<p><strong>ಬೆಂಗಳೂರು</strong>: ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್ನ ಬಿಜೆಪಿ ಸದಸ್ಯೆ ರೇಖಾ ಅವರ ಪತಿ ಎಸ್.ಕದಿರೇಶ್ (47) ಅವರನ್ನು ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ಹೊಡೆದು ಬುಧವಾರ ಹಾಡಹಗಲೇ ಹತ್ಯೆ ಮಾಡಿದ್ದಾರೆ.</p>.<p>ಕಾಟನ್ಪೇಟೆಯ ಆಂಜನಪ್ಪ ಗಾರ್ಡನ್ನಲ್ಲಿ ವಾಸವಿದ್ದ ಕದಿರೇಶ್, ಮನೆ ಸಮೀಪದ ಮುನೀಶ್ವರ ದೇವಸ್ಥಾನಕ್ಕೆ ಮಧ್ಯಾಹ್ನ 3.30ರ ಸುಮಾರಿಗೆ ಹೋಗಿದ್ದರು. ದೇವಸ್ಥಾನದ ಆವರಣದಲ್ಲೇ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ.</p>.<p>ಅವರು ಬಿಜೆಪಿ ಎಸ್.ಸಿ.ಮೋರ್ಚಾದ ಚಾಮರಾಜಪೇಟೆ ಘಟಕದ ಉಪಾಧ್ಯಕ್ಷ. ಅವರ ಪತ್ನಿ ರೇಖಾ ಎರಡನೇ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆ ಆಗಿದ್ದರು. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.</p>.<p><strong>ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ದಾಳಿ:</strong></p>.<p>ಆಂಜನಪ್ಪ ಗಾರ್ಡನ್ನ 3ನೇ ಅಡ್ಡರಸ್ತೆಯಲ್ಲಿ ದೇವಸ್ಥಾನ ಇದ್ದು, ಅಲ್ಲಿ ಶಿವರಾತ್ರಿ ಆಚರಣೆಗಾಗಿ ಸಿದ್ಧತೆ ನಡೆದಿದೆ. ಅದರ ಹಿಂಭಾಗದ ಜಾಗದಲ್ಲಿ ಜಿಮ್ ನಿರ್ಮಾಣಕ್ಕೆ ಪಾಯ ತೊಡಲಾಗುತ್ತಿದೆ. ಇದನ್ನು ವೀಕ್ಷಿಸಲು ಕದಿರೇಶ್ ಸ್ಥಳಕ್ಕೆ ತೆರಳಿದ್ದರು.</p>.<p>ದೇವಸ್ಥಾನದ ಮುಂಭಾಗದಲ್ಲಿ ಸೇರಿದ್ದ 10 ಮಂದಿ ಅಗ್ನಿಕುಂಡ ನಿರ್ಮಾಣದಲ್ಲಿ ನಿರತರಾಗಿದ್ದರು. ಅವರೊಂದಿಗೆ ಕದಿರೇಶ್ ಮಾತನಾಡುತ್ತಿದ್ದರು. ಇದೇ ವೇಳೆ ಅವರ ಮೊಬೈಲ್ಗೆ ಕರೆ ಬಂದಿತ್ತು. ಅವರು, ಮಾತನಾಡುತ್ತಾ ಪಾಯ ತೋಡುತ್ತಿದ್ದ ಜಾಗದತ್ತ ಹೋಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಹಿಂದಿನ ಗೇಟಿನಿಂದ ಒಳಗೆ ಬಂದ ದುಷ್ಕರ್ಮಿಗಳು ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.</p>.<p>ದುಷ್ಕರ್ಮಿಯೊಬ್ಬ, ಮೊದಲಿಗೆ ಮಚ್ಚಿನಿಂದ ಹೊಟ್ಟೆಗೆ ಹೊಡೆದು ಅವರನ್ನು ಪಾಯಕ್ಕೆ ತಳ್ಳಿದ್ದ. ಪಾಯದಲ್ಲಿ ಬೀಳುತ್ತಿದ್ದಂತೆ ಕತ್ತಿನ ಮೇಲೆ ಹೊಡೆದಿದ್ದ. ನರಳಾಟ ಕೇಳಿ, ದೇವಸ್ಥಾನದ ಎದುರಿನಲ್ಲಿದ್ದವರು ಸ್ಥಳಕ್ಕೆ ಓಡಿಬಂದರು. ದುಷ್ಕರ್ಮಿಗಳ ಮೇಲೆ ಕಲ್ಲು ತೂರಿದರು. ಅವರಿಗೆಲ್ಲ ಮಚ್ಚು ತೋರಿಸಿ ಬೆದರಿಸಿದ ದುಷ್ಕರ್ಮಿಗಳು, ಸ್ಥಳದಿಂದ ಪರಾರಿಯಾದರು.</p>.