ಅದಕ್ಕೂ ಮುನ್ನ ಘಟಕವನ್ನು ಸಂಪೂರ್ಣವಾಗಿ ನಿರ್ಬಂಧಿತ ಪ್ರದೇಶವಾಗಿಸಿ, ಜೂನ್ 15ರಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶ ನೀಡಿದ್ದರು. ಅಂದಿನಿಂದ ಜೂನ್ 30ರವರೆಗೂ ಆದೇಶ ಜಾರಿಯಲ್ಲಿರಲಿದ್ದು, ಘಟಕದಿಂದ ಹೊರಗೆ ಯಾರೂ ಬಾರದಂತೆ, ಒಳಗೆ ಯಾರೂ ಹೋಗದಂತೆ ಮೂರು ಪಾಳಿಯಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.