ ಶೂದ್ರರಾಗಿ ಒಂದೇ ವರ್ಣದವರಾಗಿದ್ದೇವೆ. ಜೊತೆಗೆ ಅಸ್ಪೃಶ್ಯತೆಯನ್ನು ತೆಗೆದು ಹಾಕತಕ್ಕದ್ದು. ಇದರಿಂದ ಉತ್ತಮರು - ಕನಿಷ್ಠರು, ಮೇಲು- ಕೀಳು ಎಂಬ ಭಾವನೆ ನಾಶವಾಗುತ್ತದೆ’ ಎಂದಿದ್ದಾರೆ. ಆಗ ಹಿಂದೂ ಎಲ್ಲಾ ಒಂದು ಎಂಬುದು ಅರ್ಥಪೂರ್ಣವಾಗುತ್ತದೆ. ಇದನ್ನು ಕಾಯಾ- ವಾಚಾ- ಮನಸಾ ಎಲ್ಲರೂ ಅನುಸರಿಸತಕ್ಕದ್ದು.<br /> <br /> ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದು ಮತ್ತು ಭಾಗವಹಿಸುವುದು.<br /> ಈ ಸುಧಾರಣೆಗಳಿಗೆ ಒಪ್ಪಿ- ಆಚರಣೆಯಲ್ಲಿ ತರುವವರಿಗೆ ಮಾತ್ರ ಎಲ್ಲಾ ರೀತಿಯ ಚುನಾವಣೆಗಳಲ್ಲಿ ಮತ ನೀಡತಕ್ಕದ್ದು.<br /> ಈ 5 ಅಂಶಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ- ಪ್ರೋತ್ಸಾಹ- ಬೆಂಬಲಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>