ಬೆಂಗಳೂರು: ಹಿರಿಯ ಏಳು ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರನ್ನು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಅಜಯ್ ನಾಗಭೂಷಣ್ ಅವರನ್ನು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ
ಉಳಿದಂತೆ ವರ್ಗಾವಣೆಗೊಂಡವರು:
ಸಲ್ಮಾ ಫಾಹಿಮಾ - ಹೆಚ್ಚುವರಿ ಕಾರ್ಯದರ್ಶಿ, ಮೂಲಸೌಕರ್ಯ ಇಲಾಖೆ
ಕನಗವಲ್ಲಿ ಎಂ.– ಪರೀಕ್ಷಾ ನಿಯಂತ್ರಕರು, ಕೆಪಿಎಸ್ಸಿ
ರಘುನಂದನ ಮೂರ್ತಿ- ಹೆಚ್ಚುವರಿ ಆಯುಕ್ತ (ಜಾರಿ), ವಾಣಿಜ್ಯ ತೆರಿಗೆ ಇಲಾಖೆ
ಅರ್ಚನಾ ಎಂ. ಎಸ್ - ಸದಸ್ಯರು, ಕೆಎಟಿ
ರಮ್ಯಾ ಎಸ್- ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