ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಎತ್ತುವ ವಾಹನ ಚಾಲಕರಾದ ಅಬ್ದುಲ್ ಖಾದರ್ (29), ಶಂಭು (28), ನಂದಿಬೇವೂರಿನ ಅಲ್ಲಾಬಕ್ಷ್ (45), ಹೂವಿನಹಡಗಲಿ ಅವಿಮಲ್ಲನಕೆರೆ ತಾಂಡ ಲೋಕ್ಯಾನಾಯ್ಕ (34), ಚಿಕ್ಕಮಗಳೂರು ಕುರುಬರಹಳ್ಳಿ ಜಯಣ್ಣ (49), ಚಿಕ್ಕಮಗಳೂರು ಮಾಚೇನಹಳ್ಳಿ ತಾಂಡಾದ ವಿರೇಂದ್ರ ನಾಯ್ಕ ಬಂಧಿತ ಆರೋಪಿಗಳು. ಅವರಿಂದ ಮಣ್ಣುಮುಕ್ಕ ಹಾವು (ಇರ್ತಲೆ ಹಾವು) ಹಾಗೂ ಒಂದು ಗೂಬೆಯನ್ನು ವಶಕ್ಕೆ ಪಡೆಯಲಾಗಿದೆ.