</p><p>ಸ್ಥಳೀಯರು ಹೇಳುವ ಪ್ರಕಾರ, ಬೆಳಿಗ್ಗೆ 10ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ಪೋಷಕರು ಪರಸ್ಪರ ದೂಷಿಸಲು ಆರಂಭಿಸಿದರು. ಸವಿತಾ ತಮ್ಮ ಚೀಲದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಂದಿದ್ದರು. ಅವರ ವರ್ತನೆಯನ್ನು ಖಂಡಿಸಿ ಕ್ಷಮೆ ಕೇಳುವಂತೆ ಸಭೆಯಲ್ಲಿದ್ದ ಮುಖಂಡರು ಒತ್ತಾಯಿಸಿದರು. ಆದರೆ, ಇದಕ್ಕೆ ಒಪ್ಪದ ಅವರು ಕೆಂಡಾಮಂಡಲವಾಗಿ, ಚೀಲದಿಂದ ಕಲ್ಲನ್ನು ತೆಗೆದು ಪೋಷಕರ ಮೇಲೆ ತೂರಲು ಆರಂಭಿಸಿದರು. ಅವರೊಂದಿಗಿದ್ದ ಅಜ್ಜಿಯೂ ಜಗಳಕ್ಕಿಳಿದರು. ಇದರಿಂದ ಅಲ್ಲಿದ್ದವರೂ ಆಕ್ರೋಶಗೊಂಡು ಪ್ರತಿಯಾಗಿ ಸವಿತಾ ಅವರಿಗೆ ಹೊಡೆದರು. ಬಳಿಕ ಪೋಷಕರು ಶಾಲಾ ಆವರಣದಲ್ಲಿದ್ದ ದೂಳು, ಮರಳು, ಕೋಲುಗಳನ್ನು ಪರಸ್ಪರರ ಮೇಲೆ ತೂರಾಡಿಕೊಂಡರು.</p><p>ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಸವಿತಾ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಹಾಗೇರ್ ದೂರು ನೀಡಿದ್ದಾರೆ ಎಂದು ಅಂಕೋಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.</p></p>