ಶಿರಸಿ: ಅಂಗಡಿಗೆ ಆಕಸ್ಮಿಕ ಬೆಂಕಿಬಿದ್ದು ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮಗೊಂಡಿವೆ.
ಇಲ್ಲಿನ ನಿಲೇಕಣಿಯಲ್ಲಿರುವ ವಾಮನ ಮೂಡಲಗಿ ಅವರಿಗೆ ಸೇರಿದ ಜಾಗದಲ್ಲಿ ತಿಮ್ಮಪ್ಪ ರಾಮಚಂದ್ರ ಕುಮಟಾ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ರಾತ್ರಿ 10.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು.
ಅಂಗಡಿ ಒಳಗಿದ್ದ ₹15ಸಾವಿರ ನಗದು, ₹10ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಸಮೀಪದಲ್ಲಿಯೇ ಪೆಟ್ರೋಲ್ ಬಂಕ್ ಇದ್ದಿದ್ದರಿಂದ ಬೆಂಕಿಯ ಜ್ವಾಲೆ ಜೋರಾಗುತ್ತಿದ್ದಂತೆ ಸುತ್ತಲಿನ ಜನ ಆತಂಕಗೊಂಡರು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದರು.