<p><strong>ಬೆಂಗಳೂರು</strong>: ರಾಜ್ಯದ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನೆಯ ಅನುಭವ ನೀಡಿದೆ. ಕೆಲವೆಡೆ ಮಳೆ ಆರ್ಭಟ ಹೆಚ್ಚಿದೆ. ಸಿಡಿಲಿಗೆ ಮೂವರು ಮೃತಪಟ್ಟಿದ್ದಾರೆ. ಒಂದು ಎತ್ತು, ಏಳು ಕುರಿಗಳು ಸತ್ತಿವೆ. </p><p><strong>ಕೊಪ್ಪಳ ವರದಿ: </strong>ಕೊಪ್ಪಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಬಂದ ಮಳೆ ಜನರ ಸಂಭ್ರಮಕ್ಕೆ ಕಾರಣವಾಯಿತು. ಯಲಬುರ್ಗಾ ತಾಲ್ಲೂಕಿನ ಕೋನಸಾಗರ ದಲ್ಲಿ ಸಿಡಿಲು ಬಡಿದು ಕುರಿ ಮೇಯಿಸು ತ್ತಿದ್ದ ಶ್ರೀನಿವಾಸ ಗೊಲ್ಲರ (16) ಮೃತಪಟ್ಟಿದ್ದಾರೆ.</p><p>ತಾಲ್ಲೂಕಿನ ಇರಕಲ್ಲಗಡದಲ್ಲಿ ರಾಮಣ್ಣ ಬಿನ್ನಿ ಅವರಿಗೆ ಸೇರಿದ ಒಂದು ಎತ್ತು, ಏಳು ಕುರಿ ಮೃತಪಟ್ಟಿವೆ.</p><p><strong>ಬೀದರ್ ವರದಿ: </strong>ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ತಾಲ್ಲೂಕಿನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಗಾಳಿ ಸಮೇತ ಬಿರುಸಿನ ಮಳೆಯಾಗಿದೆ. ಭಾಲ್ಕಿ ತಾಲ್ಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಸಿಡಿಲಿಗೆ ರೈತ ಸುನಿಲ್ ವಿಜಯಕುಮಾರ ಮಗರೆ (32) ಮೃತಪಟ್ಟಿದ್ದಾರೆ. </p><p><strong>ಕಲಬುರಗಿ ವರದಿ:</strong> ಜಿಲ್ಲೆಯ ಆಳಂದ ತಾಲ್ಲೂಕಿನ ದೇವಂತಗಿ ಗ್ರಾಮದಲ್ಲಿ ಚಂದ್ರಕಾಂತ ಬಸವರಾಜ ಭಜಂತ್ರಿ (12) ಸಿಡಿಲು ಬಡಿದು ಮೃತಪಟ್ಟರು. ಜಿಲ್ಲೆಯಲ್ಲಿ ಕಮಲಾಪುರ, ಕಾಳಗಿ, ಚಿಂಚೋಳಿ ಸೇರಿ ಇತರೆಡೆಯೂ ಸಾಧಾರಣ ಮಳೆಯಾಗಿದೆ.</p><p>ರಾಯಚೂರು ಜಿಲ್ಲೆಯ ಹಟ್ಟಿಚಿನ್ನದಗಣಿ ಹಾಗೂ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.</p><p><strong>ಚಿತ್ರದುರ್ಗ ವರದಿ: </strong>ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆ ಯಾಯಿತು. ಬೆಳಿಗ್ಗೆಯಿಂದಲೇ ಬಿಸಿಲಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ದಟ್ಟ ಮೋಡ ಕವಿದು ಮಳೆ ಸುರಿಯಿತು.</p><p>ನಾಯಕನಹಟ್ಟಿಯಲ್ಲಿ 45 ನಿಮಿಷ ಮಳೆಯಾಗಿದ್ದು, ತಂಪೆರೆಯಿತು.<br>ರಾಮದುರ್ಗದಲ್ಲಿ ಸಿಡಿಲು ಬಡಿದು ಮರದ ಕೆಳಗೆ ನಿಂತಿದ್ದ ಮಂಜುನಾಥ, ರಾಮು ಅವರಿಗೆ ಸುಟ್ಟ ಗಾಯಗಳಾಗಿವೆ. ಸಮೀಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. </p><p><strong>ಮಡಿಕೇರಿ ವರದಿ:</strong> ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಗೋಣಿಕೊಪ್ಪಲು, ವಿರಾಜಪೇಟೆ, ಸಿದ್ದಾಪುರ ಭಾಗಗಳಲ್ಲಿ ಸುಮಾರು 30 ನಿಮಿಷ ಬಿರುಸಿನ ಮಳೆಯಾಯಿತು. ಬಾಡುತ್ತಿದ್ದ ಕಾಫಿ ತೋಟಗಳು ನಳನಳಿಸುವಂತಾಯಿತು. </p><p>ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಹೊರೂರು, ಮಾದಾಪುರ, ಚೆಟ್ಟಳಿ, ದೇವರಪುರ, ತಿತಿಮತಿ, ಅತ್ತೂರು, ಭದ್ರಗೋಳ, ಅರುವತ್ತೊಕ್ಕಲು, ಕೈಕೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. </p><p><strong>ಹುಬ್ಬಳ್ಳಿ ವರದಿ: </strong>ಉತ್ತರ ಕರ್ನಾಟಕದ ಧಾರವಾಡ, ಬಳ್ಳಾರಿ, ವಿಜಯಪುರ ಮತ್ತು ಜಿಲ್ಲೆಗಳ ವಿವಿಧೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಯಾಗಿದೆ. </p><p>ಗದಗ ಜಿಲ್ಲೆಯ ರೋಣ ತಾಲ್ಲೂಕಿನ ವಿವಿಧೆಡೆಯೂ ಭಾರಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಹಲವೆಡೆ ತಗಡಿನ ಚಾವಣಿ ಹಾರಿವೆ. </p><p>ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಾದ್ಯಂತ ಬಿರುಗಾಳಿ ಸಹಿತ ಮಳಯಾಗಿದ್ದು, 50ಕ್ಕೂ ಹೆಚ್ಚು ಪತ್ರಾಸ್ ಮನೆಗಳಿಗೆ ಹಾನಿಯಾಗಿದೆ.</p><p>ಪಟ್ಟಣದ ಎಂಇಎಸ್ ಐಟಿಐ ಕಾಲೇಜಿನಲ್ಲಿ ಕೊಠಡಿಗೆ ಮಳೆ ನೀರು ಹರಿದಿದ್ದು, ಕಂಪ್ಯೂಟರ್, ಕಾಗದ ಪತ್ರಗಳು ಹಾಳಾದವು. ವಿವಿಧೆಡೆ ಪತ್ರಾಸ್ ಮನೆ ಹಾಣಿಯಾಗಿದೆ. ಮರಗಳು ಉರುಳಿವೆ. ನಿಂಬೆ ಗಿಡಗಳಿಗೂ ಹಾನಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನೆಯ ಅನುಭವ ನೀಡಿದೆ. ಕೆಲವೆಡೆ ಮಳೆ ಆರ್ಭಟ ಹೆಚ್ಚಿದೆ. ಸಿಡಿಲಿಗೆ ಮೂವರು ಮೃತಪಟ್ಟಿದ್ದಾರೆ. ಒಂದು ಎತ್ತು, ಏಳು ಕುರಿಗಳು ಸತ್ತಿವೆ. </p><p><strong>ಕೊಪ್ಪಳ ವರದಿ: </strong>ಕೊಪ್ಪಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಬಂದ ಮಳೆ ಜನರ ಸಂಭ್ರಮಕ್ಕೆ ಕಾರಣವಾಯಿತು. ಯಲಬುರ್ಗಾ ತಾಲ್ಲೂಕಿನ ಕೋನಸಾಗರ ದಲ್ಲಿ ಸಿಡಿಲು ಬಡಿದು ಕುರಿ ಮೇಯಿಸು ತ್ತಿದ್ದ ಶ್ರೀನಿವಾಸ ಗೊಲ್ಲರ (16) ಮೃತಪಟ್ಟಿದ್ದಾರೆ.</p><p>ತಾಲ್ಲೂಕಿನ ಇರಕಲ್ಲಗಡದಲ್ಲಿ ರಾಮಣ್ಣ ಬಿನ್ನಿ ಅವರಿಗೆ ಸೇರಿದ ಒಂದು ಎತ್ತು, ಏಳು ಕುರಿ ಮೃತಪಟ್ಟಿವೆ.</p><p><strong>ಬೀದರ್ ವರದಿ: </strong>ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ತಾಲ್ಲೂಕಿನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಗಾಳಿ ಸಮೇತ ಬಿರುಸಿನ ಮಳೆಯಾಗಿದೆ. ಭಾಲ್ಕಿ ತಾಲ್ಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಸಿಡಿಲಿಗೆ ರೈತ ಸುನಿಲ್ ವಿಜಯಕುಮಾರ ಮಗರೆ (32) ಮೃತಪಟ್ಟಿದ್ದಾರೆ. </p><p><strong>ಕಲಬುರಗಿ ವರದಿ:</strong> ಜಿಲ್ಲೆಯ ಆಳಂದ ತಾಲ್ಲೂಕಿನ ದೇವಂತಗಿ ಗ್ರಾಮದಲ್ಲಿ ಚಂದ್ರಕಾಂತ ಬಸವರಾಜ ಭಜಂತ್ರಿ (12) ಸಿಡಿಲು ಬಡಿದು ಮೃತಪಟ್ಟರು. ಜಿಲ್ಲೆಯಲ್ಲಿ ಕಮಲಾಪುರ, ಕಾಳಗಿ, ಚಿಂಚೋಳಿ ಸೇರಿ ಇತರೆಡೆಯೂ ಸಾಧಾರಣ ಮಳೆಯಾಗಿದೆ.