<p>ರಕ್ತದ ಮಡುವಿನಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಪರೀಕ್ಷೆ ನಡೆಸಿದ ವೈದ್ಯರು ಹೇಳಿದರು ಎಂದು ಅವರ ಬಾಮೈದ ಅಪ್ಪು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಹೊಟ್ಟೆ ಹಾಗೂ ಕತ್ತಿನ ಭಾಗದಲ್ಲಿ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ನಸುಕಿನಲ್ಲಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಘಟನೆ ಬಗ್ಗೆ ಕದಿರೇಶ್ ಸಹೋದರ ಸುರೇಶ್ ದೂರು ನೀಡಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದರು.</p>.<p><strong>ಪಾಯದಲ್ಲಿ ರಕ್ತ</strong></p>.<p>ಪ್ರತ್ಯಕ್ಷದರ್ಶಿಯೊಬ್ಬರ ಮಾಹಿತಿಯಂತೆ ಕಾಟನ್ಪೇಟೆ ಪೊಲೀಸರು, ಸ್ಥಳಕ್ಕೆ ಬಂದಾಗ ಪಾಯದಲ್ಲಿ ರಕ್ತ ಬಿದ್ದಿದ್ದು ಕಂಡಿತು. ಪೊಲೀಸರು ಸಾಕ್ಷ್ಯ ನಾಶವಾಗದಂತೆ ತಡೆಯುವ ಸಲುವಾಗಿ ಪಾಯಕ್ಕೆ ಟಾರ್ಪಲ್ ಹೊದಿಸಿದರು. ದೇವಸ್ಥಾನದ ಎರಡೂ ಗೇಟ್ಗಳನ್ನು ಬಂದ್ ಮಾಡಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಿದರು.</p>.<p>ಬೆರಳಚ್ಚು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ರಕ್ತಸಿಕ್ತವಾದ ಮಣ್ಣನ್ನು ಸಂಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್ನ ಬಿಜೆಪಿ ಸದಸ್ಯೆ ರೇಖಾ ಅವರ ಪತಿ ಎಸ್.ಕದಿರೇಶ್ (47) ಅವರನ್ನು ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ಹೊಡೆದು ಬುಧವಾರ ಹಾಡಹಗಲೇ ಹತ್ಯೆ ಮಾಡಿದ್ದಾರೆ.</p>.<p>ಕಾಟನ್ಪೇಟೆಯ ಆಂಜನಪ್ಪ ಗಾರ್ಡನ್ನಲ್ಲಿ ವಾಸವಿದ್ದ ಕದಿರೇಶ್, ಮನೆ ಸಮೀಪದ ಮುನೀಶ್ವರ ದೇವಸ್ಥಾನಕ್ಕೆ ಮಧ್ಯಾಹ್ನ 3.30ರ ಸುಮಾರಿಗೆ ಹೋಗಿದ್ದರು. ದೇವಸ್ಥಾನದ ಆವರಣದಲ್ಲೇ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ.</p>.<p>ಅವರು ಬಿಜೆಪಿ ಎಸ್.ಸಿ.ಮೋರ್ಚಾದ ಚಾಮರಾಜಪೇಟೆ ಘಟಕದ ಉಪಾಧ್ಯಕ್ಷ. ಅವರ ಪತ್ನಿ ರೇಖಾ ಎರಡನೇ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆ ಆಗಿದ್ದರು. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.</p>.<p><strong>ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ದಾಳಿ:</strong></p>.<p>ಆಂಜನಪ್ಪ ಗಾರ್ಡನ್ನ 3ನೇ ಅಡ್ಡರಸ್ತೆಯಲ್ಲಿ ದೇವಸ್ಥಾನ ಇದ್ದು, ಅಲ್ಲಿ ಶಿವರಾತ್ರಿ ಆಚರಣೆಗಾಗಿ ಸಿದ್ಧತೆ ನಡೆದಿದೆ. ಅದರ ಹಿಂಭಾಗದ ಜಾಗದಲ್ಲಿ ಜಿಮ್ ನಿರ್ಮಾಣಕ್ಕೆ ಪಾಯ ತೊಡಲಾಗುತ್ತಿದೆ. ಇದನ್ನು ವೀಕ್ಷಿಸಲು ಕದಿರೇಶ್ ಸ್ಥಳಕ್ಕೆ ತೆರಳಿದ್ದರು.