ಕೇಂದ್ರದ ಯೋಜನೆಗಳನ್ನು ಪ್ರಜೆಗಳಿಗೆ ತಲುಪಿಸುವ, ಪ್ರಧಾನ ಮಂತ್ರಿ ಜನ ಕಲ್ಯಾಣಕಾರಿ ಯೋಜನೆಗಳ ಪ್ರಚಾರ-ಪ್ರಸಾರ ಅಭಿಯಾನಕ್ಕೆ ದಕ್ಷಿಣ ಭಾರತದ ಬ್ರ್ಯಾಂಡ್ ರಾಯಭಾರಿಯಾಗಿ ಕನ್ನಡದ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ ಅವರು ನೇಮಕಗೊಂಡಿದ್ದಾರೆ. ಕೇಂದ್ರದ ಜನ ಕಲ್ಯಾಣ ಯೋಜನೆಗಳನ್ನು ಜನತೆಗೆ ತಲುಪಿಸುವುದು ಅವರ ಹೊಣೆಗಾರಿಕೆ. ಆಯುಷ್ಮಾನ್ ಭಾರತ್, ಪಿಂಚಣಿ ಯೋಜನೆ, ಮುದ್ರಾ ಯೋಜನೆ ಮುಂತಾದವುಗಳನ್ನು ಜನಸಾಮಾನ್ಯರು ಯಾವುದೇ ಸಮಸ್ಯೆಗಳಿಲ್ಲದೆ ಪಡೆಯುವಂತಾಗಲು ರೂಪಾ ಅಯ್ಯರ್ ಅವರ ತಂಡವು ಶ್ರಮಿಸಲಿದೆ. ಈ ಕುರಿತು ಪ್ರಜಾವಾಣಿ ಸಂದರ್ಶನದಲ್ಲಿ ರೂಪಾ ಅಯ್ಯರ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.