</p><p>ರಾಯಚೂರು ಜಿಲ್ಲೆಯ ಹಟ್ಟಿಚಿನ್ನದಗಣಿ ಹಾಗೂ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.</p><p><strong>ಚಿತ್ರದುರ್ಗ ವರದಿ: </strong>ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆ ಯಾಯಿತು. ಬೆಳಿಗ್ಗೆಯಿಂದಲೇ ಬಿಸಿಲಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ದಟ್ಟ ಮೋಡ ಕವಿದು ಮಳೆ ಸುರಿಯಿತು.</p><p>ನಾಯಕನಹಟ್ಟಿಯಲ್ಲಿ 45 ನಿಮಿಷ ಮಳೆಯಾಗಿದ್ದು, ತಂಪೆರೆಯಿತು.<br>ರಾಮದುರ್ಗದಲ್ಲಿ ಸಿಡಿಲು ಬಡಿದು ಮರದ ಕೆಳಗೆ ನಿಂತಿದ್ದ ಮಂಜುನಾಥ, ರಾಮು ಅವರಿಗೆ ಸುಟ್ಟ ಗಾಯಗಳಾಗಿವೆ. ಸಮೀಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. </p><p><strong>ಮಡಿಕೇರಿ ವರದಿ:</strong> ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಗೋಣಿಕೊಪ್ಪಲು, ವಿರಾಜಪೇಟೆ, ಸಿದ್ದಾಪುರ ಭಾಗಗಳಲ್ಲಿ ಸುಮಾರು 30 ನಿಮಿಷ ಬಿರುಸಿನ ಮಳೆಯಾಯಿತು. ಬಾಡುತ್ತಿದ್ದ ಕಾಫಿ ತೋಟಗಳು ನಳನಳಿಸುವಂತಾಯಿತು. </p><p>ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಹೊರೂರು, ಮಾದಾಪುರ, ಚೆಟ್ಟಳಿ, ದೇವರಪುರ, ತಿತಿಮತಿ, ಅತ್ತೂರು, ಭದ್ರಗೋಳ, ಅರುವತ್ತೊಕ್ಕಲು, ಕೈಕೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. </p><p><strong>ಹುಬ್ಬಳ್ಳಿ ವರದಿ: </strong>ಉತ್ತರ ಕರ್ನಾಟಕದ ಧಾರವಾಡ, ಬಳ್ಳಾರಿ, ವಿಜಯಪುರ ಮತ್ತು ಜಿಲ್ಲೆಗಳ ವಿವಿಧೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಯಾಗಿದೆ. </p><p>ಗದಗ ಜಿಲ್ಲೆಯ ರೋಣ ತಾಲ್ಲೂಕಿನ ವಿವಿಧೆಡೆಯೂ ಭಾರಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಹಲವೆಡೆ ತಗಡಿನ ಚಾವಣಿ ಹಾರಿವೆ. </p><p>ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಾದ್ಯಂತ ಬಿರುಗಾಳಿ ಸಹಿತ ಮಳಯಾಗಿದ್ದು, 50ಕ್ಕೂ ಹೆಚ್ಚು ಪತ್ರಾಸ್ ಮನೆಗಳಿಗೆ ಹಾನಿಯಾಗಿದೆ.</p><p>ಪಟ್ಟಣದ ಎಂಇಎಸ್ ಐಟಿಐ ಕಾಲೇಜಿನಲ್ಲಿ ಕೊಠಡಿಗೆ ಮಳೆ ನೀರು ಹರಿದಿದ್ದು, ಕಂಪ್ಯೂಟರ್, ಕಾಗದ ಪತ್ರಗಳು ಹಾಳಾದವು. ವಿವಿಧೆಡೆ ಪತ್ರಾಸ್ ಮನೆ ಹಾಣಿಯಾಗಿದೆ. ಮರಗಳು ಉರುಳಿವೆ. ನಿಂಬೆ ಗಿಡಗಳಿಗೂ ಹಾನಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>