</p>.<p>ದೇವಸ್ಥಾನದ ಮುಂಭಾಗದಲ್ಲಿ ಸೇರಿದ್ದ 10 ಮಂದಿ ಅಗ್ನಿಕುಂಡ ನಿರ್ಮಾಣದಲ್ಲಿ ನಿರತರಾಗಿದ್ದರು. ಅವರೊಂದಿಗೆ ಕದಿರೇಶ್ ಮಾತನಾಡುತ್ತಿದ್ದರು. ಇದೇ ವೇಳೆ ಅವರ ಮೊಬೈಲ್ಗೆ ಕರೆ ಬಂದಿತ್ತು. ಅವರು, ಮಾತನಾಡುತ್ತಾ ಪಾಯ ತೋಡುತ್ತಿದ್ದ ಜಾಗದತ್ತ ಹೋಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಹಿಂದಿನ ಗೇಟಿನಿಂದ ಒಳಗೆ ಬಂದ ದುಷ್ಕರ್ಮಿಗಳು ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.</p>.<p>ದುಷ್ಕರ್ಮಿಯೊಬ್ಬ, ಮೊದಲಿಗೆ ಮಚ್ಚಿನಿಂದ ಹೊಟ್ಟೆಗೆ ಹೊಡೆದು ಅವರನ್ನು ಪಾಯಕ್ಕೆ ತಳ್ಳಿದ್ದ. ಪಾಯದಲ್ಲಿ ಬೀಳುತ್ತಿದ್ದಂತೆ ಕತ್ತಿನ ಮೇಲೆ ಹೊಡೆದಿದ್ದ. ನರಳಾಟ ಕೇಳಿ, ದೇವಸ್ಥಾನದ ಎದುರಿನಲ್ಲಿದ್ದವರು ಸ್ಥಳಕ್ಕೆ ಓಡಿಬಂದರು. ದುಷ್ಕರ್ಮಿಗಳ ಮೇಲೆ ಕಲ್ಲು ತೂರಿದರು. ಅವರಿಗೆಲ್ಲ ಮಚ್ಚು ತೋರಿಸಿ ಬೆದರಿಸಿದ ದುಷ್ಕರ್ಮಿಗಳು, ಸ್ಥಳದಿಂದ ಪರಾರಿಯಾದರು.</p>.<p>ರಕ್ತದ ಮಡುವಿನಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಪರೀಕ್ಷೆ ನಡೆಸಿದ ವೈದ್ಯರು ಹೇಳಿದರು ಎಂದು ಅವರ ಬಾಮೈದ ಅಪ್ಪು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಹೊಟ್ಟೆ ಹಾಗೂ ಕತ್ತಿನ ಭಾಗದಲ್ಲಿ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ನಸುಕಿನಲ್ಲಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಘಟನೆ ಬಗ್ಗೆ ಕದಿರೇಶ್ ಸಹೋದರ ಸುರೇಶ್ ದೂರು ನೀಡಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದರು.</p>.<p><strong>ಪಾಯದಲ್ಲಿ ರಕ್ತ</strong></p>.<p>ಪ್ರತ್ಯಕ್ಷದರ್ಶಿಯೊಬ್ಬರ ಮಾಹಿತಿಯಂತೆ ಕಾಟನ್ಪೇಟೆ ಪೊಲೀಸರು, ಸ್ಥಳಕ್ಕೆ ಬಂದಾಗ ಪಾಯದಲ್ಲಿ ರಕ್ತ ಬಿದ್ದಿದ್ದು ಕಂಡಿತು. ಪೊಲೀಸರು ಸಾಕ್ಷ್ಯ ನಾಶವಾಗದಂತೆ ತಡೆಯುವ ಸಲುವಾಗಿ ಪಾಯಕ್ಕೆ ಟಾರ್ಪಲ್ ಹೊದಿಸಿದರು. ದೇವಸ್ಥಾನದ ಎರಡೂ ಗೇಟ್ಗಳನ್ನು ಬಂದ್ ಮಾಡಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಿದರು.</p>.<p>ಬೆರಳಚ್ಚು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ರಕ್ತಸಿಕ್ತವಾದ ಮಣ್ಣನ್ನು ಸಂಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>