ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2017ರ ನಂತರ ಕರ್ನಾಟಕದಲ್ಲಿ ಮರಳಿನ ಸಮಸ್ಯೆ ಎದುರಾಗಿತ್ತು. ಜಾಗತಿಕ ಟೆಂಡರ್ ಮೂಲಕ ಎಂಎಸ್ಐಎಲ್ ಮೂಲಕ ವಿದೇಶದಿಂದ 1.03 ಲಕ್ಷ ಟನ್ ಮರಳು ತರಿಸಲಾಗಿತ್ತು. ಮರಳು ಮಾರಾಟದಿಂದ ಸಂಸ್ಥೆಗೆ ₹40 ಕೋಟಿ ಬಂದಿದೆ. ₹10.80 ಕೋಟಿ ಬಾಕಿ ಬರಬೇಕಿದೆ. ಮರಳು ಸರಬರಾಜು ಮಾಡಿದ ಗುತ್ತಿಗೆ ಕಂಪನಿಗೆ ₹14.81 ಕೋಟಿ ನೀಡಲಾಗಿದೆ. ಬಾಕಿ ಮರಳು ಮಾರಾಟದ ನಂತರ ಲಾಭ–ನಷ್ಟದ ಲೆಕ್ಕ ಸಿಗಲಿದೆ. ನಷ್ಟವಾಗಿರುವುದು ದೃಢಪಟ್ಟರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.